ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!

ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ

ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.

ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಮತ್ತು‌ ವೃತ್ತ ಲೋಕಾರ್ಪಣೆ ನಾಡಿದ್ದು

ರಾಣೆಬೇನ್ನೂರ ತಾಲೂಕ ಹಸಿರಿಕರಣಕ್ಕೆ “ಟ್ರೀ ಪಾರ್ಕ್” ಶಾಸಕ ಪ್ರಕಾಶ ಕೋಳಿವಾಡ

ನಗರಸಭೆ ನೂತನ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ರಮೇಶ ಕರಡೆಣ್ಣನವರ ಆಯ್ಕೆ.

ಅಗಡಿ ತೋಟಕ್ಕೆ ಹೊರಟ್ಟವರು ಕೈಲಾಸಕ್ಕೆ ಹೋದರು, ಮೃತಪಟ್ಟವರ ವಿವರ ಇಲ್ಲಿದೆ.

ಮೋಟೆಬೆನ್ನೂರು ಬಳಿ ಭೀಕರ ಅಪಘಾತ, ರಾಣೆಬೇನ್ನೂರು ನಗರದ ಆರು ಜನ ಸಾವು.

ಪರಮ ಭ್ರಷ್ಟ ಲಂಚಾವತಾರಿ ಸಂವಿಧಾನ ವಿರೋಧಿ ವೈದ್ಯ ಡಾ” ಪರಮೇಶ್ವರಪ್ಪ ಅಮಾನತಗೆ ಆಗ್ರಹ

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾವೇರಿಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲತ್ತೆ: ಸಿ.ಎಂ ಭರವಸೆ

ರಾಹುತನಕಟ್ಟಿ ಗ್ರಾಪಂ ಮತ್ತೆ ಬಿಜೆಪಿ ಬೆಂಬಲಿತರ ತೆಕ್ಕೆಗೆ.

ಸ್ಮಶಾನ ಜಾಗಕ್ಕಾಗಿ ತಾಲೂಕಿನ ಕೃಷ್ಣಾಪುರ ಗ್ರಾಮಸ್ಥರಿಂದ ಸಿಎಂಗೆ ಕಪ್ಪು ಪಟ್ಟಿ‌ ಪ್ರದರ್ಶನಕ್ಕೆ ಸಜ್ಜು.

ತಂದೆ ಶವ ಮನೆಯಲ್ಲಿಟ್ಟು ಕಣ್ಣೀರಿಡುತ್ತ ಪರೀಕ್ಷೆ ಬರೆದ ಅಣ್ಣ-ತಂಗಿಗೆ ಉತ್ತಮ ಅಂಕ; ತಂಗಿಗೆ ಶೇ. 83 ಅಣ್ಣನಿಗೆ ಶೇ. 85ರಷ್ಟು ಅಂಕ

ಶಿವಾನಂದ ಪಾಟೀಲ ರಾಜೀನಾಮೆ ಪತ್ರದಲ್ಲಿ ಏನು ಹೇಳಿದ್ದಾರೆ.

ಮೆಡ್ಲೇರಿ ರಸ್ತೆಯಿಂದ ಹುಣಸಿಕಟ್ಟಿ ತನಕ ಇಂದು ರಾತ್ರಿ ವಿದ್ಯುತ್ ಸರಬರಾಜು ಡೌಟು..

ಕಿತ್ತಾಟ, ಕಿರಚಾಟ ನಡುವೆ ನಗರಸಭೆ ಸ್ಥಾಯಿ ಸಮಿತಿಗೆ ಅನುಮೋದನೆ.

ಇಸ್ವತ್ತು ಉತಾರ ನೀಡಲು ಲಂಚ ಪಡೆಯುತ್ತಿದ್ದ ಪಿಡಿಓ, ಉಪಾಧ್ಯಕ್ಷ ಸೇರಿ ಮೂರ ಜನ ಗ್ರಾಪಂ ಸದಸ್ಯರ ಬಂಧನ.

ರಷ್ಯಾದಲ್ಲಿ ಡಾ.ನಾಗರಾಜ ಎಸ್.ಕೆ ಅವರಿಗೆ ಗ್ಲೋಬಲ್ ಅಚಿವರ್ಸ್ ಪ್ರಶಸ್ತಿ.

