ರಾಣೆಬೇನ್ನೂರು: ಹಿಂದುಳಿದ ಜಾತಿಯ ವ್ಯಕ್ತಿಯಾಗಿರುವ ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾದ ಎಂಬ ಹೊಟ್ಟೆಉರಿಯಿಂದ ನನ್ನ ಮೇಲೆ ಕೆಲವರು ಕುತಂತ್ರದಿಂದ ಸಿಎಂ ಸ್ಥಾನದಿಂದ ಕೆಳಗಿಳಿಸಲು ಹೊಂಚು ಹಾಕಿದ್ದು, ಆದರೆ ನಾಡಿನ ಜನರ ಆಶಿರ್ವಾದ ಇರುವವರೆಗೂ ನನ್ನನ್ನು ಏನು ಮಾಡೋಕೆ ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ರಾಣೆಬೇನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಶುಕ್ರವಾರ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಜನರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾವು ಆಶಿರ್ವಾದ ಮಾಡಿದ ಹಿನ್ನೆಲೆ 130 ಕ್ಕಿಂತ ಹೆಚ್ಚು ಸ್ಥಾನಗಳನ್ನು ನೀಡಿದ್ದಾರೆ. ನಿಮ್ಮ ಆಶಿರ್ವಾದ ಇರಲೇ ಹೋದ್ರೆ ಯಾರು ಅಧಿಕಾರಕ್ಕೆ ಬರಲು ಸಾಧ್ಯವಿರಲಿಲ್ಲ. ಚುನಾವಣೆ ಸಮಯದಲ್ಲಿ ರಾಜ್ಯದ ಜನರಿಗೆ ಏನು ಆಶ್ವಾಸನೆ ಕೊಡಲಾಗಿತ್ತು ಅದನ್ನು ನೆರವೇರಿಸಲು ನಾನು ಕೆಲಸ ಮಾಡ್ತಾ ಇದೇನಿ ಎಂದು ಹೇಳಿದರು.
2013 ರಲ್ಲಿ ಸಿಎಂ ಆದ ಸಮಯದಲ್ಲಿ 165 ಭರವಸೆಯನ್ನು ಜಾರಿಗೆ ತರಲಾಗಿತ್ತು. ಅವುಗಳಲ್ಲಿ ಬಡವರ ಪರವಾಗಿ ಅನ್ನ ಭಾಗ್ಯ,ಕೃಷಿ ಭಾಗ್ಯ, ಕ್ಷೀರ ಭಾಗ್ಯ, ಶೂ ಭಾಗ್ಯದಂತಹ ಯೋಜನೆ ಅಚ್ಚುಳಿದಿವೆ. ಅದರಂತೆ ಈಗ ನೀಡಿರುವ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಎಲ್ಲಾ ಜನರಿಗೆ ಯೋಜನೆ ತಲುಪಿದೆ. ಅದಕ್ಕಾಗಿ ಬಜೆಟ್ನಲ್ಲಿ56 ಸಾವಿರ ಕೋಟಿ ಮೀಸಲು ಇಡಲಾಗಿದ್ದು ಯಾವುದೇ ಕಾರಣಕ್ಕೂ ಬಂದ್ ಆಗಲ್ಲ ಎಂದು ಹೇಳಿದರು.
ದೇವರಗುಡ್ಡ ಅಭಿವೃದ್ಧಿ ಮಾಡುವೆ…
ದೇವರಗುಡ್ಡ ಗ್ರಾಮದಲ್ಲಿ ಕಂಚಿನ ಪ್ರತಿಮೆ ಮಾಡಿದ್ದು ಅದನ್ನು ಉದ್ಘಾಟನೆ ಮಾಡಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದ್ದರು. ಅದರಂತೆ ನಾನು ಕ್ಷೇತ್ರಕ್ಕೆ ಬಂದು ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿ ಮಾಲತೇಶ ದೇವರ ಆಶಿರ್ವಾದ ಪಡೆದಿದ್ದು ನನ್ನ ಪುಣ್ಯ. ಮಾಲತೇಶ ಸ್ವಾಮಿ ನನಗೆ ಒಳ್ಳೆಯದು ಮಾಡುವುದರ ಜತೆಗೆ ನಾಡಿನ ಜನಕ್ಕೆ ಒಳ್ಳೆಯ ಮಾಡಲಿ ಎಂದರು.
ದೇವರಗುಡ್ಡ ಕ್ಷೇತ್ರಕ್ಕೆ ರಾಜ್ಯ ಸೇರಿದಂತೆ ಹೊರ ರಾಜ್ಯದ ಸಾವಿರಾರು ಭಕ್ತರು ಇದ್ದು ಮೂಲಭೂತ ಸೌಕರ್ಯಗಳ ಕೊರತೆ ಇದೆ ಎಂದು ಶಾಸಕ ಶಿವಣ್ಣನವರ ತಿಳಿಸಿದ್ದಾರೆ. ಅದಕ್ಕೆ ನಾನು ದೇವರಗುಡ್ಡ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ನೀಡಲು ಅನುದಾನ ನೀಡುವೆ ಎಂದು ಜನರಿಗೆ ತಿಳಿಸಿದರು.
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.