ರಾಣೆಬೆನ್ನೂರ: ಇಲ್ಲಿಯ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಆಕಾಂಕ್ಷಿಗಳಲ್ಲಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ಪೈಪೋಟಿ ಜೋರಾಗಿದೆ.
ನಗರಸಭೆಯು ಒಟ್ಟು 35 ಸದಸ್ಯರ ಬಲಾಬಲ ಹೊಂದಿದ್ದು, ಎರಡನೇ ಅವಧಿಗೆ ಮತ್ತೆ ಅಧ್ಯಕ್ಷ ಸ್ಥಾನ ‘ಹಿಂದುಳಿದ ಅ ವರ್ಗ ಮಹಿಳೆ’ ಹಾಗೂ ಉಪಾಧ್ಯಕ್ಷ ಸ್ಥಾನ ‘ಸಾಮಾನ್ಯ’ ವರ್ಗಕ್ಕೆ ಮೀಸಲಾಗಿದೆ.
ಯಾರ್ಯಾರಿಗೆ ಅವಕಾಶ…?
ಬಿಜೆಪಿಯಲ್ಲಿ ಹಿಂದುಳಿದ ಅ (ಮಹಿಳಾ) ವರ್ಗಕ್ಕೆ ಸೇರಿದ 1ನೇ ವಾರ್ಡ್ನ ಸದಸ್ಯೆ ರೂಪಾ ಚಿನ್ನಿಕಟ್ಟಿ, 17ನೇ ವಾರ್ಡ್ನ ಕವಿತಾ ಹೆದ್ದೇರಿ, 22ನೇ ವಾರ್ಡ್ನ ತ್ರಿವೇಣಿ ಪವಾರ , 29ನೇ ವಾರ್ಡ್ನ ಹೊನ್ನವ್ವ ಕಾಟಿ, 15ನೇ ವಾರ್ಡ್ನ ರತ್ನವ್ವ ಪೂಜಾರ ಸೇರಿ 5 ಸದಸ್ಯೆಯರು ಇದ್ದಾರೆ. ಕಾಂಗ್ರೆಸ್ನಲ್ಲಿ 3ನೇ ವಾರ್ಡ್ನ ಚಂಪಕ ಬಿಸಲಹಳ್ಳಿ, ಜಯಶ್ರೀ ಪಿಸೆ ಸೇರಿ ಇಬ್ಬರು ಹಾಗೂ ಕೆಪಿಜೆಪಿಯಲ್ಲಿ 14ನೇ ವಾರ್ಡ್ನ ಸದಸ್ಯೆ ಅರೀಫಾಖಾನಂ ಸೌದಾಗಾರಗೆ ಅವಕಾಶವಿದೆ.
ಕೆಪಿಜೆಪಿ, ಪಕ್ಷೇತರರಿಗೆ ಗಾಳ…
ನಗರಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ 15, ಕಾಂಗ್ರೆಸ್ನಿಂದ 9, ಕೆಪಿಜೆಪಿಯಿಂದ 9 ಹಾಗೂ ಇಬ್ಬರು ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು 18 ಸದಸ್ಯರ ಬೆಂಬಲ ಬೇಕು. 15 ಸದಸ್ಯರ ಬಲ ಹೊಂದಿದ ಬಿಜೆಪಿಗೆ ಅಧಿಕಾರದ ಗದ್ದುಗೆ ಏರಲು ಇನ್ನೂ 3 ಸದಸ್ಯರ ಬೆಂಬಲ ಬೇಕು. ಸಂಸದ ಮತ ಬಂದರೂ ಇನ್ನೂ 2 ಸದಸ್ಯರ ಬೆಂಬಲ ಬೇಕಾಗುತ್ತದೆ. ಹೀಗಾಗಿ ಕೆಪಿಜೆಪಿ ಅಥವಾ ಪಕ್ಷೇತರ ಸದಸ್ಯರಿಗೆ ಗಾಳ ಹಾಕುವುದು ಬಿಜೆಪಿಗೆ ಅನಿವಾರ್ಯವಾಗಿದೆ.
