ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ

ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.

ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ

ಅರುಣಕುಮಾರ ಪೂಜಾರ ಜನ್ಮದಿನದ ನಿಮಿತ್ತ ನಾಳೆ ವಿವಿಧ ಕಾರ್ಯಕ್ರಮ

ನಂದಿಹಳ್ಳಿ ಗ್ರಾಮದಲ್ಲಿ ಸಾವಿನಲ್ಲಿ ಒಂದಾದ ದಂಪತಿಗಳು.!

ಶಾಸಕರ ಆಪ್ತಸಹಾಯಕ ಮನೆಯಲ್ಲಿ 21.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

ಹೆಂಡತಿ ಕತ್ತು ಕೊಯ್ದು ಕೊಲೆಗೆ ಯತ್ನಿಸಿದ ಪತಿರಾಯ..

ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಯುದ್ಧ ಟ್ಯಾಂಕರ್ ಸ್ಥಾಪನೆ ರಾಣೆಬೇನ್ನೂರು ಹೆಮ್ಮೆ; ಸಭಾಧ್ಯಕ್ಷ ಯು.ಟಿ.ಖಾದರ

ಸದನದಲ್ಲಿ ಆಡಿದ ಮಾತಿಗೆ ಕ್ಷಮೆಯಾಚಿಸುವೆ, ಪಕ್ಷಾತೀತ ಕಾರ್ಯಕ್ರಮಕ್ಕೆ ಸಾಥ್ ನೀಡಿ; ಶಾಸಕ ಪ್ರಕಾಶ ಕೋಳಿವಾಡ.

ಯುದ್ಧ ಟ್ಯಾಂಕರ್ ಕಟ್ಟೆಗೆ ಹಾಕಿರುವ ಶಾಸಕರ ಪೋಟೋ ಹಾಗೂ ಪಿಕೆಕೆ ಹೆಸರಿಗೆ ಬಿಜೆಪಿ ಆಕ್ಷೇಪ. ಸರ್ಕಾರದ ಅನುದಾನದಲ್ಲಿ ಶಾಸಕರು ಶಿಷ್ಟಾಚಾರ ಪಾಲಿಸಲಿ.

ನಿಂತಿದ್ದ ಟಿಪ್ಪರಗೆ ಬೈಕ್ ಡಿಕ್ಕಿ ಜೋಯಿಸರಹರಳಹಳ್ಳಿ ಗ್ರಾಮದ ಎಂಟೆಕ್ ಪದವಿಧರ ಸಾವು

ಕುರುಬ ಸಮುದಾಯ ಹಾಗೂ ಸಿಎಂ ವಿರುದ್ಧ ಅವಾಚ್ಯವಾಗಿ ನಿಂದನೆ ಮಾಡಿದವರು ಮೇಲೆ‌ ಕಾನೂನು ಕ್ರಮಕ್ಕೆ ಒತ್ತಾಯ..

ಡೆಂಗ್ಯೂ ಜ್ವರ ಶಂಕೆ ಹಿನ್ನೆಲೆ ಯುವಕ ಸಾವು, ಕರೂರು ಗ್ರಾಮದಲ್ಲಿ ಘಟನೆ.

ಸತತ ಆರು ಗಂಟೆಗಳ ಕಾರ್ಯಚರಣೆ ನಂತರ ಸಿಕ್ಕ ಚಿರತೆ

ನಾಡಿಗೇರ ಓಣಿಯ ಕಾಕಿಯರ ಮನೆಯಲ್ಲಿ ಅವಿತಕೊಂಡ ಕುಂತ ಚಿರತೆ…!!

ಹೆಂಡತಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಗಂಡ ತಡಸ ಗ್ರಾಮದಲ್ಲಿ ಘಟನೆ

ನದಿ ಹಾರಿದ ಮಹಿಳೆ 2ಕೋಟಿ ಸಾಲ ಮಾಡಿದ್ದಳು ಡಿಸಿ ಮಹಾಂತೇಶ ವಿಜಯದಾನಮ್ಮನವರ ಮಾಹಿತಿ.

ಆತ್ಮಹತ್ಯೆ ಮಾಡಿಕೊಳ್ಳಲು ಹೋದ ಮಹಿಳೆ ತುಂಗಭದ್ರಾ ನದಿಯಲ್ಲಿ ಈಜಿ ಜೀವ ಉಳಿಸಿಕೊಂಡ ಗಟ್ಟಿಗಿತ್ತಿ…!

