ರಾಣೆಬೇನ್ನೂರು: ಅಕ್ರಮವಾಗಿ ಮರಳು ದಂಧೆ ತಡೆಯಲು ಹೋದ ಪಿಎಸ್ಐ ಮೇಲೆ ಮೂವರು ಯುವಕರು ಹಲ್ಲೆಗೆ ಯತ್ನಿಸಿದ ಘಟನೆ ತಾಲೂಕಿನ ಕೋಟಿಹಾಳ ಗ್ರಾಮದಲ್ಲಿ ತಡ ರಾತ್ರಿ ನಡೆದಿದೆ.
ಹೌದು ಹಲಗೇರಿ ಪೋಲಿಸ ಠಾಣೆ ವ್ಯಾಪ್ತಿಯ ಕೋಟಿಹಾಳ ಗ್ರಾಮದ ತುಂಗಭದ್ರಾ ನದಿಯಲ್ಲಿ ಯಾವುದೇ ಪರವಾನಗಿ ಪಡೆಯದೆ ಅಕ್ರಮ ಮರಳು ದಂಧೆ ಮಾಡುತ್ತಿರುವ ಮಾಹಿತಿ ಬಂದಿದೆ.
ತಕ್ಷಣ ಹಲಗೇರಿ ಪೋಲಿಸ ಠಾಣೆಯ ಪಿಎಸ್ಐ ಪರಶುರಾಮ ಲಮಾಣಿ ಹಾಗೂ ಸಿಬ್ಬಂದಿಗಳನ್ನು ಕರೆದುಕೊಂಡು ಸ್ಥಳಕ್ಕೆ ತೆರಳಿದ್ದಾರೆ.
ಈ ಸಮಯದಲ್ಲಿ ಕೋಟಿಹಾಳ ಗ್ರಾಮದ ಮೂವರು ಯುವಕರಾದ ಹಾಲನಗೌಡ ಉಜ್ಜನಗೌಡರ, ಸಿದ್ದನಗೌಡ ಉಜ್ಜನಗೌಡರ ಹಾಗೂ ಬಸವ ಎಂಬುವವರು ಅಕ್ರಮದ ಪಿಎಸ್ಐ ಪ್ರಶ್ನೆ ಮಾಡಿದಕ್ಕೆ ವಾಗ್ವಾದ ಮಾಡಿದ್ದಾರೆ. ಅಲ್ಲದೆ ಸರ್ಕಾರದ ಕೆಲಸಕ್ಕೆ ಅಡೆತಡೆ ಮಾಡುವುದರ ಜತೆಯಾಗಿ ಪಿಎಸ್ಐ ಪರಶುರಾಮ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನ ಮಾಡಿದ್ದಾರೆ ಎನ್ನಲಾಗಿದೆ. ಈ ಸಮಯದಲ್ಲಿ ಪೋಲಿಸ ಸಿಬ್ಬಂದಿಗಳು ಮೂವರು ಯುವಕರನ್ನು ವಶಕ್ಕೆ ಪಡೆದು ಅವರನ್ನು ಠಾಣೆಗೆ ಕರೆತಂದಿದ್ದಾರೆ.
ಈ ಪ್ರಕರಣ ಕುರಿತು ಪಿಎಸ್ಐ ಸಂಪರ್ಕ ಮಾಡಿದಾಗ ಮೂವರ ಯುವಕರನ್ನು ವಿಚಾರಣೆ ನಡೆಸಿ ಪ್ರಕರಣ ದಾಖಲು ಮಾಡಲು ಮುಂದಾಗಿದ್ದಾರೆ.
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.