ಇನ್ನೂ ಕಾಂಗ್ರೆಸ್ ಹಾಗೂ ಕೆಪಿಜೆಪಿ ಎರಡೂ ಪಕ್ಷದವರು ತಲಾ 9 ಸದಸ್ಯರನ್ನು ಹೊಂದಿದ್ದಾರೆ. ಎರಡು ಪಕ್ಷದವರೂ ಹೊಂದಾಣಿಕೆ ಮಾಡಿಕೊಂಡರೆ ಪಕ್ಷೇತರ ಸದಸ್ಯರ ಅಗತ್ಯ ಕೂಡ ಇವರಿಗೆ ಬೀಳಲ್ಲ. ಈ ನಿಟ್ಟಿನಲ್ಲಿ ಕಾಂಗ್ರೆಸ್ನವರು ಕೆಪಿಜೆಪಿ ಪಕ್ಷದ ಆಯ್ಕೆಯಾದ ಆರು ಜನ ಸದಸ್ಯರಿಗೆ ಗಾಳ ಹಾಕಿದ್ದಾರೆ ಎನ್ನಲಾಗುತ್ತಿದೆ.
ಬಿಜೆಪಿಯಿಂದ ಕವಿತಾ ಹೆದ್ದೇರಿ, ಹೊನ್ನವ್ವ ಕಾಟಿ ಮತ್ತು ಕಾಂಗ್ರೆಸ್ನಿಂದ ಚಂಪಕ ಬಿಸಲಹಳ್ಳಿ ಹೆಸರು ಅಧ್ಯಕ್ಷ ಸ್ಥಾನದ ಚುನಾವಣೆಗೆ ಮಂಚೂಣಿಯಲ್ಲಿವೆ. ಕಾಂಗ್ರೆಸ್ನ ಚಂಪಕ ಬಿಸಲಹಳ್ಳಿ ಪಕ್ಷದಲ್ಲಿ ಗುರುತಿಸಿಕೊಂಡವರು. ಹೀಗಾಗಿ ಮೂವರಲ್ಲಿ ಭಾರಿ ಪೈಪೋಟಿ ನಡೆದಿದೆ.
ಯಾರ ಪಾಲಿಗೆ ವಾಣಿಜ್ಯ ನಗರಿ ಗದ್ದುಗೆ…?
ನಗರಸಭೆ ಅಧ್ಯಕ್ಷರ ಆಯ್ಕೆಗೆ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರಗೆ ಪ್ರತಿಷ್ಠೆಯಾಗಿದ್ದರೆ ಶಾಸಕ ಪ್ರಕಾಶ ಕೋಳಿವಾಡಗೆ ಅನಿವಾರ್ಯವಾಗಿದೆ. ಆರ್. ಶಂಕರ ಬೆಂಬಲಿತ ಕೆಪಿಜೆಪಿಯ ನಾಲ್ಕು ಸದಸ್ಯರು ಬಿಜೆಪಿಗೆ ಬೆಂಬಲ ನೀಡಿದ್ದರೆ, 5 ಸದಸ್ಯರು ಕಾಂಗ್ರೆಸ್ಗೆ ಬೆಂಬಲ ನೀಡಬಹುದು.
ಒಟ್ಟಾರೆಯಾಗಿ ಬಿಜೆಪಿ ಒಳಜಗಳ ನಡೆದರೆ ಕಾಂಗ್ರೆಸ್ ಪಕ್ಷದಿಂದ ಚಂಪಕಾ ಬೀಸಲಹಳ್ಳಿ ಅಥವಾ ಜಯಶ್ರೀ ಪೀಸೆ ಆಯ್ಕೆಯಾಗಬಹದು.
*
More Stories
ಇಸ್ವತ್ತು ಉತಾರ ನೀಡಲು ಲಂಚ ಪಡೆಯುತ್ತಿದ್ದ ಪಿಡಿಓ, ಉಪಾಧ್ಯಕ್ಷ ಸೇರಿ ಮೂರ ಜನ ಗ್ರಾಪಂ ಸದಸ್ಯರ ಬಂಧನ.
ಸ್ಥಾಯಿ ಸಮಿತಿ ರಚನೆ ನಗರಸಭೆಯಲ್ಲಿ ಕೋಲಾಹಲ ವಿರೋಧ ಪಕ್ಷದ ಸದಸ್ಯರಿಂದ ನ್ಯಾಯಾಲಯದ ಮೋರೆ ಸಾಧ್ಯತೆ
ಮೈಕ್ರೋ ಫೈನಾನ್ಸ್ ನವರ ಕಿರುಕುಳ ಕೊಟ್ರೆ ಕೇಸ್ ಹಾಕ್ತೇವಿ ಶಾಸಕ ಪ್ರಕಾಶ ಕೋಳಿವಾಡ.