ರಾಣೆಬೇನ್ನೂರು: ಶ್ರೀನಗರದ ಪೆಹಲ್ಗಾಂನಲ್ಲಿ ಹಿಂದುಗಳು ಮೇಲೆ ಉಗ್ರರ ನಡೆಸಿದ ಹತ್ಯೆ ಖಂಡಿಸಿ ಎಬಿವಿಪಿ ಸಂಘಟನೆ ವತಿಯಿಂದ ನಗರದ ಬಸ್ ನಿಲ್ದಾಣ ವೃತ್ತದ ಬಳಿ ಗುರುವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಸಮಯದಲ್ಲಿ ಎಬಿವಿಪಿ ಮುಖಂಡನಿಗೆ ಸರಿಯಾದ ಮಾಹಿತಿ ಇರದ ಕಾರಣ ತಪ್ಪು ತಪ್ಪಾದ ಭಾಷಣ ಹಾಗೂ ರಾಜಕೀಯ ಭಾಷಣಕ್ಕೆ ಮುಂದಾದ ಹಿನ್ನೆಲೆ ಸುಮಾರು ಒಂದು ಕೀಮಿ ಸಂಚಾರ ದಟ್ಟಣೆ ಹೆಚ್ಚಾದ ಹಿನ್ನೆಲೆ ಪೋಲಿಸ ಹಾಗೂ ಎಬಿವಿಪಿ ಸಂಘಟನೆ ನಡುವೆ ವಾಗ್ವಾದ ನಡೆದ ಘಟನೆ ನಡೆದಿದೆ.
ಎಬಿವಿಪಿ ಮುಖಂಡ ಪೆಹಲ್ಗಾಂ ಹತ್ಯೆ ಬಗ್ಗೆ ಭಾಷಣ ಮಾಡುವಾಗ ಪೆಹಲ್ಗಾಂ ಬದಲಾಗಿ ಪುಲ್ವಾಮ್ ದಲ್ಲಿ ಉಗ್ರರು ಹಿಂದುಗಳ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಭಾಷಣದಲ್ಲಿ ಭೋದನೆ ಮಾಡಿದರು. ನಂತರ ಪೆಹಲ್ಗಾಂ ಹತ್ಯೆಯಲ್ಲಿ ಮೃತನಾದ ಭರತ ಭೂಷಣ ಅವರು ರಾಣೆಬೇನ್ನೂರು ತಾಲೂಕಿನವರು ಎಂದು ಹೇಳಿದಾಗ ಪೋಲಿಸರ ಭಾಷಣದ ಸಮಯದಲ್ಲಿ ಜನರಿಗೆ ತಪ್ಪು ಸಂದೇಶ ನೀಡಬಾರದು ಎಂದು ಹೇಳಿದರು. ಇದಕ್ಕೆ ಎಬಿವಿಪಿ ಮುಖಂಡ ನಾನು ಯಾರಿಗೂ ತಪ್ಪು ಸಂದೇಶ ನೀಡುತ್ತಿಲ್ಲ ಎಂದು ಪೋಲಿಸರ ಜತೆ ವಾಗ್ವಾದ ಇಳಿದ ಘಟನೆ ನಡೆಯಿತು. ನಂತರ ಸುಮಾರು ಅರ್ಧ ಗಂಟೆ ರಾಜಕೀಯ ಭಾಷಣ ಮಾಡಿದ ಕಾರಣ ಸಂಚಾರ ದಟ್ಟಣೆ ಹೆಚ್ಚಾಗಿ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಯಿತು.
ಇದಾದ ನಂತರ ಸ್ಥಳಕ್ಕೆ ಉಪತಹಸೀಲ್ದಾರ ಮಾನವಿ ಪತ್ರ ಪಡೆಯಲು ಆಗಮಿಸಿದಾಗ ಎಬಿವಿಪಿ ಮುಖಂಡ ಸ್ಥಳಕ್ಕೆ ಗ್ರೇಡ್-1 ತಹಸೀಲ್ದಾರ ಬರಬೇಕೆಂದು ಹಠ ಹಿಡಿದ. ಇದಕ್ಕೆ ಉಪತಹಸೀಲ್ದಾರ ಗರಂ ಆಗಿ ವಾಪಾಸು ಹೋಗಲು ಮುಂದಾದಾಗ ಪೋಲಿಸರ ಮತ್ತೆ ವಾಪಸು ಕರೆಸಿಕೊಂಡು ಮನವಿ ಪತ್ರ ಪಡೆಯಲು ಹೇಳಿದರು.
ನಂತರ ಸುಮಾರು ಒಂದು ಕೀಮಿ ವಾಹನಗಳ ಸಂಚಾರ ದಟ್ಟಣೆಯಾದ ಸಮಯದಲ್ಲಿ ಎಬಿವಿಪಿ ಮುಖಂಡ ಪೋಲಿಸರ ವಿರುದ್ಧ ಮತ್ತೆ ವಾಗ್ವಾದಕ್ಕೆ ಇಳಿದ ಕಾರಣ ಶಹರ ಪೋಲಿಸರು ಎಬಿವಿಪಿ ಮುಖಂಡನ ಬಂಧನಕ್ಕೆ ಮುಂದಾದ ಘಟನೆ ನಡೆಯಿತು.
More Stories
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.
ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಮತ್ತು ವೃತ್ತ ಲೋಕಾರ್ಪಣೆ ನಾಡಿದ್ದು