ರಾಣೆಬೇನ್ನೂರು: ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದ ಗಂಡನಿಗೆ ರಾಣೆಬೇನ್ನೂರಿನ ಎರಡನೇ ಹೆಚ್ಚುವರಿ ವ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಧುಸೂದನರಾಮ್ ಕೆ.ವಿ ಇದೀಗ ಜೀವಾವಧಿ ಶಿಕ್ಷೆ ತೀರ್ಪು ನೀಡಿದ್ದಾರೆ.
ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದ ನಾಗರಾಜ ತಂದೆ ನೀಲಕಂಠಪ್ಪ ಎಂಬ ಜೀವಾವಧಿಯ ಶಿಕ್ಷೆ ಹಾಗೂ ತೊಂಬತ್ತು ಸಾವಿರ ದಂಢ ವಿಧಿಸಿಲಾಗಿದೆ.
ಪ್ರಕರಣ ಹಿನ್ನೆಲೆ..ರಾಣೆಬೇನ್ನೂರು ನಗರದ ನಿವಾಸಿಯಾದ ಶೈಲಾಜ ಅವರನ್ನು ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದ ನಾಗರಾಜ ಜತೆ ಮದುವೆ ಮಾಡಿಕೋಡಲಾಗಿತ್ತು. ನಂತರ ನಾಗರಾಜ ಶೈಲಾಜಾ ಅವರಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ನಿರಂತರ ಕಿರುಕುಳ ನೀಡುತ್ತಿದ್ದ. ಇದರಿಂದ ರೋಷಿ ಹೋದ ಶೈಲಾಜಾ ಗಂಡನ ಮನೆ ಬಿಟ್ಟು ತವರ ಮನೆಗೆ ಬಂದಿದ್ದಳು.
ನಾಗರಾಜ ಸಹ ರಾಣೆಬೇನ್ನೂರಗೆ ಬಂದು ಮತ್ತೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಇದರಿಂದ ಇಬ್ಬರ ನಡುವೆ ಜಗಳ ನಡೆದ ಸಮಯದಲ್ಲಿ ಅ.25, 2018 ರಂದು ಆರೋಪಿ ನಾಗರಾಜ ನಗರದ ರಾಜರಾಜೇಶ್ವರಿ ನಗರದ ಬಾಡಿಗೆ ಮನೆಯಲ್ಲಿ ತನ್ನ ಹೆಂಡತಿಯಾದ ಶೈಲಾಜ್ ಅವರನ್ನ ಚಾಕುವಿನಿಂದ ಹಿರಿದು ಕೊಲೆ ಮಾಡಿದನ್ನು.
ಆರೋಪಿಯ ವಿರುದ್ದ ರಾಣೆಬೇನ್ನೂರು ಶಹರ ಠಾಣೆಯ ಪೋಲಿಸರು ತನಿಖೆ ಕೈಗೊಂಡು ಅಂತಿಮವಾಗಿ ಸಿಪಿಐ ಮಂಜುನಾಥ ನಲವಾಗಲ ಹಾಗೂ ಲಿಂಗನಗೌಡ ನೆಗಳೂರು ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು.
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.