ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ

ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.

ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ

ಅರುಣಕುಮಾರ ಪೂಜಾರ ಜನ್ಮದಿನದ ನಿಮಿತ್ತ ನಾಳೆ ವಿವಿಧ ಕಾರ್ಯಕ್ರಮ

ನಂದಿಹಳ್ಳಿ ಗ್ರಾಮದಲ್ಲಿ ಸಾವಿನಲ್ಲಿ ಒಂದಾದ ದಂಪತಿಗಳು.!

ಶಾಸಕರ ಆಪ್ತಸಹಾಯಕ ಮನೆಯಲ್ಲಿ 21.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

ಹೆಂಡತಿ ಕತ್ತು ಕೊಯ್ದು ಕೊಲೆಗೆ ಯತ್ನಿಸಿದ ಪತಿರಾಯ..

ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಯುದ್ಧ ಟ್ಯಾಂಕರ್ ಸ್ಥಾಪನೆ ರಾಣೆಬೇನ್ನೂರು ಹೆಮ್ಮೆ; ಸಭಾಧ್ಯಕ್ಷ ಯು.ಟಿ.ಖಾದರ

ಸದನದಲ್ಲಿ ಆಡಿದ ಮಾತಿಗೆ ಕ್ಷಮೆಯಾಚಿಸುವೆ, ಪಕ್ಷಾತೀತ ಕಾರ್ಯಕ್ರಮಕ್ಕೆ ಸಾಥ್ ನೀಡಿ; ಶಾಸಕ ಪ್ರಕಾಶ ಕೋಳಿವಾಡ.

ಯುದ್ಧ ಟ್ಯಾಂಕರ್ ಕಟ್ಟೆಗೆ ಹಾಕಿರುವ ಶಾಸಕರ ಪೋಟೋ ಹಾಗೂ ಪಿಕೆಕೆ ಹೆಸರಿಗೆ ಬಿಜೆಪಿ ಆಕ್ಷೇಪ. ಸರ್ಕಾರದ ಅನುದಾನದಲ್ಲಿ ಶಾಸಕರು ಶಿಷ್ಟಾಚಾರ ಪಾಲಿಸಲಿ.

ನಿಂತಿದ್ದ ಟಿಪ್ಪರಗೆ ಬೈಕ್ ಡಿಕ್ಕಿ ಜೋಯಿಸರಹರಳಹಳ್ಳಿ ಗ್ರಾಮದ ಎಂಟೆಕ್ ಪದವಿಧರ ಸಾವು

ಕುರುಬ ಸಮುದಾಯ ಹಾಗೂ ಸಿಎಂ ವಿರುದ್ಧ ಅವಾಚ್ಯವಾಗಿ ನಿಂದನೆ ಮಾಡಿದವರು ಮೇಲೆ‌ ಕಾನೂನು ಕ್ರಮಕ್ಕೆ ಒತ್ತಾಯ..

ಡೆಂಗ್ಯೂ ಜ್ವರ ಶಂಕೆ ಹಿನ್ನೆಲೆ ಯುವಕ ಸಾವು, ಕರೂರು ಗ್ರಾಮದಲ್ಲಿ ಘಟನೆ.

ಸತತ ಆರು ಗಂಟೆಗಳ ಕಾರ್ಯಚರಣೆ ನಂತರ ಸಿಕ್ಕ ಚಿರತೆ

ನಾಡಿಗೇರ ಓಣಿಯ ಕಾಕಿಯರ ಮನೆಯಲ್ಲಿ ಅವಿತಕೊಂಡ ಕುಂತ ಚಿರತೆ…!!

ಹೆಂಡತಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಗಂಡ ತಡಸ ಗ್ರಾಮದಲ್ಲಿ ಘಟನೆ

ನದಿ ಹಾರಿದ ಮಹಿಳೆ 2ಕೋಟಿ ಸಾಲ ಮಾಡಿದ್ದಳು ಡಿಸಿ ಮಹಾಂತೇಶ ವಿಜಯದಾನಮ್ಮನವರ ಮಾಹಿತಿ.

ಆತ್ಮಹತ್ಯೆ ಮಾಡಿಕೊಳ್ಳಲು ಹೋದ ಮಹಿಳೆ ತುಂಗಭದ್ರಾ ನದಿಯಲ್ಲಿ ಈಜಿ ಜೀವ ಉಳಿಸಿಕೊಂಡ ಗಟ್ಟಿಗಿತ್ತಿ…!

