ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!

ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ

ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.

ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಮತ್ತು‌ ವೃತ್ತ ಲೋಕಾರ್ಪಣೆ ನಾಡಿದ್ದು

ರಾಣೆಬೇನ್ನೂರ ತಾಲೂಕ ಹಸಿರಿಕರಣಕ್ಕೆ “ಟ್ರೀ ಪಾರ್ಕ್” ಶಾಸಕ ಪ್ರಕಾಶ ಕೋಳಿವಾಡ

ನಗರಸಭೆ ನೂತನ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ರಮೇಶ ಕರಡೆಣ್ಣನವರ ಆಯ್ಕೆ.

ಅಗಡಿ ತೋಟಕ್ಕೆ ಹೊರಟ್ಟವರು ಕೈಲಾಸಕ್ಕೆ ಹೋದರು, ಮೃತಪಟ್ಟವರ ವಿವರ ಇಲ್ಲಿದೆ.

ಮೋಟೆಬೆನ್ನೂರು ಬಳಿ ಭೀಕರ ಅಪಘಾತ, ರಾಣೆಬೇನ್ನೂರು ನಗರದ ಆರು ಜನ ಸಾವು.

ಪರಮ ಭ್ರಷ್ಟ ಲಂಚಾವತಾರಿ ಸಂವಿಧಾನ ವಿರೋಧಿ ವೈದ್ಯ ಡಾ” ಪರಮೇಶ್ವರಪ್ಪ ಅಮಾನತಗೆ ಆಗ್ರಹ

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾವೇರಿಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲತ್ತೆ: ಸಿ.ಎಂ ಭರವಸೆ

ರಾಹುತನಕಟ್ಟಿ ಗ್ರಾಪಂ ಮತ್ತೆ ಬಿಜೆಪಿ ಬೆಂಬಲಿತರ ತೆಕ್ಕೆಗೆ.

ಸ್ಮಶಾನ ಜಾಗಕ್ಕಾಗಿ ತಾಲೂಕಿನ ಕೃಷ್ಣಾಪುರ ಗ್ರಾಮಸ್ಥರಿಂದ ಸಿಎಂಗೆ ಕಪ್ಪು ಪಟ್ಟಿ‌ ಪ್ರದರ್ಶನಕ್ಕೆ ಸಜ್ಜು.

ತಂದೆ ಶವ ಮನೆಯಲ್ಲಿಟ್ಟು ಕಣ್ಣೀರಿಡುತ್ತ ಪರೀಕ್ಷೆ ಬರೆದ ಅಣ್ಣ-ತಂಗಿಗೆ ಉತ್ತಮ ಅಂಕ; ತಂಗಿಗೆ ಶೇ. 83 ಅಣ್ಣನಿಗೆ ಶೇ. 85ರಷ್ಟು ಅಂಕ

ಶಿವಾನಂದ ಪಾಟೀಲ ರಾಜೀನಾಮೆ ಪತ್ರದಲ್ಲಿ ಏನು ಹೇಳಿದ್ದಾರೆ.

ಮೆಡ್ಲೇರಿ ರಸ್ತೆಯಿಂದ ಹುಣಸಿಕಟ್ಟಿ ತನಕ ಇಂದು ರಾತ್ರಿ ವಿದ್ಯುತ್ ಸರಬರಾಜು ಡೌಟು..

ಕಿತ್ತಾಟ, ಕಿರಚಾಟ ನಡುವೆ ನಗರಸಭೆ ಸ್ಥಾಯಿ ಸಮಿತಿಗೆ ಅನುಮೋದನೆ.

ಇಸ್ವತ್ತು ಉತಾರ ನೀಡಲು ಲಂಚ ಪಡೆಯುತ್ತಿದ್ದ ಪಿಡಿಓ, ಉಪಾಧ್ಯಕ್ಷ ಸೇರಿ ಮೂರ ಜನ ಗ್ರಾಪಂ ಸದಸ್ಯರ ಬಂಧನ.

ರಷ್ಯಾದಲ್ಲಿ ಡಾ.ನಾಗರಾಜ ಎಸ್.ಕೆ ಅವರಿಗೆ ಗ್ಲೋಬಲ್ ಅಚಿವರ್ಸ್ ಪ್ರಶಸ್ತಿ.

