ರಾಣೆಬೇನ್ನೂರು: ಲೋಕಸಭಾ ಚುನಾವಣೆಯಲ್ಲಿ ಹಾವೇರಿ-ಗದಗ ಲೋಕಸಭಾ ಅಭ್ಯರ್ಥಿಯಾದ ಬಸವರಾಜ ಬೊಮ್ಮಾಯಿಗೆ ಮತ ನೀಡಿ ಗೆಲ್ಲಿಸಿ ಎಂದು ಗೃಹ ಸಚಿವ ಅಮಿತಾ ಶಾ ಹೇಳಿದರು.
ರಾಣೆಬೇನ್ನೂರು ನಗರದಲ್ಲಿ ಬಸವರಾಜ ಬೊಮ್ಮಾಯಿ ಪರ ರೋಡ್ ಶೋ ಮೂಲಕ ಮತಯಾಚನೆ ಮಾಡಿ ಮಾತನಾಡಿದರು.
ದೇಶದಲ್ಲಿ ಮತ್ತೆ ಮೋದಿ ಅಧಿಕಾರಕ್ಕೆ ಬರಬೇಕಾದರೆ ನೀವು ಒತ್ತುವ ಬಟನ್ ಮೋದಿನೇ ಆಗಿರಬೇಕು. ಅದನ್ನು ಮಾಡಿದಾಗ ಮೋದಿ ಮತ್ತೊಮ್ಮೆ ಪ್ರಧಾನಿ ಆಗ್ತಾರ ಜತೆಗೆ ಬಸವರಾಜ ಬೊಮ್ಮಾಯಿ ದೆಹಲಿ ರಾಜಕೀಯಕ್ಕೆ ಬರುತ್ತಾರೆ ಎಂದು ಜನರಲ್ಲಿ ಮನವಿ ಐದು ನಿಮಿಷಕ್ಕೆ ಭಾಷಣ ಮುಗಿಸಿ ತೆರಳಿದರು.
ಭರ್ಜರಿ ರೋಡ್ ಶೋ…
ಅಮಿತಾ ಶಾ ಅವರ ರೋಡ್ ಶೋ ಕಾರ್ಯಕ್ರಮ ಮೂರು ಗಂಟೆಗೆ ಪ್ರಾರಂಭವಾಗಬೇಕಾಗಿತ್ತು. ಆದರೆ ಅವರು ನಗರಕ್ಕೆ ಸುಮಾರು ಐದು ಗಂಟೆಗೆ ಆಗಮಿಸಿದರು. ನಂತರ ಅವರನ್ನು ತೆರದ ವಾಹನದಲ್ಲಿ ಕುರಬಗೇರಿ ಕ್ರಾಸ್ ನಿಂದ ಎಂ.ಜಿ.ರಸ್ತೆ, ಎಡಿಬಿ ರಸ್ತೆ, ಪೋಸ್ಟ್ ವೃತ್ತದ ಮೂಲಕ ಅಶೋಕ ವೃತ್ತದವರಗೆ ರೋಡ್ ಶೋ ನಡೆಸಿ ಮತಯಾಚನೆ ಮಾಡಿ ತೆರಳಿದರು.
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.