ರಾಣೆಬೆನ್ನೂರ: ತಂದೆ ಸಾವಿನ ನೋವಿನಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಅಣ್ಣ-ತಂಗಿಗೆ ಉತ್ತಮ ಅಂಕ ದೊರೆತಿದೆ.
ತಾಲೂಕಿನ ಪದ್ಮಾವತಿಪುರ ತಾಂಡದ ( ಬಸಲಿಕಟ್ಟಿ ತಾಂಡ) ರಕ್ಷಿತಾ ಹನುಮಂತಪ್ಪ ಲಮಾಣಿ ಮತ್ತು ಧನರಾಜ ಹನುಮಂತಪ್ಪ ಲಮಾಣಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು.
ತಂಗಿ ರಕ್ಷಿತಾಗೆ ಶೇ. 83 ಅಂಕ ದೊರೆತಿದ್ದರೆ, ಅಣ್ಣ ಧನರಾಜನಿಗೆ ಶೇ. 85ರಷ್ಟು ಅಂಕ ದೊರೆತಿದೆ.
ಇವರ ತಂದೆ ಹನುಮಂತಪ್ಪ ಎಸ್ಸೆಸ್ಸೆಲ್ಸಿ ಹಿಂದಿ ವಿಷಯದ ಪರೀಕ್ಷೆ ದಿನದಂದು ಬೆಳಗಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದರು. ತಂದೆಯ ಶವ ಮನೆಯಲ್ಲಿದ್ದರೂ ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದು ಬಂದಿದ್ದರು.
ಮಕ್ಕಳು ಪರೀಕ್ಷೆ ಬರೆದು ಬಂದ ನಂತರ ತಂದೆಯ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು.
More Stories
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.
ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಮತ್ತು ವೃತ್ತ ಲೋಕಾರ್ಪಣೆ ನಾಡಿದ್ದು