ಸಿಎಂ ಬದಲಾವಣೆ ವಿಚಾರ ಹೈಕಮಾಂಡಗೆ ಬಿಟ್ಟ ವಿಚಾರ; ಕೆ.ಬಿ.ಕೋಳಿವಾಡ.

ಕಾಂಗ್ರೆಸ್ ಪಕ್ಷ ಹಿಂದುಳಿದ, ದಲಿತರಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೆ ಎಲ್ಲಾ ಸ್ಥಾನಮಾನ ನೀಡಿದೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ.

ಡಿಕೆಶಿ ಭೇಟಿ ಮಾಡಿದ ಹಾವೇರಿ ಜಿಲ್ಲೆಯ ಮೂವರು ಶಾಸಕರು.

ಸ್ಪೆಷಲ್ ತರಗತಿ ನೆಪದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ,ಮಾಸ್ತರ ಎಸ್ಕೇಪ್..!

ಬಿಜೆಪಿ, ಜೆಡಿಎಸ್ ಹಾಗೂ ರೈತ ನಾಯಕ ರವಿಂದ್ರಗೌಡ ಪಾಟೀಲ ನೇತೃತ್ವದಲ್ಲಿ ಬೃಹತ್ ರೈತರ ಹೋರಾಟ.

ನಗರದಲ್ಲಿ NDA ವತಿಯಿಂದ ಕಾಂಗ್ರೆಸ್ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ.

ಬೆಂಬಲ ಬೆಲೆ ನೀಡಲು ಆಗ್ರಹಿಸಿ ಸರ್ಕಾರದ ವಿರುದ್ಧ ನಾಳೆ ಬಿಜೆಪಿ-ಜೆಡಿಎಸ್ ಜಂಟಿ ಪ್ರತಿಭಟನೆ

ಹೆಂಡತಿ ಹೊಡೆದು ಕೊಲೆ ಮಾಡಿದ ಪತಿರಾಯ..

ನಾವು ಯಾರನ್ನು ಟಾರ್ಗೆಟ್ ಮಾಡಲ್ಲ, ಮಾಡಿದ್ರೆ ಬೀಡಲ್ಲ ಎಸ್ಪಿ ಯಶೋಧ ವಂಟಗೋಡಿ.

ದೈಹಿಕ ಸಂಪರ್ಕ ಮಾಡಿ ಯುವತಿಗೆ ಕೈಕೊಟ್ಟ ಯುವಕ. ಯುವತಿ ಆತ್ಮಹತ್ಯೆ ಹುಡಗನ‌ ಮನೆ ಮುಂದೆ ಶವವಿಟ್ಟು ಪ್ರತಿಭಟನೆ..

ತಮ್ಮನ ಸಾವಿನಿಂದ ಮನನೊಂದ ಅಕ್ಕನು ನೇಣಿಗೆ ಶರಣು…!

ಸಚಿವ ಶಿವಾನಂದ ಪಾಟೀರನ್ನ BJP ಎಂದ ರೊಬೋಟ್

ರಾಣೆಬೇನ್ನೂರ ನಗರದಲ್ಲಿ ಭವ್ಯವಾಗಿ ನಡೆದ ಆರ್ ಎಸ್ ಎಸ್ ಪಥ ಸಂಚಲನ, ಒಂದು ಸಾವಿರ ಗಣವೇಷಧಾರಿಗಳು ಭಾಗಿ

ಎರಡು ವರ್ಷದಲ್ಲಿ ಎಷ್ಟು ಬಾರಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಗೆ ಹಾಜರಾಗದ ದಲಿತ ವಿರೋಧಿ ಶಾಸಕ; ಮಾಜಿ ಶಾಸಕ ಅರುಣಕುಮಾರ ಪೂಜಾರ.

ಕುದರಿಹಾಳ ಗ್ರಾಮದಲ್ಲಿ ಸಿಡಿಲು ಬಡಿದು ಯುವ ಕೃಷಿಕ ಸಾವು

ಕೈ-ಕಮಲ ನಡುವೆ ರಾಜಕೀಯ ಪ್ರತಿಷ್ಠೆ; ನಗರಸಭೆ ಸಾಮಾನ್ಯ ಸಭೆ ಮುಂದೂಡಿಕೆ.

ಹಾನಗಲ್ ತಹಸೀಲ್ದಾರ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ.

ಬಿಗರ ಊಟ ಮಾಡಿ ಬರುತ್ತಿದ್ದವರು ಮಸಣಕ್ಕೆ *ನಿಂತಿದ್ದ ಟ್ರ್ಯಾಕ್ಟರ್ ಟ್ರೈಲರ್ ಗೆ ಟಾಟಾ ಸುಪ್ರೋ ಡಿಕ್ಕಿ* *ಸ್ಥಳದಲ್ಲಿಯೆ ಮೂವರ ದುರ್ಮರಣ, 20ಕ್ಕೂ ಅಧಿಕರಿಗೆ ಗಂಭೀರ ಗಾಯ*

ತಾಪಂ ಪ್ರಭಾರ ಇಓ ಬಸವರಾಜ ಶಿಡೇನೂರ ಬಳಿ ಒಂದೂವರೆ ಕೋಟಿ ಆಸ್ತಿ..

