ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ

ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.

ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಮತ್ತು‌ ವೃತ್ತ ಲೋಕಾರ್ಪಣೆ ನಾಡಿದ್ದು

ರಾಣೆಬೇನ್ನೂರ ತಾಲೂಕ ಹಸಿರಿಕರಣಕ್ಕೆ “ಟ್ರೀ ಪಾರ್ಕ್” ಶಾಸಕ ಪ್ರಕಾಶ ಕೋಳಿವಾಡ

ನಗರಸಭೆ ನೂತನ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ರಮೇಶ ಕರಡೆಣ್ಣನವರ ಆಯ್ಕೆ.

ಅಗಡಿ ತೋಟಕ್ಕೆ ಹೊರಟ್ಟವರು ಕೈಲಾಸಕ್ಕೆ ಹೋದರು, ಮೃತಪಟ್ಟವರ ವಿವರ ಇಲ್ಲಿದೆ.

ಮೋಟೆಬೆನ್ನೂರು ಬಳಿ ಭೀಕರ ಅಪಘಾತ, ರಾಣೆಬೇನ್ನೂರು ನಗರದ ಆರು ಜನ ಸಾವು.

ಪರಮ ಭ್ರಷ್ಟ ಲಂಚಾವತಾರಿ ಸಂವಿಧಾನ ವಿರೋಧಿ ವೈದ್ಯ ಡಾ” ಪರಮೇಶ್ವರಪ್ಪ ಅಮಾನತಗೆ ಆಗ್ರಹ

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾವೇರಿಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲತ್ತೆ: ಸಿ.ಎಂ ಭರವಸೆ

ರಾಹುತನಕಟ್ಟಿ ಗ್ರಾಪಂ ಮತ್ತೆ ಬಿಜೆಪಿ ಬೆಂಬಲಿತರ ತೆಕ್ಕೆಗೆ.

ಸ್ಮಶಾನ ಜಾಗಕ್ಕಾಗಿ ತಾಲೂಕಿನ ಕೃಷ್ಣಾಪುರ ಗ್ರಾಮಸ್ಥರಿಂದ ಸಿಎಂಗೆ ಕಪ್ಪು ಪಟ್ಟಿ‌ ಪ್ರದರ್ಶನಕ್ಕೆ ಸಜ್ಜು.

ತಂದೆ ಶವ ಮನೆಯಲ್ಲಿಟ್ಟು ಕಣ್ಣೀರಿಡುತ್ತ ಪರೀಕ್ಷೆ ಬರೆದ ಅಣ್ಣ-ತಂಗಿಗೆ ಉತ್ತಮ ಅಂಕ; ತಂಗಿಗೆ ಶೇ. 83 ಅಣ್ಣನಿಗೆ ಶೇ. 85ರಷ್ಟು ಅಂಕ

ಶಿವಾನಂದ ಪಾಟೀಲ ರಾಜೀನಾಮೆ ಪತ್ರದಲ್ಲಿ ಏನು ಹೇಳಿದ್ದಾರೆ.

ಮೆಡ್ಲೇರಿ ರಸ್ತೆಯಿಂದ ಹುಣಸಿಕಟ್ಟಿ ತನಕ ಇಂದು ರಾತ್ರಿ ವಿದ್ಯುತ್ ಸರಬರಾಜು ಡೌಟು..

ಕಿತ್ತಾಟ, ಕಿರಚಾಟ ನಡುವೆ ನಗರಸಭೆ ಸ್ಥಾಯಿ ಸಮಿತಿಗೆ ಅನುಮೋದನೆ.

ಇಸ್ವತ್ತು ಉತಾರ ನೀಡಲು ಲಂಚ ಪಡೆಯುತ್ತಿದ್ದ ಪಿಡಿಓ, ಉಪಾಧ್ಯಕ್ಷ ಸೇರಿ ಮೂರ ಜನ ಗ್ರಾಪಂ ಸದಸ್ಯರ ಬಂಧನ.

ರಷ್ಯಾದಲ್ಲಿ ಡಾ.ನಾಗರಾಜ ಎಸ್.ಕೆ ಅವರಿಗೆ ಗ್ಲೋಬಲ್ ಅಚಿವರ್ಸ್ ಪ್ರಶಸ್ತಿ.

ಐಎಎಸ್‌ ಪಾಸ್ ಮಾಡಿದ ಸಚಿನ ಗುತ್ತೂರುಗೆ ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿ ಅದ್ದೂರಿ ಸ್ವಾಗತ..

ಟ್ರ್ಯಾ ಕ್ಟರ್‌ನಿಂದ ಬಿದ್ದು ಅಣ್ಣಾ-ತಮ್ಮಾ ಸಾವು, ನಾಲ್ವರಿಗೆ ಗಂಭೀರ ಗಾಯ

ಪೆಹಲ್ಗಾಂ ಹತ್ಯೆ ವಿಚಾರ ಬಿಟ್ಟು ರಾಜಕೀಯ ಭಾಷಣ. ರಸ್ತೆ ಬಂದ್ ಮಾಡಿದಕ್ಕೆ ಎಬಿವಿಪಿ ಮುಖಂಡ ಬಂಧನಕ್ಕೆ ಮುಂದಾದ ಪೋಲಿಸ್…

ಪೆಹಲ್ಗಾಂ ಹತ್ಯೆ ವಿಚಾರ ಬಿಟ್ಟು ರಾಜಕೀಯ ಭಾಷಣ. ರಸ್ತೆ ಬಂದ್ ಮಾಡಿದಕ್ಕೆ ಎಬಿವಿಪಿ ಮುಖಂಡ ಬಂಧನಕ್ಕೆ ಮುಂದಾದ ಪೋಲಿಸ್…

