ಕೈ-ಕಮಲ ನಡುವೆ ರಾಜಕೀಯ ಪ್ರತಿಷ್ಠೆ; ನಗರಸಭೆ ಸಾಮಾನ್ಯ ಸಭೆ ಮುಂದೂಡಿಕೆ.

ಹಾನಗಲ್ ತಹಸೀಲ್ದಾರ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ.

ಬಿಗರ ಊಟ ಮಾಡಿ ಬರುತ್ತಿದ್ದವರು ಮಸಣಕ್ಕೆ *ನಿಂತಿದ್ದ ಟ್ರ್ಯಾಕ್ಟರ್ ಟ್ರೈಲರ್ ಗೆ ಟಾಟಾ ಸುಪ್ರೋ ಡಿಕ್ಕಿ* *ಸ್ಥಳದಲ್ಲಿಯೆ ಮೂವರ ದುರ್ಮರಣ, 20ಕ್ಕೂ ಅಧಿಕರಿಗೆ ಗಂಭೀರ ಗಾಯ*

ತಾಪಂ ಪ್ರಭಾರ ಇಓ ಬಸವರಾಜ ಶಿಡೇನೂರ ಬಳಿ ಒಂದೂವರೆ ಕೋಟಿ ಆಸ್ತಿ..

ಕಂದಾಯ ನಿರೀಕ್ಷ ಅಶೋಕ‌ ಅರಳೇಶ್ವರ ಬಳಿ ಕೋಟ್ಯಾಂತರ ಆಸ್ತಿ ಪತ್ತೆ.

ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ* *ಸವಣೂರ ತಾಪಂ ಪ್ರಭಾರ ಇಓ, ರಾಣೆಬೆನ್ನೂರ ಆರ್ ಐ ಮನೆ ಮೇಲೆ ದಾಳಿ..

ಚಿರತೆ ದಾಳಿ ಓರ್ವ ರೈತ ಸಾವು. ಇನ್ನೋರ್ವ ನಿಗೆ ಗಂಭೀರ ಗಾಯ.

ಸಮಾಜದಲ್ಲಿ ದುರ್ಬಲರನ್ನ ಗುರುತಿಸುವುದು ನಿಜವಾದ ಪತ್ರಿಕೋದ್ಯಮ; ಮಾಲತೇಶ ಅಂಗೂರು

ವೈದ್ಯನ ಮೇಲೆ ಹಲ್ಲೆ ಮಾಡಿದ 11 ಜನರ ಬಂಧನ..

ಎಸ್ಟಿ ನಕಲಿ ಜಾತಿ ಪ್ರಮಾಣ ಪತ್ರ ವಿತರಣೆ ಹಾಗೂ ಅನ್ಯ ಪ್ರಬಲ ಜಾತಿ ಎಸ್ಟಿ ಸೇರ್ಪಡೆ ವಿರೋಧಿಸಿ ವಾಲ್ಮೀಕಿ ಸಮುದಾಯ ಪ್ರತಿಭಟನೆ.

ಸರಿಯಾದ ಮಾಹಿತಿ ನೀಡುವ ಮೂಲಕ ಸಮೀಕ್ಷೆ ಯಶಸ್ವಿ ಮಾಡಿ ಶಾಸಕ ಪ್ರಕಾಶ ಕೋಳಿವಾಡ

ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಮಾತನಾಡಿದ್ದಾರೆ ಎಂದು ಹಲ್ಲಗೈದ ಯುವಕರು. ಆರೋಪ-ಪ್ರತ್ಯಾರೋಪದ ಪ್ರಕರಣ ದಾಖಲು.

ಪೌರಕಾರ್ಮಿಕರ ಸಮಾಜದ ಸ್ವಚ್ಛ ಮುಖಿಗಳು, ಅಮೂಲ್ಯ ರತ್ನಗಳು ಪೌರಾಯುಕ್ತ ಎಫ್.ಐ.ಇಂಗಳಗಿ

ICAR ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ದೇಶಕ್ಕೆ ಐದನೇ ಸ್ಥಾನ ಗಳಿಸಿದ ಪೋಲಿಸ್ ಪೇದೆ ಪುತ್ರಿ..

ಶಿಕ್ಷಕರಿಗೆ ಶೀಘ್ರವಾಗಿ ಹಳೆ ಪಿಂಚಣಿ ಯೋಜನೆ ಜಾರಿ ಮಾಡುತ್ತವೆ ಸಚಿವ ಮಧು ಬಂಗಾರಪ್ಪ.

ಕವಲೇತ್ತು ಗ್ರಾಪಂನಲ್ಲಿ ಲಕ್ಷಾಂತರ ರೂ ಅವ್ಯವಹಾರ ಮಾಡಿದ ಪಿಡಿಓ.

ಅನುದಾನಿತ ಶಾಲಾ ಶಿಕ್ಷಕರ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಸೆ.14ರಂದು

ಅಕ್ರಮ ಸಂಬಂಧಕ್ಕೆ ಮುಗ್ಧ ಕಂದಮ್ಮನ್ನು ಕೊಂದ ದುರುಳ ಹೆತ್ತ ತಾಯಿ..

ನಕಲಿ ಬೀಜದಂಗಡಿಯವರ ಜತೆ “ಡೀಲ್ ಮಾಡಿಕೊಂಡಿಲ್ಲ” ಶಾಸಕ ಪ್ರಕಾಶ ಕೋಳಿವಾಡ ಆಕ್ರೋಶ.

