ಕೈ-ಕಮಲ ನಡುವೆ ರಾಜಕೀಯ ಪ್ರತಿಷ್ಠೆ; ನಗರಸಭೆ ಸಾಮಾನ್ಯ ಸಭೆ ಮುಂದೂಡಿಕೆ.

ಹಾನಗಲ್ ತಹಸೀಲ್ದಾರ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ.

ಬಿಗರ ಊಟ ಮಾಡಿ ಬರುತ್ತಿದ್ದವರು ಮಸಣಕ್ಕೆ *ನಿಂತಿದ್ದ ಟ್ರ್ಯಾಕ್ಟರ್ ಟ್ರೈಲರ್ ಗೆ ಟಾಟಾ ಸುಪ್ರೋ ಡಿಕ್ಕಿ* *ಸ್ಥಳದಲ್ಲಿಯೆ ಮೂವರ ದುರ್ಮರಣ, 20ಕ್ಕೂ ಅಧಿಕರಿಗೆ ಗಂಭೀರ ಗಾಯ*

ತಾಪಂ ಪ್ರಭಾರ ಇಓ ಬಸವರಾಜ ಶಿಡೇನೂರ ಬಳಿ ಒಂದೂವರೆ ಕೋಟಿ ಆಸ್ತಿ..

ಕಂದಾಯ ನಿರೀಕ್ಷ ಅಶೋಕ‌ ಅರಳೇಶ್ವರ ಬಳಿ ಕೋಟ್ಯಾಂತರ ಆಸ್ತಿ ಪತ್ತೆ.

ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ* *ಸವಣೂರ ತಾಪಂ ಪ್ರಭಾರ ಇಓ, ರಾಣೆಬೆನ್ನೂರ ಆರ್ ಐ ಮನೆ ಮೇಲೆ ದಾಳಿ..

ಚಿರತೆ ದಾಳಿ ಓರ್ವ ರೈತ ಸಾವು. ಇನ್ನೋರ್ವ ನಿಗೆ ಗಂಭೀರ ಗಾಯ.

ಸಮಾಜದಲ್ಲಿ ದುರ್ಬಲರನ್ನ ಗುರುತಿಸುವುದು ನಿಜವಾದ ಪತ್ರಿಕೋದ್ಯಮ; ಮಾಲತೇಶ ಅಂಗೂರು

ವೈದ್ಯನ ಮೇಲೆ ಹಲ್ಲೆ ಮಾಡಿದ 11 ಜನರ ಬಂಧನ..

ಎಸ್ಟಿ ನಕಲಿ ಜಾತಿ ಪ್ರಮಾಣ ಪತ್ರ ವಿತರಣೆ ಹಾಗೂ ಅನ್ಯ ಪ್ರಬಲ ಜಾತಿ ಎಸ್ಟಿ ಸೇರ್ಪಡೆ ವಿರೋಧಿಸಿ ವಾಲ್ಮೀಕಿ ಸಮುದಾಯ ಪ್ರತಿಭಟನೆ.

ಸರಿಯಾದ ಮಾಹಿತಿ ನೀಡುವ ಮೂಲಕ ಸಮೀಕ್ಷೆ ಯಶಸ್ವಿ ಮಾಡಿ ಶಾಸಕ ಪ್ರಕಾಶ ಕೋಳಿವಾಡ

ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಮಾತನಾಡಿದ್ದಾರೆ ಎಂದು ಹಲ್ಲಗೈದ ಯುವಕರು. ಆರೋಪ-ಪ್ರತ್ಯಾರೋಪದ ಪ್ರಕರಣ ದಾಖಲು.

ಪೌರಕಾರ್ಮಿಕರ ಸಮಾಜದ ಸ್ವಚ್ಛ ಮುಖಿಗಳು, ಅಮೂಲ್ಯ ರತ್ನಗಳು ಪೌರಾಯುಕ್ತ ಎಫ್.ಐ.ಇಂಗಳಗಿ

ICAR ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ದೇಶಕ್ಕೆ ಐದನೇ ಸ್ಥಾನ ಗಳಿಸಿದ ಪೋಲಿಸ್ ಪೇದೆ ಪುತ್ರಿ..

ಶಿಕ್ಷಕರಿಗೆ ಶೀಘ್ರವಾಗಿ ಹಳೆ ಪಿಂಚಣಿ ಯೋಜನೆ ಜಾರಿ ಮಾಡುತ್ತವೆ ಸಚಿವ ಮಧು ಬಂಗಾರಪ್ಪ.

ಕವಲೇತ್ತು ಗ್ರಾಪಂನಲ್ಲಿ ಲಕ್ಷಾಂತರ ರೂ ಅವ್ಯವಹಾರ ಮಾಡಿದ ಪಿಡಿಓ.

ಅನುದಾನಿತ ಶಾಲಾ ಶಿಕ್ಷಕರ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಸೆ.14ರಂದು

ಅಕ್ರಮ ಸಂಬಂಧಕ್ಕೆ ಮುಗ್ಧ ಕಂದಮ್ಮನ್ನು ಕೊಂದ ದುರುಳ ಹೆತ್ತ ತಾಯಿ..

ನಕಲಿ ಬೀಜದಂಗಡಿಯವರ ಜತೆ “ಡೀಲ್ ಮಾಡಿಕೊಂಡಿಲ್ಲ” ಶಾಸಕ ಪ್ರಕಾಶ ಕೋಳಿವಾಡ ಆಕ್ರೋಶ.