ದೇವರಗುಡ್ಡ ಮಾಲತೇಶ ಸ್ವಾಮಿಯ ಆಡಳಿತ ತಹಸೀಲ್ದಾರ್ ಸುಪರ್ದಿಗೆ…

ರುದ್ರಪ್ಪ ಲಮಾಣಿ ಮೇಲೆ ಚಿರತೆ ದಾಳಿ, ಆಸ್ಪತ್ರೆಗೆ ದಾಖಲು..!

ಸ್ಥಾಯಿ ಸಮಿತಿ ರಚನೆ ನಗರಸಭೆಯಲ್ಲಿ ಕೋಲಾಹಲ ವಿರೋಧ ಪಕ್ಷದ ಸದಸ್ಯರಿಂದ ನ್ಯಾಯಾಲಯದ ಮೋರೆ ಸಾಧ್ಯತೆ

ರಾಣೆಬೆನ್ನೂರ: ಇಲ್ಲಿಯ ನಗರಸಭೆ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ರಚನೆ ಕುರಿತ ವಿಷಯ ಬಂದಾಗ ತಮ್ಮ ಸಂಖ್ಯಾಬಲದ ಅರಿವಿಲ್ಲದೆ ವಿಷಯ ಮಂಡನೆಗೆ ಅನುಮೋದನೆ ನೀಡಿದ ನಗರಸಭೆ ಅಧ್ಯಕ್ಷೆ ಚಂಪಕ್ಕ ಬಿಸಲಹಳ್ಳಿ ಪೇಚೆಗೆ ಸಿಲುಕಿದ ಘಟನೆ ಗುರುವಾರ ನಡೆಯಿತು.

ನಗರಸಭೆ ಸ್ಥಾಯಿ ಸಮಿತಿ ರಚನೆ ವಿಷಯ ಬಂದಾಗ ಆಡಳಿತ ಪಕ್ಷದ ಸದಸ್ಯ ಹುಚ್ಚಪ್ಪ ಮೇಡ್ಲೇರಿ 9 ಜನ ಸದಸ್ಯರ ಹೆಸರು ಹೇಳಿ ವಿಷಯ ಸೂಚಿಸಿದರು. ಇದಕ್ಕೆ ನಿಂಗರಾಜ ಕೋಡಿಹಳ್ಳಿ ಅನುಮೋದಿಸಿದರು. ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯ ಪ್ರಕಾಶ ಬುರಡಿಕಟ್ಟಿ ಈ ವಿಷಯ ಅನುಮೋದನೆಗೆ ಸಭೆಯಲ್ಲಿ ನಿಮ್ಮ ಸದಸ್ಯರ ಸಂಖ್ಯಾಬಲ ಕಡಿಮೆಯಿದ್ದು, ಈ ನೂತನ ಸ್ಥಾಯಿ ಸಮಿತಿಗೆ ನಮ್ಮ ವಿರೋಧವಿದ್ದು, ನಾವುಗಳು ಸೇರಿ ನೂತನವಾಗಿ ಹೊಸ ಸ್ಥಾಯಿ ಸಮಿತಿ ರಚನೆ ಮಾಡುತ್ತೇವೆ ಎಂದು 9 ಜನ ಬಿಜೆಪಿ ಸದಸ್ಯರ ಹೆಸರು ಉಪ ಸೂಚನೆ ಕೊಟ್ಟರು. ಅದಕ್ಕೆ ಪ್ರಕಾಶ ಪೂಜಾರ ಅನುಮೋದಿಸಿದರು.