ಐಎಎಸ್‌ ಪಾಸ್ ಮಾಡಿದ ಸಚಿನ ಗುತ್ತೂರುಗೆ ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿ ಅದ್ದೂರಿ ಸ್ವಾಗತ..

ಟ್ರ್ಯಾ ಕ್ಟರ್‌ನಿಂದ ಬಿದ್ದು ಅಣ್ಣಾ-ತಮ್ಮಾ ಸಾವು, ನಾಲ್ವರಿಗೆ ಗಂಭೀರ ಗಾಯ

ಡಿಸಿ ಸಾಹೇಬ್ರೆ, ಶಾಸಕರೆ ನಮಗೆ ಕಾಡುಹಂದಿಗಳ ಕಾಟ ಸಾಕಾಗಿದೆ, ಪರಿಹಾರ ಕೋಡ್ರಿ ಜನಸ್ಪಂದನ ಕಾರ್ಯಕ್ರಮದಲ್ಲಿ ರೈತನ ಅಳಲು..!

oplus_0

ರಾಣೆಬೇನ್ನೂರು: ಮಳೆಯಿಲ್ಲದ ಸಮಯದಲ್ಲಿ  ಸುಮಾರು ಐವತ್ತು ಸಾವಿರ ಖರ್ಚು ಮಾಡಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದೇನಿ ಆದರೆ ಅರಣ್ಯ ಇಲಾಖೆಯ ಕಾಡು ಮೃಗಗಳ ಹೊಲ ನಾಶ ಮಾಡಿ ಮೆಕ್ಕೆಜೋಳ ತಿಂದು ನನಗೆ ನಷ್ಟ ಉಂಟು ಮಾಡಿದ್ದು,  ಪರಿಹಾರ ನೀಡಬೇಕು ಎಂದು ಚಳಗೇರಿ ಗ್ರಾಮದ ರೈತನೊರ್ವ ಡಿಸಿ‌ ಹಾಗೂ ಶಾಸಕರ ಮುಂದೆ ಅಳಲು ತೋಡಿಕೊಂಡರು.

ರಾಣೆಬೇನ್ನೂರು ನಗರದ ತಾಪಂ ಸಭಾಭವನದಲ್ಲಿ ಸರ್ಕಾರದ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಶಾಸಕ ಪ್ರಕಾಶ ಕೋಳಿವಾಡ ನೇತೃತ್ವದಲ್ಲಿ ವಿವಿಧ ಇಲಾಖೆಗಳ ವತಿಯಿಂದ ಆಯೋಜಿಸಿದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಈ ದೃಶ್ಯ ಕಂಡು ಬಂದಿತು.

ಮುಂಗಾರು ಸಮಯದಲ್ಲಿ ಕಾಡಂಚಿನ ಹತ್ತಿರ ಇರುವ ಜಮೀನಿನಲ್ಲಿ ರೈತರು ಸಾಲ ಮಾಡಿ ಬಿತ್ತನೆ ಮಾಡಿರುತ್ತಾರೆ. ಆದರೆ ಕಾಡು ಹಂದಿಗಳು, ಕೃಷ್ಣಮೃಗಗಳು ಬೆಳೆ ನಾಶ ಮಾಡುತ್ತವೆ. ಇದರಿಂದ ರೈತರಿಗೆ ತುಂಬಾ ನಷ್ಟವಾಗುತ್ತಿದ್ದು ನನಗೆ ಅರಣ್ಯ ಇಲಾಖೆಯ ವತಿಯಿಂದ ಪರಿಹಾರ ನೀಡಿಸಿ ಎಂದು ಅಂಗಲಾಚಿದರು. ಇದಕ್ಕೆ ಡಿಸಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಕರಿಸಿ ಕೂಡಲೇ ಪರಿಹಾರ ನೀಡಬೇಕು ಜತೆಗೆ ಪ್ರಾಣಿಗಳ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಸೂಚಿಸಿದರು.

