ರಾಣೆಬೇನ್ನೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ತಾಲೂಕಿನಲ್ಲಿ ಆದಂತಹ ಕೆಲವು ತಪ್ಪುಗಳನ್ನು ನಾನು ತಿದ್ದಿಕೊಳ್ಳುತ್ತೆನೆ ಎಂದು ಶಾಸನ ಪ್ರಕಾಶ ಕೋಳಿವಾಡ ಹೇಳಿದರು.
ರಾಣೆಬೇನ್ನೂರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಲೋಕಸಭಾ ಚುನಾವಣೆಯ ಕಾರ್ಯಕರ್ತರ ಆತ್ಮಾವಲೋಕನ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಆನಂದಸ್ವಾಮಿ ಗಡ್ಡದೇವರಮಠ ವಿರುದ್ಧ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಕೇವಲ ನಲವತ್ತು ಸಾವಿರ ಮತಗಳಿಂದ ಗೆಲವು ಸಾಧಿಸಿದ್ದಾರೆ. ಆದರೆ ಅವರದು ಗೆಲುವು ಅಲ್ಲ ಎಂಬುದು ನಮ್ಮ ಕಾಂಗ್ರೆಸ್ ಪಕ್ಷದ ಮುಖಂಡರ ಮಾತಾಗಿದೆ.
ಮುಂಬರುವ ಜಿಲ್ಲಾ ಪಂಚಾಯತ ಹಾಗೂ ತಾಲೂಕ ಪಂಚಾಯತ ಚುನಾವಣೆ ಗೆಲ್ಲುವುದೆ ನಾವೇ ಎಂದು ಪ್ರಕಾಶ ಕೋಳಿವಾಡ ಶಪಥ ಮಾಡಿದರು.
ಪರಾಜಿತ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ರಾಣೆಬೇನ್ನೂರು ತಾಲೂಕಿನಲ್ಲಿ ಶಾಸಕ ಪ್ರಕಾಶ ಕೋಳಿವಾಡ ಹಾಗೂ ಮಾಜಿ ಸಚಿವ ಆರ್.
ಶಂಕರ್ ಜತೆಗೂಡಿ ನನಗೆ ಎಂಬತೇಂಟು ಸಾವಿರ ಮತಗಳನ್ನು ಕೊಡಿಸುವದರ ಮೂಲಕ ನನಗೆ ಶಕ್ತಿ ತುಂಬಿದ್ದಾರೆ ಅವರಿಗೆ ನಾನು ಕೃತಜ್ಞತೆ ಹೇಳುವುದರ ಜತೆಗೆ ನಿಮ್ಮ ಅಭಿಮಾನ ನನಗೆ ಆತ್ಮಸ್ಥೈರ್ಯ ತುಂಬಿದೆ.
ಕಾಂಗ್ರೆಸ್ ಪಕ್ಷ ಸೋಲಿಗೆ ಗ್ರಾಮಗಳಲ್ಲಿ ನಮ್ಮ ಸೋಲಿಗೆ ನಗರಗಳೆ ಕಾರಣ ಎಂದು ಹೇಳಿದರು. ಮುಂಬರುವ ತಾಲೂಕ ಪಂಚಾಯತ ಹಾಗೂ ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ನೀಡಿದರೆ ನನ್ನ ಗೆಲುವು ನೀಡಿದಂತೆ ಎಂದು ಕಾರ್ಯಕರ್ತರ ಹತ್ತಿರ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಸೇರಿದಂತೆ ತಾಲೂಕಿನ ನೂರಾರು ಕಾರ್ಯಕರ್ತರ ಭಾಗಿಯಾಗಿದ್ದರು
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.