ರಾಣೆಬೇನ್ನೂರು: ನಗರದ ಬಸ್ ನಿಲ್ದಾಣ ಪಕ್ಕದಲ್ಲಿರುವ ಸೂರಜ್ ಲಾಡ್ಜನಲ್ಲಿ ವ್ಯಕ್ತಿಯೊರ್ವ ಬಾತರೂಂನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ತಾಲೂಕಿನ ಕಾಕೋಳ ಗ್ರಾಮದ ಮೈಲಾರಪ್ಪ ರುದ್ರಪ್ಪ ಸರಬಣ್ಣನವರ(32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಈತನು ನಿನ್ನೆಯ ದಿವಸ ಮಹಿಳೆಯೊಂದಿಗೆ ಆಗಮಿಸಿ ಲಾಡ್ಜನಲ್ಲಿ ರೂಂ ಪಡೆದಿದ್ದ ಎನ್ನಲಾಗಿದೆ. ಆದರೆ ಏಕಾಏಕಿ ಮಹಿಳೆಯ ಸೀರೆ ತೆಗೆದುಕೊಂಡು ಹೋಗಿ ಬಾತರೂಂನಲ್ಲಿ ನೇಣು ಹಾಕಿಕೊಂಡಿದ್ದಾನೆ.
ನಂತರ ಮಹಿಳೆ ಎಷ್ಟೇ ಬಾಗಿಲು ಬಡಿದರು ಬಾಗಿಲು ತಗೆಯದ ಕಾರಣ ಅನುಮಾನ ಬಂದಿದೆ ಕೂಡಲೇ ಲಾಡ್ಜ್ ಸಿಬ್ಬಂದಿ ಹಾಗೂ ಪೋಲಿಸರ ಕರೆಸಿ ಬಾಗಿಲು ತಗೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆದರೆ ಲಾಡ್ಜಿಗೆ ಬಂದ ವ್ಯಕ್ತಿ ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಮಾತ್ರ ನಿಗೂಢವಾಗಿದ್ದು, ಶಹರ ಪೋಲಿಸರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.