ರಾಣೆಬೇನ್ನೂರು: ಡಿಸಿಎಂ ಡಿ.ಕೆ.ಶಿವಕುಮಾರ ಅವರಿಗೆ ಅಶ್ಲೀಲ ಪದ ಬಳಕೆ ಮಾಡಿದ್ದು ಮಾಜಿ ಶಾಸಕ ಅರುಣಕುಮಾರ ಪೂಜಾರ ಎಂಬುದು ಸಾಕ್ಷಿ ಸಮೇತ ಸಿಕ್ಕಿದೆ ಕೂಡಲೇ ಅವರು ಎರಡ್ಮೂರು ದಿನಗಳ ಒಳಗೆ ನೇರವಾಗಿ ಕ್ಷಮೆ ಕೇಳಬೇಕು ಇಲ್ಲವಾದರೆ ಅವರ ಸ್ವಗೃಹ ಮುಂದೆ ಹೋರಾಟ ಮಾಡಬೇಕಾಗುತ್ತದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಬೀರಪ್ಪ ಲಮಾಣಿ ಎಚ್ಚರಿಕೆ ನೀಡಿದರು.
ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾತನಾಡಿದ ಅವರು, ಪ್ರತಿಭಟನೆ ಸಮಯದಲ್ಲಿ ಮಾಜಿ ಶಾಸಕರು ಅವಾಚ್ಯ ಪದಗಳನ್ನು ಬಳಕೆ ಮಾಡಿರುವುದು ಕಂಡು ಬಂದಿದೆ. ಆದರೆ ತಮ್ಮ ತಪ್ಪನ್ನು ಮುಚ್ಚಿಕೊಳ್ಳುವ ಯತ್ನ ಮಾಡುತ್ತಿದ್ದಾರೆ. ಈ ಕೂಡಲೇ ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹ ಮಾಡಿದರು.
ನಿನ್ನೆ ದಿನ ಅವರು ಸುದ್ದಿಗೋಷ್ಠಿ ಮಾಡಿ ಆ ಪದವನ್ನು ನಾನು ಬಳಕೆ ಮಾಡಿಲ್ಲ ಎಂದು ಹೇಳಿದ್ದಾರೆ. ಆದರೆ ಆ ಪದ ಬಳಕೆ ಮಾಡಿದ್ದು ಕಾರ್ಯಕರ್ತರು ಎಂದು ಹೇಳಿ ಅದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ ಎಂದರೆ ಅವರು ತಪ್ಪು ಒಪ್ಪಿಕೊಂಡತಾಗಿದೆ ಎಂದರು. ಈ ಹಿನ್ನೆಲೆ ಅವರು ಡಿಸಿಎಂ ಅವರಿಗೆ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹ ಮಾಡಿದರು.
ಸುದ್ದಿಗೋಷ್ಠಿ ಸಮಯದಲ್ಲಿ ತಾಲೂಕ ನಗರ ಯುವ ಘಟಕ ಅಧ್ಯಕ್ಷ ಸದ್ದಾಂಖಾಜಿ, ಹನುಮಂತಪ್ಪ ಲಮಾಣಿ, ಹನುಮಂತಪ್ಪ ಹರಿಜನ, ಮಂಜು ಹುಣಸಿಕಟ್ಟಿ, ಕುಬೇರ ತೋಪಿನ್, ಶ್ರೀನಿವಾಸ ರೆಡ್ಡಿ ಇತರರು ಹಾಜರಿದ್ದರು.
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.