ಪ್ರಕಾಶ ಬುರಡಿಕಟ್ಟಿ ಮಂಡಿಸಿದ ಉಪ ಸೂಚನೆ ಬಳಿಕ ಅಧ್ಯಕ್ಷೆ ಚಂಪಕ್ಕ ಬಿಸಲಹಳ್ಳಿ ಇದನ್ನು ಮತ ಹಾಕಬೇಕಿತ್ತು ಅಥವಾ ಉಪ ಸೂಚನೆಯಂತೆ ಸ್ಥಾಯಿ ಸಮಿತಿ ರಚನೆ ಮಾಡಬೇಕಿತ್ತು. ಆದರೆ, ಅಧ್ಯಕ್ಷರು ತಮ್ಮ ಸಂಖ್ಯಾಬಲ ಕಡಿಮೆ ಇರುವುದು ಖಾತ್ರಿಯಾದ ಕೂಡಲೇ ಏಕಾಏಕಿ ಮೂರು ದಿನ ಬಿಟ್ಟು ಈ ವಿಷಯ ಚರ್ಚೆ ಮಾಡೋಣ ಎಂದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರಕಾಶ ಬುರಡಿಕಟ್ಟಿ, ವಿಷಯ ಮಂಡಿಸಿದ ಬಳಿಕ ಅದನ್ನು ಮುಂದೂಡಲು ಅವಕಾಶವಿರುವುದಿಲ್ಲ. ಅಲ್ಲದೆ ಇದು ಪೌರಾಡಳಿತ ಕಾಯ್ದೆ ಪ್ರಕಾರ ಉಲ್ಲಂನೆ ಆಗಲಿದೆ ಎಂದು ತಿಳಿಸಿದರು. ಆದರೂ ಅಧ್ಯೆ ಚಂಪಾ ಬಿಸಲಹಳ್ಳಿ ಸಭೆಯನ್ನು ಮುಂದೂಡಿ ಹೊರ ನಡೆದರು.

ಆಗ ಆಕ್ರೋಶಗೊಂಡ ವಿರೋಧ ಪಕ್ಷದ ಎಲ್ಲ ಸದಸ್ಯರು, ಸಭೆ ಮುಂದೂಡಲು ಅವಕಾಶವಿಲ್ಲ ಎಂದು ಆಡಳಿತ ಪಕ್ಷದವರ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ ಆಯುಕ್ತರಿಗೆ ತಿಳಿಸಿದರೂ ಆಯುಕ್ತರು ಮಾತ್ರ ಇದು ಅಧ್ಯಕ್ಷರ ನೀರ್ಣಯ ನಾನೇನೂ ಮಾಡಲು ಆಗಲ್ಲ ಎಂದು ಹೊರ ನಡೆದರು

ಆಡಳಿತ ಪಕ್ಷದವರು ಹೊರ ನಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸದಸ್ಯ ಪ್ರಕಾಶ ಬುರಡಿಕಟ್ಟಿ, ನಗರಸಭೆ ಅಧ್ಯೆ ಚಂಪಕ್ಕ ಬಿಸಲಹಳ್ಳಿ ಪೌರಾಡಳಿತ ಕಾಯ್ದೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಕಾಂಗ್ರೆಸ್ನವರು ನಾವು ಸಂವಿಧಾನ ರಕ್ಷಕರು ಎಂದು ಹೇಳಿಕೊಳ್ಳುತ್ತಾರೆ. ಆದರೆ, ಅವರ ಪಕ್ಷದ ಅಧ್ಯಕ್ಷರೇ ಸಂವಿಧಾನ ವಿರೋಧ ಚಟುವಟಿಕೆ ಮಾಡಿದ್ದಾರೆ. ಆದ್ದರಿಂದ ಈ ಕುರಿತು ಜಿಲ್ಲಾಧಿಕಾರಿ, ಡಿಎಂಎ ಅವರಿಗೆ ದೂರು ನೀಡುತ್ತೇವೆ. ಇವರಿಂದ ನ್ಯಾಯ ದೊರೆಯದಿದ್ದರೆ ಹೈಕೋರ್ಟ್ ಮೋರೆ ಹೋಗುತ್ತೇವೆ ಎಂದು ಎಚ್ಚರಿಸಿದರು.

ಸದಸ್ಯರಾದ ಪ್ರಕಾಶ ಪೂಜಾರ, ಮಂಜುಳಾ ಹತ್ತಿ, ರೂಪಾ ಚಿನ್ನಿಕಟ್ಟಿ, ರಾಜು ಅಡ್ಮನಿ, ಪಾಂಡುರಂಗ ಗಂಗಾವತಿ, ಹನುಮಂತಪ್ಪ ಹೆದ್ದೇರಿ, ಪ್ರಭಾವತಿ ತಿಳವಳ್ಳಿ, ರತ್ನವ್ವ ಪೂಜಾರ, ಕವಿತಾ ಹೆದ್ದೇವಿ, ಗಂಗಮ್ಮ ಹಾವನೂರ, ಸಿದ್ದಪ್ಪ ಬಾಗಲರ ಮತ್ತಿತರರು ಇದ್ದರು.

ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!