ಕಂದಾಯ ನಿರೀಕ್ಷ ಅಶೋಕ‌ ಅರಳೇಶ್ವರ ಬಳಿ ಕೋಟ್ಯಾಂತರ ಆಸ್ತಿ ಪತ್ತೆ.

ನಗರದಲ್ಲಿ ನಡೆಯುವ ಅಪಘಾತಗಳಿಗೆ ಮುಖ್ಯ ರಸ್ತೆ ಒತ್ತುವರಿ, ಅನಿಯಮಿತ ಪಾರ್ಕಿಂಗ್ ಕಾರಣವೇ?

 

ರಾಣೆಬೇನ್ನೂರು: ನಗರದಲ್ಲಿ ಪ್ರತಿನಿತ್ಯವೂ ಅಪಘಾತಗಳು, ಅವಘಡ ವಿಷಯಗಳನ್ನು ಕೇಳುತ್ತಿದ್ದು ಅವುಗಳನ್ನು ನೋಡುತ್ತಿದ್ದ ಜನರಿಗೆ ಇದೀಗ ಭಯ ಹುಟ್ಟಿಸುವಂತಹ ಸನ್ನಿವೇಶ ಬಂದೊದಗಿದೆ.

ಹೌದು ರಾಣೆಬೇನ್ನೂರು ನಗರವು ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರವಾಗಿದ್ದು ಸಂಚಾರ ದಟ್ಟಣೆ ಸಹ ಅಧಿಕವಾಗಿದೆ. ಅಲ್ಲದೆ ನಗರ ಯೋಜನೆ ಸರಿಯಾಗಿ ಮಾಡದ ಕಾರಣ ರಸ್ತೆಗಳು ಸಹ ಚಿಕ್ಕದಾಗಿವೆ. ಇಂತಹ ನಗರದಲ್ಲಿ ಇದೀಗ ಅಪಘಾತ ಸಂಖ್ಯೆ ಹೆಚ್ಚಾಗುತ್ತಾ ಹೋಗಿದ್ದು, ಇದಕ್ಕೆ ಕಾರಣ ಹುಡುಕಿಕೊಂಡು ಹೋದಾಗ ಮೊದಲು ಸಿಗುವುದು ರಸ್ತೆಗಳ ಒತ್ತುವರಿ ಹಾಗೂ ಅನಿಯಮ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಎಂದು ಕಂಡು ಬಂದಿದೆ.

 

ನಗರದ ಪ್ರಮುಖ ರಸ್ತೆಯಾಗಿರುವ ಪಿ.ಬಿ.ರಸ್ತೆ, ಎಂಜಿ ರಸ್ತೆ, ಎಡಿಬಿ ರಸ್ತೆ, ರೈಲ್ವೆ ಸ್ಟೇಷನ್ ರಸ್ತೆ, ಮೆಡ್ಲೇರಿ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಹ ಜನರು ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅಲ್ಲದೆ ವಾಹನ ಸವಾರರು ಸಹ ರಸ್ತೆಗಳ ಮೇಲೆ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ. ಇದರಿಂದ ನಗರದಲ್ಲಿ ಅಪಘಾತ ಸಂಖ್ಯೆ ಹೆಚ್ಚಾಗಿದೆ ಎಂದು ಸಾರ್ವಜನಿಕರ ಮಾತುಗಳಾಗಿವೆ. ಕೆಲವರು ರಾಜಕೀಯ ಪ್ರಭಾವ ಬಳಸಿಕೊಂಡು ಪಿಬಿ ರಸ್ತೆ ಒತ್ತುವರಿ ಮಾಡಿಕೊಂಡಿದ್ದಾರೆ ಅಲ್ಲದೆ ಕಾರು ಪಾರ್ಕಿಂಗ್ ಶೆಡ್ ಸಹ ಮಾಡಿಸಿಕೊಂಡಿರುವುದು ಕಂಡು ಬಂದಿದೆ. ಕೂಡಲೇ ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆಯು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ರಸ್ತೆ ಒತ್ತುವರಿ ತೆರವು ಮಾಡಬೇಕಾಗಿದೆ. ಇದರಿಂದ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.

ಮಾನ್ಯ ಶಾಸಕರಾದ ಪ್ರಕಾಶ್ ಕೋಳಿವಾಡ ಅವರು ನಗರದಲ್ಲಿ ಅಪಘಾತ ಪಡೆಯಬೇಕಾದರೆ ಮೊದಲು ನಗರದಲ್ಲಿ ಒತ್ತುವರಿ ಮಾಡಿಕೊಂಡಿರುವ ರಸ್ತೆಗಳನ್ನು, ಪುಟಪಾತ್ ತೆರವು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಅಲ್ಲದೇ ಪುಟಪಾತ್ ಅಕ್ರಮ ಮಾಡಿಕೊಂಡ ವ್ಯಾಪಾರ ಮಾಡುವರಿಗೆ ಬೇರೆ ಕಡೆ ಸ್ಥಳ ನಿಗದಿ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಾಲತೇಶ ಅವರು ತಿಳಿಸಿದ್ದಾರೆ.

ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!