ರಾಣೆಬೇನ್ನೂರು: ರಾಣೆಬೇನ್ನೂರು ನಗರಸಭೆ ವ್ಯಾಪ್ತಿಯಲ್ಲಿ ಬರುವ ಲೇಔಟ್ ಗಳ ಸೈಟ್ ಜಾಗಗಳಲ್ಲಿ ಹಾಗೂ ಪಾಳು ಬಿದ್ದಿರುವ ಕೃಷಿ ಜಮೀನಿನಲ್ಲಿ ಜಾಲಿಗಿಡ ಮತ್ತು ಕಸ ಬಿದ್ದ ಕಾರಣ ನಗರದ ಸೌಂದರ್ಯಕ್ಕೆ ಅಡ್ಡಿಯಾಗುತ್ತಿದ್ದು, ಇವುಗಳು ಮಾಲೀಕರು ಸದ್ಬಳಕೆ ಮಾಡದೆ ಇದ್ದರೆ ಕಾನೂನು ರೀತಿಯಲ್ಲಿ ನೋಟಿಸ್ ನೀಡಿ ಸರ್ಕಾರಕ್ಕೆ ವಶಪಡಿಸಿಕೊಳ್ಳಲು ತಾಲೂಕು ಆಡಳಿತ ಹಾಗೂ ನಗರಸಭೆ ಮುಂದಾಗಿದೆ.
ಹೌದು ಜಿಲ್ಲಾಧಿಕಾರಿ ಮಾರ್ಗದರ್ಶನ ಅಡಿಯಲ್ಲಿ ತಹಸೀಲ್ದಾರ ಆರ್.ಎಚ್.ಭಾಗವಾನ ಹಾಗೂ ಪೌರಾಯುಕ್ತರಾದ ಎಫ್.ಐ.ಇಂಗಳಗಿ ನಗರದ ವಿವಿಧ ಕಡೆ ಜಂಟಿ ಕಾರ್ಯಾಚರಣೆ ನಡೆಸಿ ಖಾಲಿ ಬಿಟ್ಟ ಭೂಮಿಗಳನ್ನು ಹಾಗೂ ಲೇಔಟ್ ಸೈಟ್ ಪರಿಶೀಲನೆ ನಡೆಸಿದರು.
ನಗರಸಭೆ ವ್ಯಾಪ್ತಿಯ ಸುಮಾರು ಮೂರು ಕೀಮಿ ನಲ್ಲಿ ಆರನೂರು ಸೈಟ್ ಗಳು ಹಾಗೂ ನೂರಾರು ಎಕರೆಗಳಲ್ಲಿ ಜಾಲಿಗಿಡ ಬೆಳದಿದ್ದು ಖಾಲಿ ಸೈಟ್ನಲ್ಲಿ ಕಸ ಬಿದ್ದಿದೆ. ಇದರಿಂದ ನಗರದ ಸೌಂದರ್ಯಕ್ಕೆ ಅಡ್ಡಿಯಾಗುತ್ತಿದ್ದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರತ್ತಿದೆ. ಆದ ಕಾರಣ ನಗರದ ವ್ಯಾಪ್ತಿಯಲ್ಲಿ ಖಾಲಿ ಬಿಟ್ಟಿರುವ ಸೈಟ್ ಗಳು ಹಾಗೂ ಕೃಷಿ ಜಮೀನಿನ ಮಾಲೀಕರು ಕೂಡಲೇ ಸ್ವಚ್ಛ ಮಾಡಬೇಕು. ಇಲ್ಲವಾದರೆ ಕಾನೂನು ರೀತಿಯಲ್ಲಿ ನೋಟಿಸ್ ಜಾರಿ ಮಾಡಿ ಸರ್ಕಾರದ ವಶಕ್ಕೆ ಪಡೆಯಲಾಗುವುದು ಎಂದು ತಾಲೂಕು ಆಡಳಿತ ಹಾಗೂ ನಗರಸಭೆ ಮುಂದಾಗಿದೆ.
ಕೆಲವರ ಕೃಷಿ ಭೂಮಿ ಹಾಗೂ ಸೈಟ್ ಖರೀದಿ ಮಾಡಿ ಅವುಗಳನ್ನು ಸದ್ಬಳಕೆ ಮಾಡಿಕೊಳ್ಳದೆ ಖಾಲಿ ಬಿಟ್ಟಿದ್ದಾರೆ. ಇದರಿಂದ ನಗರದ ಅನೇಕ ಸಾರ್ವಜನಿಕರು ಸ್ವಚ್ಛ ಮಾಡುವಂತೆ ನಗರಸಭೆಗೆ ಮನವಿ ಸಲ್ಲಿಸಿದರು. ಇದನ್ನು ಗಮನಿಸಿ ತಾಲೂಕು ಆಡಳಿತ ಹಾಗೂ ನಗರಸಭೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅವುಗಳಲ್ಲಿ ಸರ್ವೆ ನಂ 438, 341 ರ ಜಮೀನಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಾಲಿ ಬೆಳೆದಿದೆ. ಕೂಡಲೇ ಈ ಜಮೀನಿನ ಮಾಲೀಕರು ಕಸ ಹಾಗೂ ಜಾಲಿ ಸ್ವಚ್ಛ ಮಾಡದೇ ಇದ್ದರೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತರಾದ ಎಫ್.ಐ.ಇಂಗಳಗಿ ಹಾಗೂ ತಹಸೀಲ್ದಾರ ಆರ್.ಎಚ್.ಭಾಗವಾನ ತಿಳಿಸಿದ್ದಾರೆ.
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.