ರಾಣೆಬೇನ್ನೂರು: ದೇವಸ್ಥಾನ ಹಾಗೂ ಇತರೆ ಕಡೆ ಕಳ್ಳತನ ಮಾಡಿದ್ದ ಮಾಲನ್ನು ಹಂಚಿಕೊಳ್ಳುವ ವಿಷಯದಲ್ಲಿ ಗಲಾಟೆ ಮಾಡಿಕೊಂಡ ಸ್ವಂತ ಅಣ್ಣನ ಕೊಲೆ ಮಾಡಿದ್ದ ಘಟನೆ ನಡೆದಿದ್ದು, ಇದೀಗ ಪೋಲಿಸರ ಕಾರ್ಯಾಚರಣೆ ಸಮಯದಲ್ಲಿ ಹೊರಗೆ ಬಿದ್ದಿದೆ.
ಹೌದು ರಾಣೆಬೇನ್ನೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದ ಬಳಿ 2023 ಮೇ,10ರಂದು ರಾಮು ಎಂಬಾತನನ್ನು ಸ್ವಂತ ತಮ್ಮನಾದ ಪ್ರಸಾದ ಹಾಗೂ ಗಂಗಾಪುರ ಗ್ರಾಮದ ಸರ್ಕಾರಿ ನೌಕರನಾಗಿದ್ದ ಶ್ರೀಕಾಂತ್ ಎಂಬುವರು ಕೊಲೆ ಮಾಡಿ ಹೂತಿದ್ದರು. ನಂತರ ಇವರು ತೆಲೆ ಮರೆಸಿಕೊಂಡು ಕಳ್ಳತನ ಮಾಡಿಕೊಂಡ ಓಡಾಡುತ್ತಿದ್ದರು.

ಈ ಸಮಯದಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ವಿಚಾರವಾಗಿ ಪೋಲಿಸರು ಪ್ರದೀಪ್, ಶ್ರೀಕಾಂತ ಹಾಗೂ ಪ್ರಸಾದ ಅವರನ್ನು ಬಂಧಿಸಿದರು. ಪೋಲಿಸರ ವಿಚಾರಣೆ ಸಮಯದಲ್ಲಿ ಭಯಗೊಂಡ ಶ್ರೀಕಾಂತ್ ರಾಮು ಎಂಬಾತನನ್ನು ಕೊಲೆ ಮಾಡಿ ಹೂತಿರುವ ವಿಷಯವನ್ನು ಬಾಯಿಬಿಟ್ಟಿದ್ದರು.
ಇದನ್ನು ಖಚಿತಪಡಿಸಿಕೊಂಡ ಗ್ರಾಮೀಣ ಪೋಲಿಸರ ರಾಮು ತಾಯಿಯಾದ ಯಲ್ಲಮ ಅವರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿ ಇಂದು ಉಪವಿಭಾಗಾಧಿಕಾರಿ ಚನ್ನಪ್ಪ, ತಹಸೀಲ್ದಾರ ಆರ್.ಎಚ್.ಭಾಗವಾನ್,ಗ್ರಾಮೀಣ ಠಾಣೆ ಸಿಪಿಐ ಪ್ರವೀಣಕುಮಾರ ಅವರು ಪಂಚನಾಮೆ ಮಾಡುವ ಮೂಲಕ ರಾಮು ಅವನ ಶವವನ್ನು ಹೂತಿದ್ದ ಜಾಗಕ್ಕೆ ಕರೆದುಕೊಂಡು ಬಂದು ಶವ ಹೊರತಗೆದು ಎಫ್.ಎಸ್.ಎಲ್ ಗೆ ಕಳಿಸಲಾಗಿದೆ.
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.