ರಾಣೆಬೇನ್ನೂರು: ತಾಲೂಕಿನ ಅನಾಮಧೇಯ ವ್ಯಕ್ತಿಯೊರ್ವ ಬೇರೆ ತಾಲೂಕಿನಲ್ಲಿ ನಕಲಿ ಗೊಬ್ಬರ ಮಾರಾಟ ಮಾಡಿದ ಪ್ರಕರಣ ವರದಿಯಾಗಿದ್ದು, ಈ ಹಿನ್ನೆಲೆ ನಗರದ ವಿವಿಧ ಗೊಬ್ಬರ ಗೋದಾಮಿಗಳಿಗೆ ಸಹಾಯಕ ಕೃಷಿ ಅಧಿಕಾರಿ ಶಾಂತಮಣಿ ಹಾಗೂ ಅವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಗರದ ಗೊಬ್ಬರದ ಮಾರಾಟ ಮಾಡುತ್ತಿದ್ದ ವ್ಯಾಪರಿಯೊರ್ವ ಹೂವಿನ ಹಡಗಲಿ ತಾಲ್ಲೂಕಿನಲ್ಲಿ ನಕಲಿ ಗೊಬ್ಬರ ಮಾರಾಟ ಮಾಡಿದ್ದಾನೆ. ಇದರಿಂದ ಆ ವ್ಯಕ್ತಿಯ ಮೇಲೆ ಅನೇಕ ರೈತರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನು ಗಮನಿಸಿದ ರಾಣೆಬೇನ್ನೂರು ತಾಲೂಕಿನ ಕೃಷಿ ಅಧಿಕಾರಿಗಳು ತಕ್ಷಣ ತಡರಾತ್ರಿಯೆ ವಿವಿಧ ಗೋದಾಮಿಗಳಿಗೆ ಭೇಟಿ ನೀಡಿ ಗೊಬ್ಬರ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಯಾವುದೇ ನಕಲಿ ಗೊಬ್ಬರ ಮಾರಾಟ ಮಾಡದಂತೆ ಅಂಗಡಿ ಮಾಲೀಕರಿಗೆ ಸೂಚನೆ ನೀಡಿದ್ದಾರೆ.
ಈ ಒಂದು ಪರಿಶೀಲನೆ ಸಮಯದಲ್ಲಿ ಸಹಾಯಕ ಕೃಷಿ ಅಧಿಕಾರಿ ಶಾಂತಮಣಿ ಜಿ, ಹಾವೇರಿ ಜಿಲ್ಲಾ ವಿಚಕ್ಷಣಾ ದಳದ ಸಹಾಯಕ ಕೃಷಿ ಅಧಿಕಾರಿ ಮಾರುತಿ ಅಂಗರಗಟ್ಟಿ, ಕೃಷಿ ಅಧಿಕಾರಿಗಳಾದ ಬಸವರಾಜ ಎಫ್.ಎಮ್., ವಿರೇಶ ಜೆ.ಎಮ್,ಅರವಿಂದ ಎಮ್ ಭಾಗಿಯಾಗಿದ್ದರು.
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.