ಅನುಭವ ಮಂಟಪ ಮಾದರಿ ಗಣಪತಿ ಸಮಿತಿ ವತಿಯಿಂದ ರಕ್ತದಾನ ಶಿಬಿರ

ಪೌರಕಾರ್ಮಿಕರ ಸಮಾಜದ ಸ್ವಚ್ಛ ಮುಖಿಗಳು, ಅಮೂಲ್ಯ ರತ್ನಗಳು ಪೌರಾಯುಕ್ತ ಎಫ್.ಐ.ಇಂಗಳಗಿ

ರಾಣೆಬೆನ್ನೂರ: ಪೌರಕಾರ್ಮಿಕರು ಸರಾಯಿ ಗುಟ್ಕಾ ಸೇರಿದಂತೆ ಇತರ ದುಶ್ಚಟಗಳಿಂದ ದೂರವಿರಬೇಕು. ಇದರಿಂದ ನಿಮಗೂ ಹಾಗೂ ನಿಮ್ಮನ್ನು ನಂಬಿದ ಗಂಡ, ಹೆಂಡತಿ ಮಕ್ಕಳಿಗೂ ಕ್ಷೇಮ ಎಂದು ಪೌರಾಯುಕ್ತರಾದ ಎಫ್.ಐ.ಇಂಗಳಗಿ ಹೇಳಿದರು.

ಶನಿವಾರ ನಗರದ ಆಂಗ್ಲೋ ಉರ್ದು ಮೈದಾನದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಂಪ್ರದಾಯದಂತೆ ಶಿಕ್ಷಕರ, ಪೋಷಕರ, ಮಕ್ಕಳ, ಸಾಕ್ಷರತಾ ಸೇರಿದಂತೆ ಇತರ ದಿನಾಚರಣೆಯನ್ನು ಹೇಗೆ ಮಾಡುತ್ತೇವೆಯೋ ಹಾಗೆಯೇ ಪೌರಕಾರ್ಮಿಕರ ಮಹತ್ವ ಅರಿಯಲು ಪ್ರತಿ ವರ್ಷ ಈ ದಿನಾಚರಣೆ ಮಾಡಲಾಗುತ್ತಿದ್ದು, ಅಂದು ಅವರಿಗಾಗಿ ಮನರಂಜನೆ, ಕ್ರೀಡೆ, ಸನ್ಮಾನ ಸೇರಿದಂತೆ ಇತರ ಕಾರ್ಯಕ್ರಮ ಗಳನ್ನು ಕಲ್ಪಿಸಲಾಗುವುದು ಎಂದರು.

ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ
ಶ್ರಮಿಕ ಜೀವಿಗಳಾಗಿರುವ ಪೌರಕಾರ್ಮಿಕರು ನಗರದ ಸ್ವಚ್ಛತೆಯ ಹರಿಕಾರರಾಗಿದ್ದಾರೆ ಹಾಗೂ ನಗರದ ಸೌಂದರ್ಯಿಕರಣಕ್ಕೆ ಕಾರಣೀಭೂತರಾಗಿದ್ದಾರೆಂದು ಅಭಿಪ್ರಾಯಪಟ್ಟರು. ಪೌರಕಾರ್ಮಿಕರಿಲ್ಲದೆ ನಗರದ ಸ್ವಚ್ಛತೆ ಹಾಗೂ ಸೌಂಧರ್ಯಿಕರಣ ಅಸಾಧ್ಯ , ಅಂತಹ ಜವಾಬ್ದಾರಿಯಲ್ಲಿರುವ ಪೌರಕಾರ್ಮಿಕರು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ ನಗರಸಭೆಗೆ ಕೀರ್ತಿ ತರಲು ಮುಂದಾಗಬೇಕು ಎಂದರು.

ಪೌರಕಾರ್ಮಿಕರು ಕ್ರಿಕೆಟ್, ವಾಲಿಬಾಲ್, ಗುಂಡು ಎಸೆತ್, ಶಟಲ್ ಕಾಕ್, ಮ್ಯುಸಿಕಲ್ ಚೆರ್ ಹಾಗೂ ವೈಯಕ್ತಿಕ ಕ್ರೀಡೆ ಆಟ ಆಡುವ ಮೂಲಕ ಗಮನ ಸೆಳೆದರು.

ನಗರಸಭೆ ಅಧ್ಯಕ್ಷೆ ಚಂಪಕಾ ಬೀಸಲಹಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಕರೆಡೇಣ್ಣನವರ, ಸದಸ್ಯರುಗಳಾದ ಪುಟ್ಟಪ್ಪ ಮರಿಯಮ್ಮನವರ, ಪ್ರಕಾಶ ಪೂಜಾರ, ಶೇಖಪ್ಪ ಹೊಸಗೌಡ್ರ ಸೇರಿದಂತೆ ಪರಿಸರ ಇಂಜಿನಿಯರ ಮಹೇಶ ಕೋಡಬಾಳ, ಎಇಇ ಎಸ್ ಬಿ ಹಾದಿಮನಿ, ಎಸ್ ಬಿ ಮರಿಗೌಡ್ರ, ಆರೋಗ್ಯ ನಿರೀಕ್ಷಕರಾದ ಮಧುರಾಜ್ ಕಂಬಳಿ, ರಾಜು ಭೋವಿ, ಶೃತಿ ಎಂ, ರಾಘವೇಂದ್ರ ಗಾವಡೆ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಏಳುಕೋಟೆಪ್ಪ ಗೋಣಿಬಸಮ್ಮನವರ, ಕಂದಾಯ ನಿರೀಕ್ಷಕ ವಸಂತ, ಮಾರುತಿ ಪಾಟೀಲ ಹಾಜರಿದ್ದರು

ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!