ಐಎಎಸ್‌ ಪಾಸ್ ಮಾಡಿದ ಸಚಿನ ಗುತ್ತೂರುಗೆ ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿ ಅದ್ದೂರಿ ಸ್ವಾಗತ..

ಟ್ರ್ಯಾ ಕ್ಟರ್‌ನಿಂದ ಬಿದ್ದು ಅಣ್ಣಾ-ತಮ್ಮಾ ಸಾವು, ನಾಲ್ವರಿಗೆ ಗಂಭೀರ ಗಾಯ

ಸ್ಥಾಯಿ ಸಮಿತಿ ರಚನೆ ನಗರಸಭೆಯಲ್ಲಿ ಕೋಲಾಹಲ ವಿರೋಧ ಪಕ್ಷದ ಸದಸ್ಯರಿಂದ ನ್ಯಾಯಾಲಯದ ಮೋರೆ ಸಾಧ್ಯತೆ

ರಾಣೆಬೆನ್ನೂರ: ಇಲ್ಲಿಯ ನಗರಸಭೆ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ರಚನೆ ಕುರಿತ ವಿಷಯ ಬಂದಾಗ ತಮ್ಮ ಸಂಖ್ಯಾಬಲದ ಅರಿವಿಲ್ಲದೆ ವಿಷಯ ಮಂಡನೆಗೆ ಅನುಮೋದನೆ ನೀಡಿದ ನಗರಸಭೆ ಅಧ್ಯಕ್ಷೆ ಚಂಪಕ್ಕ ಬಿಸಲಹಳ್ಳಿ ಪೇಚೆಗೆ ಸಿಲುಕಿದ ಘಟನೆ ಗುರುವಾರ ನಡೆಯಿತು.

ನಗರಸಭೆ ಸ್ಥಾಯಿ ಸಮಿತಿ ರಚನೆ ವಿಷಯ ಬಂದಾಗ ಆಡಳಿತ ಪಕ್ಷದ ಸದಸ್ಯ ಹುಚ್ಚಪ್ಪ ಮೇಡ್ಲೇರಿ 9 ಜನ ಸದಸ್ಯರ ಹೆಸರು ಹೇಳಿ ವಿಷಯ ಸೂಚಿಸಿದರು. ಇದಕ್ಕೆ ನಿಂಗರಾಜ ಕೋಡಿಹಳ್ಳಿ ಅನುಮೋದಿಸಿದರು. ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯ ಪ್ರಕಾಶ ಬುರಡಿಕಟ್ಟಿ ಈ ವಿಷಯ ಅನುಮೋದನೆಗೆ ಸಭೆಯಲ್ಲಿ ನಿಮ್ಮ ಸದಸ್ಯರ ಸಂಖ್ಯಾಬಲ ಕಡಿಮೆಯಿದ್ದು, ಈ ನೂತನ ಸ್ಥಾಯಿ ಸಮಿತಿಗೆ ನಮ್ಮ ವಿರೋಧವಿದ್ದು, ನಾವುಗಳು ಸೇರಿ ನೂತನವಾಗಿ ಹೊಸ ಸ್ಥಾಯಿ ಸಮಿತಿ ರಚನೆ ಮಾಡುತ್ತೇವೆ ಎಂದು 9 ಜನ ಬಿಜೆಪಿ ಸದಸ್ಯರ ಹೆಸರು ಉಪ ಸೂಚನೆ ಕೊಟ್ಟರು. ಅದಕ್ಕೆ ಪ್ರಕಾಶ ಪೂಜಾರ ಅನುಮೋದಿಸಿದರು.

