ಕೈ-ಕಮಲ ನಡುವೆ ರಾಜಕೀಯ ಪ್ರತಿಷ್ಠೆ; ನಗರಸಭೆ ಸಾಮಾನ್ಯ ಸಭೆ ಮುಂದೂಡಿಕೆ.

ಹಾನಗಲ್ ತಹಸೀಲ್ದಾರ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ.

ಬಿಗರ ಊಟ ಮಾಡಿ ಬರುತ್ತಿದ್ದವರು ಮಸಣಕ್ಕೆ *ನಿಂತಿದ್ದ ಟ್ರ್ಯಾಕ್ಟರ್ ಟ್ರೈಲರ್ ಗೆ ಟಾಟಾ ಸುಪ್ರೋ ಡಿಕ್ಕಿ* *ಸ್ಥಳದಲ್ಲಿಯೆ ಮೂವರ ದುರ್ಮರಣ, 20ಕ್ಕೂ ಅಧಿಕರಿಗೆ ಗಂಭೀರ ಗಾಯ*

ತಾಪಂ ಪ್ರಭಾರ ಇಓ ಬಸವರಾಜ ಶಿಡೇನೂರ ಬಳಿ ಒಂದೂವರೆ ಕೋಟಿ ಆಸ್ತಿ..

ಕಂದಾಯ ನಿರೀಕ್ಷ ಅಶೋಕ‌ ಅರಳೇಶ್ವರ ಬಳಿ ಕೋಟ್ಯಾಂತರ ಆಸ್ತಿ ಪತ್ತೆ.

ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ* *ಸವಣೂರ ತಾಪಂ ಪ್ರಭಾರ ಇಓ, ರಾಣೆಬೆನ್ನೂರ ಆರ್ ಐ ಮನೆ ಮೇಲೆ ದಾಳಿ..

ಚಿರತೆ ದಾಳಿ ಓರ್ವ ರೈತ ಸಾವು. ಇನ್ನೋರ್ವ ನಿಗೆ ಗಂಭೀರ ಗಾಯ.

ಸಮಾಜದಲ್ಲಿ ದುರ್ಬಲರನ್ನ ಗುರುತಿಸುವುದು ನಿಜವಾದ ಪತ್ರಿಕೋದ್ಯಮ; ಮಾಲತೇಶ ಅಂಗೂರು

ವೈದ್ಯನ ಮೇಲೆ ಹಲ್ಲೆ ಮಾಡಿದ 11 ಜನರ ಬಂಧನ..

ಎಸ್ಟಿ ನಕಲಿ ಜಾತಿ ಪ್ರಮಾಣ ಪತ್ರ ವಿತರಣೆ ಹಾಗೂ ಅನ್ಯ ಪ್ರಬಲ ಜಾತಿ ಎಸ್ಟಿ ಸೇರ್ಪಡೆ ವಿರೋಧಿಸಿ ವಾಲ್ಮೀಕಿ ಸಮುದಾಯ ಪ್ರತಿಭಟನೆ.

ಸರಿಯಾದ ಮಾಹಿತಿ ನೀಡುವ ಮೂಲಕ ಸಮೀಕ್ಷೆ ಯಶಸ್ವಿ ಮಾಡಿ ಶಾಸಕ ಪ್ರಕಾಶ ಕೋಳಿವಾಡ

ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಮಾತನಾಡಿದ್ದಾರೆ ಎಂದು ಹಲ್ಲಗೈದ ಯುವಕರು. ಆರೋಪ-ಪ್ರತ್ಯಾರೋಪದ ಪ್ರಕರಣ ದಾಖಲು.

ಪೌರಕಾರ್ಮಿಕರ ಸಮಾಜದ ಸ್ವಚ್ಛ ಮುಖಿಗಳು, ಅಮೂಲ್ಯ ರತ್ನಗಳು ಪೌರಾಯುಕ್ತ ಎಫ್.ಐ.ಇಂಗಳಗಿ

ICAR ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ದೇಶಕ್ಕೆ ಐದನೇ ಸ್ಥಾನ ಗಳಿಸಿದ ಪೋಲಿಸ್ ಪೇದೆ ಪುತ್ರಿ..

ಶಿಕ್ಷಕರಿಗೆ ಶೀಘ್ರವಾಗಿ ಹಳೆ ಪಿಂಚಣಿ ಯೋಜನೆ ಜಾರಿ ಮಾಡುತ್ತವೆ ಸಚಿವ ಮಧು ಬಂಗಾರಪ್ಪ.

ಕವಲೇತ್ತು ಗ್ರಾಪಂನಲ್ಲಿ ಲಕ್ಷಾಂತರ ರೂ ಅವ್ಯವಹಾರ ಮಾಡಿದ ಪಿಡಿಓ.

ಅನುದಾನಿತ ಶಾಲಾ ಶಿಕ್ಷಕರ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಸೆ.14ರಂದು

ಅಕ್ರಮ ಸಂಬಂಧಕ್ಕೆ ಮುಗ್ಧ ಕಂದಮ್ಮನ್ನು ಕೊಂದ ದುರುಳ ಹೆತ್ತ ತಾಯಿ..

