ರಾಣೆಬೇನ್ನೂರು: ನಗರದ ಹೃದಯ ಭಾಗದಲ್ಲಿರುವ ಬಸ್ ನಿಲ್ದಾಣದಲ್ಲಿ ಮಹಿಳೆಯರ ವೇನಿಟಿ ಬ್ಯಾಗ್ ಕಳ್ಳತನ ಮಾಡುತ್ತಿದ್ದ ಐನಾತಿ ಗಂಡ-ಹೆಂಡತಿಯನ್ನ ಶಹರ ಪೋಲಿಸರು ಸೆದೆ ಬಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು ರಾಣೆಬೇನ್ನೂರು ನಗರದ ಬಸ್ ನಿಲ್ದಾಣದಲ್ಲಿ ಸುಮಾರು ಒಂದು ವರ್ಷಗಳಿಂದ ಮಹಿಳೆಯರು ಬ್ಯಾಗ ಕಳ್ಳತನ ಹೆಚ್ಚಾಗುತ್ತಿದ್ದು, ಹಲವು ಪ್ರಕರಣಗಳು ಶಹರ ಠಾಣೆಯಲ್ಲಿ ದಾಖಲಾಗಿದ್ದವು. ಇದರಿಂದ ಶಹರ ಪೋಲಿಸರಿಗೆ ದೊಡ್ಡ ತೆಲೆ ನೋವು ಉಂಟಾಗಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಶಹರ ಪೊಲೀಸರು ಬಸ್ ನಿಲ್ದಾಣದಲ್ಲಿ ಕಳ್ಳತನಕ್ಕೆ ಹೊಂಚು ಹಾಕಿ ಕೂತಿದ್ದ ಗದಗ ಮೂಲದ ಭಜರಂಗ ಜಾಧವ ಹಾಗೂ ಅವನ ಪತ್ನಿ ಲತಾ ಜಾಧವ ಎಂಬ ಐನಾತಿ ಗಂಡ ಹೆಂಡತಿಯನ್ನು ಬಂಧನ ಮಾಡಿದ್ದಾರೆ.
ಇವರು ಕಳ್ಳತನ ಮಾಡಿದ್ದ 21 ಗ್ರಾಂ ಬಂಗಾರ ಹಾಗೂ ಹಣವನ್ನು ವಶಪಡಿಸಿಕೊಂಡು ಜೈಲಿಗೆ ಅಟ್ಟಿದ್ದಾರೆ.
ಇಬ್ಬರು ಐನಾತಿ ಗಂಡ ಹೆಂಡತಿಯನ್ನು ಎಸ್ಪಿ ಅಂಶುಕುಮಾರ, ಡಾ.ಗಿರೀಶ ಭೋಜಣ್ಣನವರ ಮಾರ್ಗದರ್ಶನ ಮೂಲಕ ಶಹರ ಠಾಣೆಯ ಸಿಪಿಐ ಡಾ.ಶಂಕರ್, ಪಿಎಸ್ಐ ಗಡ್ಡೆಪ್ಪ ಗುಂಜಟಗಿ ಸಿಬ್ಬಂದಿಗಳಾದ ಪಿ.ಕೆ.ಸನದಿ, ಸಿ.ಬಿ.ಕಡ್ಲೆಪ್ಪನವರ, ವೈ.ಬಿ.ಓಲೇಕಾರ, ರಮೇಶ ಕುಸಗೂರು ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಕಳ್ಳರ ಪತ್ತೆ ಹಚ್ಚಿದ್ದಾರೆ.
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.