ರಾಣೆಬೇನ್ನೂರು: ರಾಜಕೀಯ ಬಗ್ಗೆ ನನಗೂ ನನ್ನ ಕುಟುಂಬಕ್ಕೆ ಆಸಕ್ತಿಯಿಲ್ಲ ಆದರೆ ಬಂಗಾರಪ್ಪರ ಕುಟುಂಬದಿಂದ ಬಂದಂತಹ ನನ್ನ ಶ್ರೀಮತಿ ಗೀತಾಗೆ ಇದೆ ಎಂದು ನಟ ಶಿವರಾಜಕುಮಾರ ಹೇಳಿದರು.
ರಾಣೆಬೇನ್ನೂರು ನಗರದಲ್ಲಿ ಬೈರತಿ ರಣಗಲ್ ಚಿತ್ರ ಯಶಸ್ಸು ಕಂಡ ಹಿನ್ನೆಲೆ ಶಂಕರ್ ಚಿತ್ರಮಂದಿರಕ್ಕೆ ನೀಡಿ ನಂತರ ಶಾಸಕರ ನಿವಾಸದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಚಿತ್ರೋದ್ಯಮದ ಉತ್ತಮ ಬೆಳವಣಿಗೆ ಕಾಣುತ್ತಿದ್ದು, ಇತ್ತಿಚೆಗೆ ಬಿಡುಗಡೆಯಾದ ಐದಾರು ಚಿತ್ರಗಳು ಉತ್ತಮ ಪ್ರದರ್ಶನ ಕಂಡಿವೆ. ಚಿತ್ರಗಳಿಗೆ ಭಾಷೆ ಪ್ರಮುಖವಾದದ್ದು ಅದನ್ನು ಬಳಸಿಕೊಂಡು ಉತ್ತಮ ಚಿತ್ರವನ್ನು ಮಾಡಿದರೆ ಜನರು ಚಿತ್ರ ಮಂದಿರ ಕಡೆ ಮುಖ ಮಾಡುತ್ತಾರೆ ಎಂದರು.
ಇನ್ನೂ ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆ ಬಗ್ಗೆ ಮಾತನಾಡಿದ ನಟ ಶಿವರಾಜಕುಮಾರ, ರಾಜ್ಯದಲ್ಲಿ ಇದನ್ನು ಸಂಪೂರ್ಣವಾಗಿ ಮುಕ್ತಗೊಳಿಸಲು ಎಲ್ಲರೂ ಕೈಜೋಡಿಸಬೇಕು. ಪಾಲಕರು ಅದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ತಮ್ಮ ಮಕ್ಕಳು ಏನು ಮಾಡುತ್ತಾರೆ ಎಲ್ಲಿಗೆ ಹೋಗುತ್ತಾರೆ ಎಂಬುದನ್ನು ಗಮನಿಸಬೇಕು ಎಂದು ಮನವಿ ಮಾಡಿದರು.
ರಾಜಕೀಯ ಬಗ್ಗೆ ಮಾತನಾಡಿದ ಅವರು ನನ್ನ ಕುಟುಂಬಕ್ಕೆ ಹಾಗೂ ನನಗೆ ರಾಜಕೀಯ ಬಗ್ಗೆ ಆಸಕ್ತಿಯಿಲ್ಲ ಆದರೆ ರಾಜ್ಯದ ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪ ಕುಟುಂಬದಿಂದ ಬಂದಂತಹ ನನ್ನ ಹೆಂಡತಿ ಗೀತಾಗೆ ಅವಶ್ಯಕತೆ ಇದೆ. ಈಗಾಗಲೇ ಎರಡು ಬಾರಿ ಸೋತಿದ್ದಾರೆ ಎಂಬದು ನಮಗೆ ನೋವು ಇಲ್ಲ ಮುಂದೊಂದು ದಿನ ಗೆಲುವು ಸಿಗಲಿದೆ ಎಂದು ಹೇಳಿದರು.
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.