ರಾಣೆಬೇನ್ನೂರು: ನಗರದಲ್ಲಿ ಪ್ರತಿನಿತ್ಯವೂ ಅಪಘಾತಗಳು, ಅವಘಡ ವಿಷಯಗಳನ್ನು ಕೇಳುತ್ತಿದ್ದು ಅವುಗಳನ್ನು ನೋಡುತ್ತಿದ್ದ ಜನರಿಗೆ ಇದೀಗ ಭಯ ಹುಟ್ಟಿಸುವಂತಹ ಸನ್ನಿವೇಶ ಬಂದೊದಗಿದೆ.
ಹೌದು ರಾಣೆಬೇನ್ನೂರು ನಗರವು ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರವಾಗಿದ್ದು ಸಂಚಾರ ದಟ್ಟಣೆ ಸಹ ಅಧಿಕವಾಗಿದೆ. ಅಲ್ಲದೆ ನಗರ ಯೋಜನೆ ಸರಿಯಾಗಿ ಮಾಡದ ಕಾರಣ ರಸ್ತೆಗಳು ಸಹ ಚಿಕ್ಕದಾಗಿವೆ. ಇಂತಹ ನಗರದಲ್ಲಿ ಇದೀಗ ಅಪಘಾತ ಸಂಖ್ಯೆ ಹೆಚ್ಚಾಗುತ್ತಾ ಹೋಗಿದ್ದು, ಇದಕ್ಕೆ ಕಾರಣ ಹುಡುಕಿಕೊಂಡು ಹೋದಾಗ ಮೊದಲು ಸಿಗುವುದು ರಸ್ತೆಗಳ ಒತ್ತುವರಿ ಹಾಗೂ ಅನಿಯಮ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಎಂದು ಕಂಡು ಬಂದಿದೆ.
ನಗರದ ಪ್ರಮುಖ ರಸ್ತೆಯಾಗಿರುವ ಪಿ.ಬಿ.ರಸ್ತೆ, ಎಂಜಿ ರಸ್ತೆ, ಎಡಿಬಿ ರಸ್ತೆ, ರೈಲ್ವೆ ಸ್ಟೇಷನ್ ರಸ್ತೆ, ಮೆಡ್ಲೇರಿ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಹ ಜನರು ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅಲ್ಲದೆ ವಾಹನ ಸವಾರರು ಸಹ ರಸ್ತೆಗಳ ಮೇಲೆ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ. ಇದರಿಂದ ನಗರದಲ್ಲಿ ಅಪಘಾತ ಸಂಖ್ಯೆ ಹೆಚ್ಚಾಗಿದೆ ಎಂದು ಸಾರ್ವಜನಿಕರ ಮಾತುಗಳಾಗಿವೆ. ಕೆಲವರು ರಾಜಕೀಯ ಪ್ರಭಾವ ಬಳಸಿಕೊಂಡು ಪಿಬಿ ರಸ್ತೆ ಒತ್ತುವರಿ ಮಾಡಿಕೊಂಡಿದ್ದಾರೆ ಅಲ್ಲದೆ ಕಾರು ಪಾರ್ಕಿಂಗ್ ಶೆಡ್ ಸಹ ಮಾಡಿಸಿಕೊಂಡಿರುವುದು ಕಂಡು ಬಂದಿದೆ. ಕೂಡಲೇ ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆಯು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ರಸ್ತೆ ಒತ್ತುವರಿ ತೆರವು ಮಾಡಬೇಕಾಗಿದೆ. ಇದರಿಂದ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.
ಮಾನ್ಯ ಶಾಸಕರಾದ ಪ್ರಕಾಶ್ ಕೋಳಿವಾಡ ಅವರು ನಗರದಲ್ಲಿ ಅಪಘಾತ ಪಡೆಯಬೇಕಾದರೆ ಮೊದಲು ನಗರದಲ್ಲಿ ಒತ್ತುವರಿ ಮಾಡಿಕೊಂಡಿರುವ ರಸ್ತೆಗಳನ್ನು, ಪುಟಪಾತ್ ತೆರವು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಅಲ್ಲದೇ ಪುಟಪಾತ್ ಅಕ್ರಮ ಮಾಡಿಕೊಂಡ ವ್ಯಾಪಾರ ಮಾಡುವರಿಗೆ ಬೇರೆ ಕಡೆ ಸ್ಥಳ ನಿಗದಿ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಾಲತೇಶ ಅವರು ತಿಳಿಸಿದ್ದಾರೆ.
More Stories
ಇಸ್ವತ್ತು ಉತಾರ ನೀಡಲು ಲಂಚ ಪಡೆಯುತ್ತಿದ್ದ ಪಿಡಿಓ, ಉಪಾಧ್ಯಕ್ಷ ಸೇರಿ ಮೂರ ಜನ ಗ್ರಾಪಂ ಸದಸ್ಯರ ಬಂಧನ.
ಸ್ಥಾಯಿ ಸಮಿತಿ ರಚನೆ ನಗರಸಭೆಯಲ್ಲಿ ಕೋಲಾಹಲ ವಿರೋಧ ಪಕ್ಷದ ಸದಸ್ಯರಿಂದ ನ್ಯಾಯಾಲಯದ ಮೋರೆ ಸಾಧ್ಯತೆ
ಮೈಕ್ರೋ ಫೈನಾನ್ಸ್ ನವರ ಕಿರುಕುಳ ಕೊಟ್ರೆ ಕೇಸ್ ಹಾಕ್ತೇವಿ ಶಾಸಕ ಪ್ರಕಾಶ ಕೋಳಿವಾಡ.