ರಾಣೆಬೇನ್ನೂರು: ಸಾಲಗಾರರ ಕಾಟಕ್ಕೆ ಬೇಸತ್ತು ಯುವಕನೊರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಣೆಬೇನ್ನೂರು ನಗರದ ಹೊರವಲಯದಲ್ಲಿ ನಡೆದಿದೆ.
ಮೂಲತಃ ಶಿವಮೊಗ್ಗ ಜಿಲ್ಲೆಯ ಹಾಲಿವಸ್ತಿ ರಾಣೆಬೇನ್ನೂರಿನ ಬೀರಲಿಂಗೇಶ್ವರ ನಗರದವಿ ಕಾಸ್(25) ಎಂಬ ಯುವಕ ಆತ್ಮಹತ್ಯೆಗೆ ಯತ್ನಸಿದ ಯುವಕನೆಂದು ತಿಳಿದು ಬಂದಿದೆ.
ವಿಕಾಸ ರಾಣೆಬೇನ್ನೂರು ನಗರದಲ್ಲಿ ಫ್ರೆಂಡ್ ಕಾರ್ ಕೇರ್ ಎಂಬ ಅಂಗಡಿ ಇಟ್ಟುಕೊಂಡು ನಡೆಸುತ್ತಿದ್ದನು. ಅಲ್ಲದೆ ವ್ಯವಹಾರಕ್ಕೆ ಆಗಿ ನಗರದ ವಿವಿಧ ಜನರ ಹತ್ತಿರ ಸಾಲವನ್ನು ಪಡೆದಿದ್ದನ್ನು. ಇದರ ಜತೆಯಾಗಿ ತನ್ನ ಆತ್ಮೀಯ ಸ್ನೇಹಿತನಾದ ಶ್ರೇಯಸ್ ಎಂಬಾತನಿಗೆ ತಾನು ಸಾಲ ಪಡೆದಿದ್ದ ಸಾಲಗಾರರ ಹತ್ತಿರ ಬಡ್ಡಿ ರೂಪದಲ್ಲಿ ಸಾಲವನ್ನು ಕೊಡಿಸಿದ್ದ. ಈ ಹಿನ್ನೆಲೆ ಸಾಲ ಪಡೆದಿದ್ದ ಶ್ರೇಯಸ್ ನ ಹತ್ತಿರ ಸಾಲದ ಬಡ್ಡಿ ಕೊಡಿಸುವಂತೆ ವಿಕಾಸ್ ಗೆ ಸಾಲಕೊಟ್ಟವರಿಂದ ಕಿರುಕುಳ ನೀಡಿದ್ದಾರೆ.
ಈ ಸಮಯದಲ್ಲಿ ವಿಕಾಸ ತನ್ನ ಸ್ನೇಹಿತನಾದ ಶ್ರೇಯಸ್ ಮನೆಗೆ ಹೋಗಿ ಸಾಲ ಕಟ್ಟುವಂತೆ ಮನವಿ ಮಾಡಿದ್ದಾನೆ. ಆದರೆ ಶ್ರೇಯಸ್ ಬದಾಮಿ ಹಾಗೂ ಪ್ರೇಮಾ ಬದಾಮಿ ಹಣ ಕಟ್ಟಲ್ಲ ಎಂದು ವಿಕಾಸ್ ಗೆ ಬೈದು ಕಳಿಸಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ವಿಕಾಸ ವಿಚ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಕೂಡಲೇ ಅವನನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಣೆಬೆನ್ನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.