ಪ್ರಕಾಶ ಬುರಡಿಕಟ್ಟಿ ಮಂಡಿಸಿದ ಉಪ ಸೂಚನೆ ಬಳಿಕ ಅಧ್ಯಕ್ಷೆ ಚಂಪಕ್ಕ ಬಿಸಲಹಳ್ಳಿ ಇದನ್ನು ಮತ ಹಾಕಬೇಕಿತ್ತು ಅಥವಾ ಉಪ ಸೂಚನೆಯಂತೆ ಸ್ಥಾಯಿ ಸಮಿತಿ ರಚನೆ ಮಾಡಬೇಕಿತ್ತು. ಆದರೆ, ಅಧ್ಯಕ್ಷರು ತಮ್ಮ ಸಂಖ್ಯಾಬಲ ಕಡಿಮೆ ಇರುವುದು ಖಾತ್ರಿಯಾದ ಕೂಡಲೇ ಏಕಾಏಕಿ ಮೂರು ದಿನ ಬಿಟ್ಟು ಈ ವಿಷಯ ಚರ್ಚೆ ಮಾಡೋಣ ಎಂದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರಕಾಶ ಬುರಡಿಕಟ್ಟಿ, ವಿಷಯ ಮಂಡಿಸಿದ ಬಳಿಕ ಅದನ್ನು ಮುಂದೂಡಲು ಅವಕಾಶವಿರುವುದಿಲ್ಲ. ಅಲ್ಲದೆ ಇದು ಪೌರಾಡಳಿತ ಕಾಯ್ದೆ ಪ್ರಕಾರ ಉಲ್ಲಂನೆ ಆಗಲಿದೆ ಎಂದು ತಿಳಿಸಿದರು. ಆದರೂ ಅಧ್ಯೆ ಚಂಪಾ ಬಿಸಲಹಳ್ಳಿ ಸಭೆಯನ್ನು ಮುಂದೂಡಿ ಹೊರ ನಡೆದರು.

ಆಗ ಆಕ್ರೋಶಗೊಂಡ ವಿರೋಧ ಪಕ್ಷದ ಎಲ್ಲ ಸದಸ್ಯರು, ಸಭೆ ಮುಂದೂಡಲು ಅವಕಾಶವಿಲ್ಲ ಎಂದು ಆಡಳಿತ ಪಕ್ಷದವರ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ ಆಯುಕ್ತರಿಗೆ ತಿಳಿಸಿದರೂ ಆಯುಕ್ತರು ಮಾತ್ರ ಇದು ಅಧ್ಯಕ್ಷರ ನೀರ್ಣಯ ನಾನೇನೂ ಮಾಡಲು ಆಗಲ್ಲ ಎಂದು ಹೊರ ನಡೆದರು

ಆಡಳಿತ ಪಕ್ಷದವರು ಹೊರ ನಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸದಸ್ಯ ಪ್ರಕಾಶ ಬುರಡಿಕಟ್ಟಿ, ನಗರಸಭೆ ಅಧ್ಯೆ ಚಂಪಕ್ಕ ಬಿಸಲಹಳ್ಳಿ ಪೌರಾಡಳಿತ ಕಾಯ್ದೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಕಾಂಗ್ರೆಸ್ನವರು ನಾವು ಸಂವಿಧಾನ ರಕ್ಷಕರು ಎಂದು ಹೇಳಿಕೊಳ್ಳುತ್ತಾರೆ. ಆದರೆ, ಅವರ ಪಕ್ಷದ ಅಧ್ಯಕ್ಷರೇ ಸಂವಿಧಾನ ವಿರೋಧ ಚಟುವಟಿಕೆ ಮಾಡಿದ್ದಾರೆ. ಆದ್ದರಿಂದ ಈ ಕುರಿತು ಜಿಲ್ಲಾಧಿಕಾರಿ, ಡಿಎಂಎ ಅವರಿಗೆ ದೂರು ನೀಡುತ್ತೇವೆ. ಇವರಿಂದ ನ್ಯಾಯ ದೊರೆಯದಿದ್ದರೆ ಹೈಕೋರ್ಟ್ ಮೋರೆ ಹೋಗುತ್ತೇವೆ ಎಂದು ಎಚ್ಚರಿಸಿದರು.

ಸದಸ್ಯರಾದ ಪ್ರಕಾಶ ಪೂಜಾರ, ಮಂಜುಳಾ ಹತ್ತಿ, ರೂಪಾ ಚಿನ್ನಿಕಟ್ಟಿ, ರಾಜು ಅಡ್ಮನಿ, ಪಾಂಡುರಂಗ ಗಂಗಾವತಿ, ಹನುಮಂತಪ್ಪ ಹೆದ್ದೇರಿ, ಪ್ರಭಾವತಿ ತಿಳವಳ್ಳಿ, ರತ್ನವ್ವ ಪೂಜಾರ, ಕವಿತಾ ಹೆದ್ದೇವಿ, ಗಂಗಮ್ಮ ಹಾವನೂರ, ಸಿದ್ದಪ್ಪ ಬಾಗಲರ ಮತ್ತಿತರರು ಇದ್ದರು.

ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!