- ಶಿವಕುಮಾರ ಓಲೇಕಾರ
ರಾಣೆಬೇನ್ನೂರು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ರಾಜ್ಯ ಬಿಜೆಪಿ ನಾಯಕರು ಅಳೆದು ತೂಗಿ ಬಿಜೆಪಿ ಹೈ ಕಮಾಂಡ್ ಮೂಲಕ ಹಾವೇರಿ-ಗದಗ ಲೋಕಸಭಾ ಚುನಾವಣೆಯ ಟಿಕೆಟ್ ನೀಡಿದ್ದು, ಅವರ ಗೆಲುವಿನ ಓಟಕ್ಕೆ ಇದೀಗ ಮತಗಳ ಸಂಕಟ ಎದುರಾಗಿರುವುದು ಕಂಡು ಬಂದಿದೆ.
ಅದರಲ್ಲೂ ರಾಣೆಬೇನ್ನೂರು ವಿಧಾನಸಭಾ ಕ್ಷೇತ್ರ ಬಸವರಾಜ ಬೊಮ್ಮಾಯಿಗೆ ನೆಚ್ಚಿನ ಕ್ಷೇತ್ರ ಎನಿಸಿಕೊಂಡಿದ್ದು ಹೆಚ್ಚಿನ ಮತಗಳ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಬೊಮ್ಮಾಯಿಗೆ ಇತ್ತೀಚಿನ ಗುಪ್ತಚರ ಮಾಹಿತಿ ಪ್ರಕಾರ ಮತಗಳು ಸಿಗುವುದು ಬಹುತೇಕ ಕಡಿಮೆ ಎಂಬುದು ಅವರಿಗೆ ದೊಡ್ಡ ತೆಲೆ ನೋವು ಆಗಿದೆ.
ರಾಣೆಬೇನ್ನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 2 ಲಕ್ಷದ 38 ಸಾವಿರ ಮತಗಳನ್ನು ಹೊಂದಿದ್ದು ಬಹುತೇಕ ಅಹಿಂದ ಮತಗಳ ಸಂಖ್ಯೆ ಹೆಚ್ಚಾಗಿದೆ.ಕಳೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸುಮಾರು 71830 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಶಾಸಕರಾಗಿದ್ದಾರೆ. ಬಿಜೆಪಿ ಸಹ 62030 ಮತಗಳನ್ನು ಪಡೆಯುವ ಮೂಲಕ ಎರಡನೇ ಕುಸಿತ ಕಂಡಿತು.
ಇದೀಗ ಕ್ಷೇತ್ರದಲ್ಲಿ ಕ್ಷಿಪ್ರ ರಾಜಕೀಯ ಬದಲಾವಣೆ ಆದ ಹಿನ್ನೆಲೆ ಅಂದಿನ NCP ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಆರ್.ಶಂಕರ್ ಇದೀಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅವರು ಸಹ ಸುಮಾರು 37559 ಮತಗಳನ್ನು ಪಡೆದಿದ್ದರು. ಈಗ ಕಾಂಗ್ರೆಸ್ ಸೇರಿದ ಕಾರಣ ಕ್ಷೇತ್ರದಲ್ಲಿ ಪಕ್ಷಕ್ಕೆ ಆನೆ ಬಲ ಬಂದಾಗಿದೆ.
ಅದರ ಜತೆಯಾಗಿ ಬಿಜೆಪಿ ಪಕ್ಷದ ಜತೆ ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಸಂತೋಷಕುಮಾರ ಪಾಟೀಲ ಸುಮಾರು 11395 ಮತಗಳನ್ನು ಹಾಗೂ ಜೆಡಿಎಸ್ ನಿಂದ ಸ್ಪರ್ಧೆ ಮಾಡಿದ್ದ ಮಂಜುನಾಥ ಗೌಡಶಿವಣ್ಣನವರ 5840 ಮತಗಳನ್ನು ಪಡೆದಿದ್ದರು ಇದೀಗ ಅವರು ಬಿಜೆಪಿ ಪಕ್ಷಕ್ಕೆ ಬೆಂಬಲವಾಗಿ ನಿಂತಿದ್ದು ಬೊಮ್ಮಾಯಿಗೆ ಸ್ವಲ್ಪ ನಿರಾಳವಾಗಿದೆ.
ಇದರ ಮಧ್ಯೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಆನಂದಸ್ವಾಮಿ ಗಡ್ಡದೇವರಮಠ ಅವರು ಶತಾಯಗತಾಯ ರಾಣೆಬೇನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತ ಮತಗಳನ್ನು ಪಡೆಯಬೇಕು ಎಂಬ ಹಠದಿಂದ ಬಿಜೆಪಿಗೆ ಲೀಡ್ ನೀಡಿದ್ದ ಬೂತ್ ಗಳಿಗೆ ಕಾಲಿಟ್ಟಿದ್ದು ಬಿಜೆಪಿ ಮತಗಳನ್ನು ಪಡೆಯಲು ಮುಂದಾಗಿರುವುದು ಕಂಡು ಬಂದಿದೆ.
ಒಟ್ಟಿನಲ್ಲಿ ಬಿಜೆಪಿ-ಕಾಂಗ್ರೆಸ್ ಪಕ್ಷದ ನಡುವೆ ನೇರ ಹಣಾಹಣಿ ನಡೆದಿದ್ದು ಕ್ಷೇತ್ರದ ಜನರು ಯಾರು ಕೈ ಹಿಡಿತ್ತಾರೆ ನೋಡಬೇಕು.
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.