ಇನ್ನೂ ರಾಣೆಬೇನ್ನೂರು ನಗರದಲ್ಲಿ ನಗರಸಭೆ ಲೆಔಟ್ ನಿರ್ಮಾಣದಲ್ಲಿ ಬಾರಿ ಅಕ್ರಮ ನಡೆಯುತ್ತದೆ. ಇದನ್ನು ಸರಿಪಡಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮನವಿ ಸಲ್ಲಿಸಿದರು. ತಾಲೂಕಿನ ರಾಹುತನಕಟ್ಟಿ ಗ್ರಾಮದ ರೈತನಿಗೆ ಕೇವಲ ಮೂರು ಎಕರೆ ಇದ್ದರೂ ತಹಸೀಲ್ದಾರ ಕಚೇರಿಯ ಅಧಿಕಾರಿಗಳು ಸಣ್ಣ ಹಿಡುವಳಿದಾರರ ಖಾತೆ ಬದಲಾವಣೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ರೈತ ಶಾಸಕ ಪ್ರಕಾಶ ಕೋಳಿವಾಡ ಅವರಿಗೆ ಮನವಿ ಮಾಡಿದರು. ಕೂಡಲೇ ಶಾಸಕರ ತಹಸೀಲ್ದಾರ ಇಲಾಖೆಯ ಅಧಿಕಾರಿಗಳಿಗೆ ರೈತನ ಸಮಸ್ಯೆ ಬಗೆಹರಿಸಲು ಸೂಚಿಸಿದರು.

ಕಳೆದ ಇಪ್ಪತ್ತು ವರ್ಷಗಳಿಂದ ಪದ್ಮಾವತಿಪುರ ತಾಂಡಾ ಕಂದಾಯ ಗ್ರಾಮವಾಗಿರಲಿಲ್ಲ ಆದರೆ ಇದೀಗ ಕಂದಾಯ ಗ್ರಾಮವಾಗಿದ್ದು, ಕೂಡಲೇ ಹಕ್ಕುಪತ್ರ ನೀಡಬೇಕು ಎಂದು ಗ್ರಾಮಸ್ಥರು ಮನವಿ ಸಲ್ಲಿಸದರು. ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಲೆಔಟ್ ಗಳಿಗೆ ಸರಿಯಾದ ಸೌಲಭ್ಯಗಳಿಲ್ಲ. ತಾಲೂಕಿನ ಕೆಲವೊಂದು ಬಾರ್ ಗಳಲ್ಲಿ ಸೌಲಭ್ಯಗಳಿಲ್ಲ ಅದನ್ನು ಸರಿಪಡಿಸಬೇಕು ಎಂದು ನಾಗರೀಕರು ಜಿಲ್ಲಾಧಿಕಾರಿಗೆ ಒತ್ತಾಯ ಮಾಡಿದರು.

ಮೇಡ್ಲೆರಿ ಗ್ರಾಮದಲ್ಲಿ ಹತ್ತಾರು ವರ್ಷಗಳಿಂದ ಗುಡಿಸಲು ಹಾಕಿಕೊಂಡಿರುವ ಮನೆಗಳ ತೆರವುಗೊಳಿಸಲಾಗಿದ್ದು, ಕುಟುಂಬಗಳು ಬೀದಿಗೆ ಬಿದ್ದಿದ್ದು ನಮಗೆ ವಾಸಿಸಲು ಜಾಗ ನೀಡಬೇಕು ಎಂದು ಹತ್ತಾರು ಮಹಿಳೆಯರು ಅಳಲು ತೊಡಿಕೊಂಡರು. ಮೆಡ್ಲೇರಿ ಗ್ರಾಮದಲ್ಲಿ ಜಲ್ ಜೀವನ ಮಷಿನ್ ಅಡಿ ಕೆಲಸ ಕಳಪೆಯಾಗಿದ್ದು, ಅದನ್ನು ಸರಿಪಡಿಸಲು ಡಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಉಪವಿಭಾಗಧಿಕಾರಿ ಚನ್ನಬಸಪ್ಪ, ಸಿಇಒ ಅಕ್ಷಯ ಶ್ರೀಧರ, ತಹಸೀಲ್ದಾರ ಗುರುಬಸವರಾಜ, ಇಓ ಸುಮಲತಾ, ಬಿಇಓ ಎಂ.ಎಚ್.ಪಾಟೀಲ, ಡಿಎಸ್ಪಿ ಡಾ.ಗಿರೀಶ್ ಬೋಜಣ್ಣನವರ ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!