ರಾಣೆಬೇನ್ನೂರು: ಶ್ರೀನಗರದ ಪೆಹಲ್ಗಾಂನಲ್ಲಿ ಹಿಂದುಗಳು ಮೇಲೆ ಉಗ್ರರ ನಡೆಸಿದ ಹತ್ಯೆ ಖಂಡಿಸಿ ಎಬಿವಿಪಿ ಸಂಘಟನೆ ವತಿಯಿಂದ ನಗರದ ಬಸ್ ನಿಲ್ದಾಣ ವೃತ್ತದ ಬಳಿ ಗುರುವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಸಮಯದಲ್ಲಿ ಎಬಿವಿಪಿ ಮುಖಂಡನಿಗೆ ಸರಿಯಾದ ಮಾಹಿತಿ ಇರದ ಕಾರಣ ತಪ್ಪು ತಪ್ಪಾದ ಭಾಷಣ ಹಾಗೂ ರಾಜಕೀಯ ಭಾಷಣಕ್ಕೆ ಮುಂದಾದ ಹಿನ್ನೆಲೆ ಸುಮಾರು ಒಂದು ಕೀಮಿ ಸಂಚಾರ ದಟ್ಟಣೆ ಹೆಚ್ಚಾದ ಹಿನ್ನೆಲೆ ಪೋಲಿಸ ಹಾಗೂ ಎಬಿವಿಪಿ ಸಂಘಟನೆ ನಡುವೆ ವಾಗ್ವಾದ ನಡೆದ ಘಟನೆ ನಡೆದಿದೆ.

ಎಬಿವಿಪಿ ಮುಖಂಡ ಪೆಹಲ್ಗಾಂ ಹತ್ಯೆ ಬಗ್ಗೆ ಭಾಷಣ ಮಾಡುವಾಗ ಪೆಹಲ್ಗಾಂ ಬದಲಾಗಿ ಪುಲ್ವಾಮ್ ದಲ್ಲಿ  ಉಗ್ರರು ಹಿಂದುಗಳ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಭಾಷಣದಲ್ಲಿ ಭೋದನೆ ಮಾಡಿದರು. ನಂತರ ಪೆಹಲ್ಗಾಂ ಹತ್ಯೆಯಲ್ಲಿ ಮೃತನಾದ ಭರತ ಭೂಷಣ ಅವರು ರಾಣೆಬೇನ್ನೂರು ತಾಲೂಕಿನವರು ಎಂದು ಹೇಳಿದಾಗ ಪೋಲಿಸರ ಭಾಷಣದ ಸಮಯದಲ್ಲಿ ಜನರಿಗೆ ತಪ್ಪು ಸಂದೇಶ ನೀಡಬಾರದು ಎಂದು ಹೇಳಿದರು. ಇದಕ್ಕೆ ಎಬಿವಿಪಿ ಮುಖಂಡ ನಾನು ಯಾರಿಗೂ ತಪ್ಪು ಸಂದೇಶ ನೀಡುತ್ತಿಲ್ಲ ಎಂದು ಪೋಲಿಸರ ಜತೆ ವಾಗ್ವಾದ ಇಳಿದ ಘಟನೆ ನಡೆಯಿತು. ನಂತರ ಸುಮಾರು ಅರ್ಧ ಗಂಟೆ ರಾಜಕೀಯ ಭಾಷಣ ಮಾಡಿದ ಕಾರಣ ಸಂಚಾರ ದಟ್ಟಣೆ ಹೆಚ್ಚಾಗಿ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಯಿತು.

ಇದಾದ ನಂತರ ಸ್ಥಳಕ್ಕೆ ಉಪತಹಸೀಲ್ದಾರ ಮಾನವಿ ಪತ್ರ ಪಡೆಯಲು ಆಗಮಿಸಿದಾಗ ಎಬಿವಿಪಿ ಮುಖಂಡ ಸ್ಥಳಕ್ಕೆ  ಗ್ರೇಡ್-1 ತಹಸೀಲ್ದಾರ ಬರಬೇಕೆಂದು ಹಠ ಹಿಡಿದ. ಇದಕ್ಕೆ ಉಪತಹಸೀಲ್ದಾರ ಗರಂ ಆಗಿ ವಾಪಾಸು ಹೋಗಲು ಮುಂದಾದಾಗ ಪೋಲಿಸರ ಮತ್ತೆ ವಾಪಸು ಕರೆಸಿಕೊಂಡು ಮನವಿ ಪತ್ರ ಪಡೆಯಲು ಹೇಳಿದರು.

ನಂತರ ಸುಮಾರು ಒಂದು ಕೀಮಿ ವಾಹನಗಳ ಸಂಚಾರ ದಟ್ಟಣೆಯಾದ ಸಮಯದಲ್ಲಿ ಎಬಿವಿಪಿ ಮುಖಂಡ ಪೋಲಿಸರ ವಿರುದ್ಧ ಮತ್ತೆ ವಾಗ್ವಾದಕ್ಕೆ ಇಳಿದ ಕಾರಣ ಶಹರ ಪೋಲಿಸರು ಎಬಿವಿಪಿ ಮುಖಂಡನ ಬಂಧನಕ್ಕೆ ಮುಂದಾದ ಘಟನೆ ನಡೆಯಿತು.

ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!