ನಕಲಿ ಬೀಜದಂಗಡಿಯವರ ಜತೆ “ಡೀಲ್ ಮಾಡಿಕೊಂಡಿಲ್ಲ” ಶಾಸಕ ಪ್ರಕಾಶ ಕೋಳಿವಾಡ ಆಕ್ರೋಶ.

ಅನುಭವ ಮಂಟಪ ಮಾದರಿ ಗಣಪತಿ ಸಮಿತಿ ವತಿಯಿಂದ ರಕ್ತದಾನ ಶಿಬಿರ

ಸಮಾಜದಲ್ಲಿ ದುರ್ಬಲರನ್ನ ಗುರುತಿಸುವುದು ನಿಜವಾದ ಪತ್ರಿಕೋದ್ಯಮ; ಮಾಲತೇಶ ಅಂಗೂರು

ರಾಣೆಬೆನ್ನೂರ: ಸಮಾಜದಲ್ಲಿರುವ ದುರ್ಬಲರು, ನಿರ್ಗತಿಕರು, ಅಸಹಾಯಕರು ಸೇರಿದಂತೆ ಶ್ರೀಸಾಮಾನ್ಯರ ಅಹವಾಲುಗಳಿಗೆ ಸ್ಪಂದಿಸಿ ನ್ಯಾಯ ಒದಗಿಸಿ ಕೊಡುವ ಗುರುತರವಾದ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದು ಕರ್ನಾಟಕ ಸರ್ಕಾರದ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ, ಛಾಯಾಗ್ರಹಕ ಮಾಲತೇಶ ಅಂಗೂರ ಹೇಳಿದರು.

ಶನಿವಾರದಂದು ನಗರದ ನಿರೀಕ್ಷಣ ಮಂದಿರದಲ್ಲಿ ವಿವಿಧ ರೈತ, ಕನ್ನಡಪರ ಹಾಗೂ ಮಹಿಳಾ ಸಂಘಟನೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಅಭಿನಂದನಾ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಪತ್ರಕರ್ತರಿಗೆ ಹಾಗೂ ಬರಹಗಾರರಿಗೆ ಅತ್ಯದ್ಭುತವಾದ ದಿವ್ಯಶಕ್ತಿ ಇದೆ. ಅಂತಹ ಶಕ್ತಿಯನ್ನು ಸದ್ಬಳಕೆ ಮಾಡಿಕೊಂಡು ಜನಸಾಮಾನ್ಯರ ಬದುಕನ್ನು ಹಸನು ಗೊಳಿಸುವ ಪ್ರಾಮಾಣಿಕ ಪ್ರಯತ್ನವನ್ನು ಪತ್ರಕರ್ತರಾದವರು ಮಾಡಿದಾಗ ಮಾತ್ರ ಸಮಾಜ ಸುಧಾರಣೆಯಾಗಲು ಸಾಧ್ಯ ಎಂದರು.

ತಂತ್ರಜ್ಞಾನ ಹಾಗೂ ಆಧುನಿಕತೆ ಹೆಚ್ಚಿದಂತೆಲ್ಲ ಕಾಡುಗಳು ಕಡಿಮೆಯಾಗುತ್ತಿವೆ, ಮರಗಳು ಮಾರಣ ಹೋಮಗಳಾಗುತ್ತಿವೆ, ಪರಿಸರ ಹಾಳಾಗುತ್ತಿದೆ. ಓಜೋನ್ ಪದರು ಛಿದ್ರವಾಗುತ್ತಿದೆ, ನೀರು ಕಲುಷಿತವಾಗಿದೆ. ಇಂತಹ ಸಂದರ್ಭದಲ್ಲಿ ಶುದ್ಧ ಗಾಳಿ, ಉತ್ತಮ ಪರಿಸರ ಪಡೆಯಲು ಜನಸಾಮಾನ್ಯರುನಲಗುವಂತಾಗಿದೆ.
ಪರಿಸರದ ಏರಿಳಿತದ ಪರಿಣಾಮವಾಗಿ ಕಾಡುಗಳಲ್ಲಿನ ಪ್ರಾಣಿಗಳು ನಾಡಿಗೆ ಬರುವಂತಾಗಿವೆ. ಮನುಷ್ಯ ಮತ್ತು ವನ್ಯಜೀವಿಯು ಒಂದು ಸರಪಳಿ ಇದ್ದಂತೆ. ವನ್ಯಜೀವಿ ಮತ್ತು ಪರಿಸರ ಉಳಿದರೆ ಮಾತ್ರ ಮನುಷ್ಯ ಈ ಭೂಮಿಯಲ್ಲಿ ಬದುಕುಳಿಯಲು ಸಾಧ್ಯ. ಈ ದಿಸೆಯಲ್ಲಿ ಸರ್ವರೂ ಪರಿಸರ ಸಂರಕ್ಷಣೆಗೆ ಮುಂದಾಗ ಬೇಕಿರುವುದು ಅನಿವಾರ್ಯವಾಗಿದೆ ಎಂದರು.

