ರಾಣೆಬೇನ್ನೂರು: ನಗರಸಭೆಯಲ್ಲಿ ಮಂಗಳವಾರ ಆಯೋಜನೆ ಮಾಡಿದ್ದ ಸಾಮಾನ್ಯ ಸಭೆಯಲ್ಲಿ ನೂತನ ಸ್ಥಾಯಿ ಸಮಿತಿಯ ಅನುಮೋದನೆ ವಿಚಾರವಾಗಿ ಬಂಡಾಯ ಬಿಜೆಪಿ ಹಾಗೂ ಸಮಿಶ್ರ ಆಡಳಿತ ಸದಸ್ಯರ ನಡುವೆ ಕಿತ್ತಾಟ, ಕಿರಚಾಟ ನಡುವೆ ಅನುಮೋದನೆ ನೀಡಲಾಯಿತು.
ಹೌದು ನಗರಸಭೆ ಅಧ್ಯಕ್ಷೆ ಚಂಪಕಾ ಬೀಸಲಹಳ್ಳಿ ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಾಮಾನ್ಯ ಸಭೆಯಲ್ಲಿ ಈ ದೃಶ್ಯ ಕಂಡು ಬಂದಿತು.
ಸಾಮಾನ್ಯ ಸಭೆ ಪ್ರಾರಂಭವಾಗುವ ಮುಂಚೆ ಸದಸ್ಯರಾದ ಪ್ರಕಾಶ ಬುರಡಿಕಟ್ಟಿ ಅವರು ಫೆ.20 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಮುಂದೂಡಿದ ವಿಷಯಗಳನ್ನ ಹೊರತು ಪಡಿಸಿ ಬೇರೆ ವಿಷಯಗಳನ್ನು ಸೇರಿಸಿ ಸಾಮಾನ್ಯ ಸಭೆ ಮಾಡಬಾರದು ಎಂದು ಅಧ್ಯಕ್ಷೆ ಚಂಪಕಾ ಬೀಸಲಹಳ್ಳಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಮಯದಲ್ಲಿ ಆಡಳಿತ ಪಕ್ಷದ ಸದಸ್ಯರು ಅದನ್ನು ಇನವಾರ್ಡ್(ಆವಕ ವಿಭಾಗ) ನೀಡಿ ಒಸಿ ಕಾಫಿ ಪಡೆಯುವಂತೆ ಆಗ್ರಹ ಮಾಡಿದರು. ಈ ಸಮಯದಲ್ಲಿ ಸದಸ್ಯರ ನಡುವೆ ಕಿತ್ತಾಟ ಪ್ರಾರಂಭವಾದ ಆಡಳಿತ ಪಕ್ಷದವರು ವಿಷಯಗಳಿಗೆ ಓದಿ ಅನುಮೋದನೆ ನೀಡುವಂತೆ ಸೂಚಿಸಿದರು. ಇದರಿಂದ ಅಧಿಕಾರಿಗಳು ವಿಷಯಗಳನ್ನು ಓದಲು ಪ್ರಾರಂಭ ಮಾಡಿದಾಗ ಕೆಲ ಸದಸ್ಯರು ವಿರೋಧ ಮಾಡಿದಾಗ ಸಭೆಯಲ್ಲಿ ಗದ್ದಲದ ಪರಿಸ್ಥಿತಿ ಉಂಟಾಯಿತು.
ನಂತರ ನಗರಸಭೆ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ ನಗರಸಭೆ ಸ್ಥಾಯಿ ಸಮಿತಿ ಸೇರಿದಂತೆ ಇತರೆ ಹತ್ತು ವಿಷಯಗಳನ್ನು ಓದಿ ಅನುಮೋದನೆ ಪಡೆದರು. ನಂತರ ಎಲ್ಲಾ ಆಡಳಿತ ಪಕ್ಷದ ಸದಸ್ಯರು ಸಭೆ ಮುಗಿಸಿ ಹೊರ ನಡೆದಾಗ ವಿರೋಧ ಪಕ್ಷದ ಸದಸ್ಯರು ಅಧಿಕಾರಿಗಳು ಹಾಗೂ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
More Stories
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.
ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಮತ್ತು ವೃತ್ತ ಲೋಕಾರ್ಪಣೆ ನಾಡಿದ್ದು