ರಾಣೆಬೇನ್ನೂರು: ಶಿಕ್ಷಕರನ್ನು ನಮ್ಮ ಭಾರತ ದೇಶದ ಸಂಸ್ಕೃತಿಯಲ್ಲಿ ಪರಮಾತ್ಮಕ್ಕೆ ಹೋಲಿಸಲಾಗಿದ್ದು, ಅವರು ನಮ್ಮನ್ನು ತಿದ್ದಿ ತಿಡಿದ ಸೃಷ್ಟಿಕರ್ತರು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ರಾಣೆಬೇನ್ನೂರು ನಗರದಲ್ಲಿ ಭಾನುವಾರದಂದು ಶಿಕ್ಷಕರ ಪತ್ತಿನ ಸಹಕಾರ ಸಂಘದಲ್ಲಿ ತಾಲೂಕ ಶಿಕ್ಷಕರ ಸಂಘ ಆಯೋಜಿಸಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರ ಕೆಲಸ ಸಮಾಜದಲ್ಲಿ ಪವಿತ್ರವಾದ ಕೆಲಸವಾಗಿದ್ದು, ಅದನ್ನು ನಿಯತ್ತಿನ ಮೂಲಕ ಮಾಡಿದರೆ ದೇಶವನ್ನು ಹೊಸ ಸೃಷ್ಟಿ ಮಾಡಿದಂತೆ. ಭಾರತವನ್ನು ಮಾದರಿ ರಾಷ್ಟ್ರವನ್ನಾಗಿ ಮಾಡಲು ಶಿಕ್ಷಕರ ಕೆಲಸ ಬಹಳ ಪ್ರಮುಖವಾಗಿದ್ದು ಅದನ್ನು ದೇವರ ಕೆಲಸ ಎಂದು ಭಾವಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದರು.
ಶಿಕ್ಷಕರ ತಮ್ಮ ಮಕ್ಕಳಿಗೆ ಮಾತ್ರ ಉತ್ತಮ ಶಿಕ್ಷಣ ನೀಡಿ ಪ್ರತಿಭಾವಂತರಾಗಿ ಮಾಡಿದರೆ ಬಡವರು ಮಕ್ಕಳು ಯಾವಾಗ ಆಗಬೇಕು. ಇದನ್ನು ಶಿಕ್ಷಕರು ಅರಿತು ಅವರಿಗೂ ಸಹ ತಮ್ಮ ಮಕ್ಕಳಂತೆ ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡಿ ಪ್ರತಿಭಾವಂತರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು .
ಶಿಕ್ಷಕರು ಇತ್ತಿಚಿನ ದಿನಗಳಲ್ಲಿ ತಮ್ಮ ಮಕ್ಕಳನ್ನು ಮುಂದಿನ ದಿನಗಳಲ್ಲಿ ಕೇವಲ ಡಾಕ್ಟರ್, ಇಂಜಿನಿಯರ್ ಮಾಡಬೇಕು ಎಂಬ ಆಸೆ ಹೊಂದಿರುತ್ತಾರೆ. ಆದರೆ ಅದರ ಬದಲಾಗಿ ಅವರನ್ನು ವಿಮಾನ ಚಾಲಕರು, ರೈಲು ಚಾಲಕರನ್ನಾಗಿ ಮಾಡಲು ಪ್ರೇರಣೆ ನೀಡಬೇಕು. ಏಕೆಂದರೆ ವಿಮಾನ ನಡೆಸುವ ಪೈಲಟ್ ಗೆ ತಿಂಗಳಿಗೆ ಆರು ಲಕ್ಷ ನೀಡುತ್ತಾರೆ ಆದರೆ ನನಗೆ ಶಾಸಕನಾದರೆ ಕೇವಲ ನಲವತ್ತು ಸಾವಿರ ಸಂಬಳ ನೀಡುತ್ತಾರೆ ಎಂದು ವಿವರಿಸಿದರು.
ಶಿಕ್ಷಕರ ಪತ್ತಿನ ಸಹಕಾರ ಸಂಘವು ಉತ್ತಮ ಸಾಧನೆ ಮಾಡಿದ್ದು, ಹಲವು ಶಿಕ್ಷಕರಿಗೆ ಸಂಘದ ಮೂಲಕ ಸಾಲ ನೀಡಿ ಅವರನ್ನು ಸದೃಢರನ್ನಾಗಿ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಈ ಸಂಘಕ್ಕೆ ನನ್ನ ಕೈಯಿಂದ ಆದಂತಹ ಸಹಕಾರ ಸಲಹೆ ನೀಡುವೆ ಎಂದು ಶಿಕ್ಷಕರಿಗೆ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮ ಸುಂದರ ಅಡಿಗ, ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗನಗೌಡ ರಾಮನಗೌಡ್ರ, ಶಿಕ್ಷಕರಾದ ಮಂಜನಾಯ್ಕ ಎಲ್. ಸಿ.ಎ.ಅಡಿವೇರ, ಬಿ.ಎಫ್.ದೊಡ್ಡಮನಿ, ಪ್ರಭಾಕರ ಚಿಂದಿ, ನಾಗರತ್ನ ಹಂಚಿನಮನಿ, ಎಸ್.ವಿ.ದೊಡ್ಡಮನಿ, ಎಂ.ಸಿ.ಬಲ್ಲೂರು, ಆನಂದ ಏಳುಕುರಿ ಸೇರಿದಂತೆ ಇತರರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮ ಸುಂದರ ಅಡಿಗ, ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗನಗೌಡ ರಾಮನಗೌಡ್ರ, ಶಿಕ್ಷಕರಾದ ಮಂಜನಾಯ್ಕ ಎಲ್. ಸಿ.ಎ.ಅಡಿವೇರ, ಬಿ.ಎಫ್.ದೊಡ್ಡಮನಿ, ಪ್ರಭಾಕರ ಚಿಂದಿ, ನಾಗರತ್ನ ಹಂಚಿನಮನಿ, ಎಸ್.ವಿ.ದೊಡ್ಡಮನಿ, ಎಂ.ಸಿ.ಬಲ್ಲೂರು, ಆನಂದ ಏಳುಕುರಿ ಸೇರಿದಂತೆ ಇತರರು ಹಾಜರಿದ್ದರು.
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.