ಮುಂದಿನ ಪೀಳಿಗೆಯ ಹಿತ ದೃಷ್ಟಿಯಿಂದ ನಾವುಗಳಿಂದು ಪ್ಲಾಸ್ಟಿಕ್ ಅನ್ನು ತ್ಯಜಿಸಿ ಉತ್ತಮ ಗಾಳಿ, ಗುಣಮಟ್ಟದ ಆಹಾರ, ಪರಿಶುದ್ಧವಾದ ಪರಿಸರ, ಸ್ವಚ್ಚತೆಯ ವಾತಾವರಣ ಇವುಗಳನ್ನು ಉಳಿಸಿ ಬೆಳೆಸಿದರೆ ಮಾತ್ರ ಸಮಸ್ತ ಜೀವಕುಲಕ್ಕೆ ಉಳಿಗಾಲವಿದೆ ಎಂದರು.

ಸರಕಾರವು ನೀಡುವ ಪ್ರಶಸ್ತಿಗಿಂತ ಆತ್ಮಪೂರ್ವಕವಾಗಿ ಹೃದಯಪೂರ್ವಕವಾಗಿ ಜನಸಾಮಾನ್ಯರು, ಸಂಘಟನೆಗಳು ನೀಡುವ ಪ್ರಶಸ್ತಿ ಅಭಿನಂದನೆ, ಸನ್ಮಾನಗಳು ಬಹು ದೊಡ್ಡದಾಗಿ ಜನಮಾನಸದಲ್ಲಿ ಉಳಿಯಲಿವೆ ಎಂದರು.

ಕಾರ್ಯಕ್ರಮದ ಸಂಯೋಜಕ ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ ಮಾಲತೇಶ ಅಂಗೂರವರು ಕಳೆದ ನಾಲ್ಕು ದಶಕಗಳಿಂದ ಪತ್ರಿಕೋದ್ಯಮದಲ್ಲಿ ಏಳು ಬೀಳುಗಳನ್ನು ಕಾಣುತ್ತಾ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟಗಳಲ್ಲಿಯೂ ಸಹ ಅವರ ಛಾಯಾಚಿತ್ರ ಪ್ರದರ್ಶನಗಳು ಸಾಹಿತ್ಯಕ ಕೃತಿಗಳು ಪರಿಚಿತವಾಗಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ಪಿಎಸ್ ಐ ಗಡ್ಡೆಪ್ಪ ಗುಂಜುಟಗಿ, ಸರಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ರಾಜು ಶೀರೂರ, ಶಾಸಕರ ಆಪ್ತ ಸಹಾಯಕ ಮಹೇಶ್ ಕೆಂಚರೆಡ್ಡಿ, ರಮೇಶ್ ಪೂಜಾರ, ರೈತರು, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರಾದ ನಿತ್ಯಾನಂದ ಕುಂದಾಪುರ, ಶಿವಪುತ್ರಪ್ಪ ಮಲ್ಲಾಡದ, ರಮೇಶ್ ಪೂಜಾರ, ಪ್ರಭಾಕರ ಶಿಗ್ಲಿ, ಚಂದ್ರಣ್ಣ ಬೇಡರ, ಹರಿಹರಗೌಡ ಪಾಟೀಲ್, ಕೊಟ್ರೇಶಪ್ಪ ಎಮ್ಮಿ, ಕರಬಸಪ್ಪ ಕೂಲೇರ, ಶಿವುಕುಮಾರ ಜಾಧವ, ಗುರುರಾಜ ಶಿರಹಟ್ಟಿ, ಎಂ.ಚಿರಂಜೀವಿ, ಶಿವಕುಮಾರ ಓಲೇಕಾರ, ಮುಕ್ತೇಶ ಕೂರಗುಂದಮಠ, ಆನಂದ್ ಹುಲಬನ್ನಿ, ಕೆಎಸ್ ನಾಗರಾಜ, ಮುತ್ತಪ್ಪ ಕಂಬಳಿ, ಮಂಜುನಾಥ್ ಕೋಲ್ಕಾರ್, ಶೋಭಾ ಮುದೇನೂರ, ನಾಗಣ್ಣ ಸಣ್ಣಮನಿ, ಈರಣ್ಣ ಹಳ್ಳಳ್ಳೆಪ್ಪನವರ, ಸುರೇಂದ್ರ ಜ್ಯೋತಿ, ಬಸವರಾಜ ಸಾವಕ್ಕನವರ, ಪರಶುರಾಮ ಬಣಕಾರ, ರಮೇಶ್ ಘೋಣಗೇರಿ, ಮತ್ತಿತರರು ಭಾಗವಹಿಸಿದ್ದರು.

ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!