ಅನುಭವ ಮಂಟಪ ಮಾದರಿ ಗಣಪತಿ ಸಮಿತಿ ವತಿಯಿಂದ ರಕ್ತದಾನ ಶಿಬಿರ

ದೇವರಗುಡ್ಡ ಮಾಲತೇಶ ಸ್ವಾಮಿಯ ಆಡಳಿತ ತಹಸೀಲ್ದಾರ್ ಸುಪರ್ದಿಗೆ…

ರಾಣೆಬೆನ್ನೂರ:ತಾಲೂಕಿನ ದೇವರಗುಡ್ಡ ಶ್ರೀ ಮಾಲತೇಶ ಸ್ವಾಮಿ ದೇವಸ್ಥಾನ ಸಮಿತಿಗೆ ಹೊಸ ಆಡಳಿತ ಮಂಡಳಿ ರಚಿಸುವ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಈಗಿರುವ ಆಡಳಿತ  ಸಲ್ಲಿಸಿದ್ದ ತಡೆಯಾಜ್ಞೆ ಅರ್ಜಿಯನ್ನು ರದ್ದುಗೊಳಿಸಿ ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠ ಸೋಮವಾರ ಆದೇಶ ಹೊರಡಿಸಿದೆ.

ಶ್ರೀ ಮಾಲತೇಶ ದೇವಸ್ಥಾನ ಸಮಿತಿ ಹಳೇ ಸಮಿತಿ ಕಳೆದ 25 ವರ್ಷಗಳಿಂದ ಬದಲಾಗಿಲ್ಲ. ಆದ್ದರಿಂದ ಹಳೇ ಸಮಿತಿಯ ಅವಧಿ ಮುಗಿದಿದ್ದು ಹೊಸ ಸಮಿತಿ ಆಯ್ಕೆ ಮಾಡಬೇಕು ಎಂದು ಗ್ರಾಮಸ್ಥರು, ದೇವಸ್ಥಾನದ ಬಾಬುದಾರರು ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾ ನ್ಯಾಯಾಲಯ ಹೊಸ ಸಮಿತಿ ರಚನೆಗೆ ಜೂ. 26 ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹಳೇ ಸಮಿತಿಯವರು ಹೊಸ ಸಮಿತಿ ರಚನೆ ಮಾಡದಂತೆ ತಡೆಯಾಜ್ಞೆ ನೀಡಬೇಕು ಎಂದು ಜು. 1ರಂದು ಧಾರವಾಡ ಹೈಕೋರ್ಟ್ ನ ಏಕ ಸದಸ್ಯ ಪೀಠದ ಮೊರೆ ಹೋಗಿದ್ದರು.
ಇದರ ಬೆನ್ನಲ್ಲೆ ದೇವರಗುಡ್ಡದ ಗ್ರಾಮಸ್ಥರು, ಬಾಬುದಾರರ ಪರವಾಗಿ ಹಿರಿಯ ವಕೀಲ ಶರಣು ಅಂಗಡಿ ಹೊಸ ಸಮಿತಿಗೆ ತಡೆಯಾಜ್ಞೆ ನೀಡಬಾರದು. ಜತೆಗೆ ಈ ಪ್ರಕರಣ ರದ್ದುಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಆಗ ಧಾರವಾಡ ಹೈಕೋರ್ಟ್ ನ ಏಕ ಸದಸ್ಯ ಪೀಠ ತಡೆಯಾಜ್ಞೆ ರದ್ದುಗೊಳಿಸಿತ್ತು.
ಇದರಿಂದಾಗಿ ಹಳೇ ಸಮಿತಿಯವರು ಮತ್ತೇ ಜು. 24ರಂದು ಧಾರವಾಡ ಹೈಕೋರ್ಟ್ ನ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ವಿಭಾಗೀಯ ಪೀಠ ಹಳೇ ಸಮಿತಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಹೈಕೋರ್ಟ್ ನ ವಿಭಾಗೀಯ ಪೀಠ ತಡೆಯಾಜ್ಞೆ ಅರ್ಜಿ ವಜಾಗೊಳಿಸಿದ ಹಿನ್ನೆಲೆಯಲ್ಲಿ ತಾಲೂಕಿನ ದೇವರಗುಡ್ಡ ಶ್ರೀ ಮಾಲತೇಶ ಸ್ವಾಮಿ ದೇವಸ್ಥಾನದ ಸಂಪೂರ್ಣ ಆಡಳಿತವನ್ನು ತಹಸೀಲ್ದಾರ್ ಸುಪರ್ದಿಗೆ ನೀಡಬೇಕು ಎಂದು ಧಾರವಾಡ ಜಿಲ್ಲಾ ಪ್ರಧಾನ  ಸತ್ರ ನ್ಯಾಯಾಧೀಶರು ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ತಾಲೂಕು ದಂಡಾಧಿಕಾರಿ ಹಾಗೂ ತಹಸೀಲ್ದಾರ್ ಆರ್.ಎಚ್. ಭಾಗವಾನ ದೇವಸ್ಥಾನಕ್ಕೆ ಭೇಟಿ ನೀಡಿ ಆಡಳಿತ ಕಚೇರಿಯಲ್ಲಿ ಪ್ರಭಾರ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು.

ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!