ರಾಣೆಬೇನ್ನೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ಹಣವನ್ನು ಸರ್ಕಾರಿ ಶಾಲೆಗೆ ನೀಡಿದ ಆಶಾ ಕಾರ್ಯಕರ್ತೆ ಗಂಗಮ್ಮ ಅವರು ಈಡಿ ನಾಡಿಗೆ ಪ್ರೇರಣೆಯಾಗಿದ್ದಾರೆ ಎಂದು ಶಾಸಕರಾದ ಪ್ರಕಾಶ್ ಕೋಳಿವಾಡ ಹೇಳಿದರು.
ತಾಲೂಕಿನ ಐರಣಿ ಗ್ರಾಮದಲ್ಲಿ ಗಂಗಮ್ಮ ಲಗುಬಗಿ ಅವರಿಗೆ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರು ಹಾಗೂ ತಾಲ್ಲೂಕು ಗ್ಯಾರಂಟಿ ಅಧ್ಯಕ್ಷರ ಸಮ್ಮುಖದಲ್ಲಿ ಆಯೋಜಿಸಿದ ಸನ್ಮಾನ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಗಂಗಮ್ಮ ಲಗುಬಗೆ ಅವರು ಅತ್ಯಂತ ಕಡುಬಡತನದ ಕುಟುಂಬದವರಾಗಿದ್ದು, ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ₹1,50,000 ರೂ ಸಾಲ ಮಾಡಿ ಒಬ್ಬ ಮಗನನ್ನು ಎಂ.ಎ ಹಾಗೂ ಮತ್ತೊಬ್ಬ ಮಗನನ್ನು ಬಿ.ಎಸ್.ಸಿ ನರ್ಸಿಂಗ್ ಓದಿಸುತಿದ್ದು, ಇಂತಹ ಕಷ್ಟದ ಸಂದರ್ಭದಲ್ಲಿಯೂ ತನ್ನ ಗೃಹಲಕ್ಷ್ಮಿ ಕಂತಿನ ₹24,000 ರೂ ಗಳನ್ನು ತನ್ನೂರಿನ ಸರ್ಕಾರಿ ಶಾಲೆಗೆ ದೇಣಿಗೆ ನೀಡಿರುವುದು ಪದಗಳಲ್ಲಿ ವರ್ಣಿಸಲಾಗದ ಪ್ರಶಂನೀಯ ಕಾರ್ಯವಾಗಿದೆ. ಬಿ.ಎಸ್.ಸಿ ಓದುತ್ತಿರುವ ದಾನಿ ಗಂಗಮ್ಮ ಅವರ ಮಗನ ಶಿಕ್ಷಣ ಮುಗಿಯುತ್ತಿದ್ದಂತೆಯೇ ಅವರಿಗೆ ನೌಕರಿ ಕೊಡಿಸುವುದಾಗಿ ತಿಳಿಸಿದರು.
ಗಂಗಮ್ಮ ಅವರ ಈ ನಡೆಯಿಂದ ಪ್ರೇರಣೆ ಪಡೆದ ಶಾಸಕರು ಹಾಗೂ ಗ್ಯಾರಂಟಿ ಯೋಜನೆಯ ಸದಸ್ಯರು ಒಂದು ತಿಂಗಳ ವೇತನ ಶಿಕ್ಷಣ ಇಲಾಖೆಗೆ ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದರು.
ಇದೆ ಸಮಯದಲ್ಲಿ ಐರಣಿ ಗ್ರಾಮದ ಗಜಾನನ ಸಮಿತಿಯವರು ಸದರಿ ಶಾಲೆಗೆ ₹1,00,000 ರೂ ದೇಣಿಗೆ ನೀಡಿದರು, ಇದೇ ರೀತಿ ಗ್ರಾಮದ ಬುಳ್ಳಜ್ಜನವರು ಶಾಲೆಗೆ ವೈ ಫೈ ವ್ಯವಸ್ಥೆ ಮಾಡಿದ್ದು ಮತ್ತೊಬ್ಬ ಗ್ರಾಮದ ಶಿಕ್ಷಣ ಪ್ರೇಮಿ ಶಾಲೆಗೆ ಸೌಂಡ್ ಸಿಸ್ಟಮ್ ಸೇರಿದಂತೆ ಅನೇಕ ದಾನಿಗಳು ಶಾಲೆಗೆ ಮೂಲಭೂತ ಸೌಕರ್ಯ ಒದಗಿಸಲು ಮುಂದಾಗಿದ್ದಾರೆ. ಐರಣಿ ಗ್ರಾಮದ ಪ್ರಬುದ್ಧ ಮನಸ್ಸುಗಳ ಈ ನಡೆ ರಾಣೆಬೆನ್ನೂರು ತಾಲ್ಲೂಕಿನ ಇತರರಿಗೂ ಮಾದರಿಯಾಗಿದ್ದು, ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಸಹಕಾರ ನೀಡುವ ಮತ್ತಷ್ಟು ಮನಸ್ಸುಗಳು ರಾಣೇಬೆನ್ನೂರು ಮತಕ್ಷೇತ್ರದಲ್ಲಿ ಮುಂದೆ ಬರಲಿ ಎಂದು ಕರೆ ನೀಡಿದ ಶಾಸಕರು, ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳು ನಮ್ಮ ಮಕ್ಕಳಿಗೆ ಬೆಳಕಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.