ರಾಣೆಬೇನ್ನೂರು: ಕಳೆದ ಒಂದು ವಾರದಿಂದ ರಾಣೆಬೇನ್ನೂರು ತಾಲೂಕಿನ ನಾಲ್ಕು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು ಇಪ್ಪತ್ತು ಮನೆಗಳು ಕಳ್ಳತನಗಳ ಘಟನೆ ನಡೆದಿದ್ದು, ಎಸ್ಪಿ ಸಾಹೇಬ್ರು ಹಾಗೂ ಪೋಲಿಸರ ಏನು ಮಾಡ್ತಿದೆ ಎಂದು ಸಾರ್ವಜನಿಕರಿಗೆ ಪ್ರಶ್ನೆವಾಗಿದೆ.
ಹೌದು ರಾಣೆಬೇನ್ನೂರು ತಾಲೂಕಿನ ಹಲಗೇರಿ ಪೋಲಿಸ ಠಾಣೆ, ಕುಮಾರಪಟ್ಟಣಂ ಪೋಲಿಸ್ ಠಾಣೆ, ಗ್ರಾಮೀಣ ಠಾಣೆ ಸೇರಿದಂತೆ ಶಹರ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಪ್ರಕರಣಗಳು ಜಾಸ್ತಿಯಾಗಿವೆ.
ಹಾಡುಹಗಲೆ ಒಂಟಿ ಮನೆಗಳನ್ನು ಟಾರ್ಗೆಟ್ ಮಾಡಿ ಮನೆ ಕಳ್ಳತನ ಮಾಡುತ್ತಿದ್ದಾರೆ ಅಲ್ಲದೇ ರಾತ್ರಿ ಸಮಯದಲ್ಲಿ ಮನೆಯಲ್ಲಿ ಯಾರು ಇಲ್ಲದಿರುವಾಗ ನೋಡಿ ಖದೀಮರು ಕನ್ನ ಹಾಕುತ್ತಿದ್ದಾರೆ. ಜತೆಯಾಗಿ ಪೋಲಿಸ್ ಇಲಾಖೆಯ ಸಿಬ್ಬಂದಿಗಳ ಮನೆಗಳ ಕಳ್ಳತನವಾದ ಉದಾಹರಣೆ ಇದ್ದು ಅವುಗಳು ಪ್ರಕರಣ ದಾಖಲಾಗಿಲ್ಲ ಎಂಬ ಮಾಹಿತಿ.
ಕಳೆದ ಎರಡು ದಿನಗಳ ಹಿಂದೆ ಪಿಡಿಓ, ನಿವೃತ್ತ ಸೈನಿಕರ ಮನೆಯನ್ನು ಕಳ್ಳತನ ಮಾಡಲಾಗಿದ್ದು ಸುಮಾರು ಇಪ್ಪತ್ತು ಲಕ್ಷ ಮೌಲ್ಯದ ಆಭರಣ ಹಣ ಕಳ್ಳತನ ಮಾಡಲಾಗಿದೆ. ಈ ಕುರಿತು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ.
ಕಳ್ಳತನ ಪ್ರಕರಣಗಳು ಜಾಸ್ತಿಯಾದರು ಸಹ ಪೊಲಿಸ್ ಇಲಾಖೆಯವರು ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಮನೆ ಕಳ್ಳತನವಾದ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದು, ಎಸ್ಪಿ ಸಾಹೇಬ್ರು ಇದರ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.