ದೇವರಗುಡ್ಡ ಮಾಲತೇಶ ಸ್ವಾಮಿಯ ಆಡಳಿತ ತಹಸೀಲ್ದಾರ್ ಸುಪರ್ದಿಗೆ…

ರುದ್ರಪ್ಪ ಲಮಾಣಿ ಮೇಲೆ ಚಿರತೆ ದಾಳಿ, ಆಸ್ಪತ್ರೆಗೆ ದಾಖಲು..!

ನವದುರ್ಗಿಯರ ವೈಭವದಲ್ಲಿ ಎದ್ದು ಬಂದ “ರಾಣೆಬೇನ್ನೂರ ಕಾ ರಾಜಾ”

ರಾಣೆಬೇನ್ನೂರು: ಸಮಾಜದಲ್ಲಿ ಭಕ್ತಿಯ ಜತೆಗೆ ಮಹಿಳೆಯರ ಶಕ್ತಿಯು ಸಹ ತಿಳಿಯಬೇಕು ಎಂದು ವಿವೇಕಾನಂದ ಆಶ್ರಮದ ಸ್ವಾಮಿ ಪ್ರಕಾಶನಂದ ಮಹಾರಾಜರು ಹೇಳಿದರು.

ನಗರದ ನಗರಸಭಾ ಕ್ರೀಡಾಂಗಣದಲ್ಲಿ ಪ್ರತಿಷ್ಠಾಪನೆ ಮಾಡಿರುವ ರಾಣೆಬೇನ್ನೂರು ಕಾ ರಾಜಾ ಗಣಪತಿಯ “ನವದುರ್ಗಿಯರ ವೈಭವ” ಗಣೇಶ ಮಂಟಪ ಹಾಗೂ ಸಾಧಕಿಯ ಮಹಿಳೆಯರ ಕುರಿತು ರಚಿಸಿರುವ  “ಪ್ರಾ:ತ ಸ್ಮರಾಮಿ” ಎಂಬ  ಗ್ರಂಥ ಬಿಡುಗಡೆ ‌ಮಾಡಿ ಮಾತನಾಡಿದರು.

ಸದ್ಯ ರಾಜ್ಯ ಹಾಗೂ ದೇಶದಲ್ಲಿ ಗಣೇಶ ಉತ್ಸವನ್ನು ಡ್ಯಾನ್ಸ್, ಹಾಡುಗಳು, ಕುಣಿತದ ಮೂಲಕ ಅಂತ್ಯವಾಗುತ್ತಿದೆ. ಆದರೆ  ಗಣೇಶ ಹಬ್ಬವನ್ನು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಸಾಹಿತ್ಯಕವಾಗಿ ಮಾರ್ಪಾಡಿಸಿ ಅದನ್ನು ಹಬ್ಬವನ್ನಾಗಿ ಜನರಿಗೆ ತೋರಿಸಿದ ಮಂಡಳಿ ವಂದೇ ಮಾತರಂ ಸ್ವಯಂ ಸೇವಾ ಸಂಘ. ಇಂತಹ ಸಂಘ ಪ್ರತಿ ವರ್ಷವೂ ವಿಶೇಷವಾಗಿ, ವಿಭಿನ್ನವಾಗಿ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ದೇಶದ ಜನರಿಗೆ ನಾವು ಅರಿವು, ಪ್ರಜ್ಞೆ ಮೂಡಿಸುವ ಕೆಲಸ ಮಾಡಬೇಕಾಗಿದೆ. ಅದಕ್ಕೆ ನಾವು ಎಲ್ಲರೂ ಸೇರಿ ಇಂತಹ ವಿನೂತನ ಕಾರ್ಯಕ್ರಮ ಮೂಲಕ ರಾಷ್ಟ್ರದ ಪ್ರಜ್ಞೆ ಬಗ್ಗೆ ತಿಳಿಸಬೇಕು ಎಂದರು.

ಎಂ.ಎಸ್.ರಾಘವೇಂದ್ರ ಮಾತನಾಡಿ, ಕರ್ನಾಟಕದಲ್ಲಿ ಗಣೇಶ ಉತ್ಸವ ಪ್ರಾರಂಭವಾಗಿದ್ದು ಉತ್ತರ ಕರ್ನಾಟಕದ ರಾಣೆಬೇನ್ನೂರು ನಗರದಿಂದ ಎಂಬುದು ವಿಶೇಷ. ಅಂದು ರಾಣೆಬೇನ್ನೂರು ನಗರದಲ್ಲಿ 1925-31 ರಲ್ಲಿ ನಗರದ ಮಾರ್ಕೆಟ್ ಗಲ್ಲಿಯಲ್ಲಿ ಮುದವೀಡು ಕೃಷ್ಣರಾಯರು ಪ್ರತಿಷ್ಠಾಪನೆ ಮಾಡಿದರು.  ಅದರಂತೆ ರಾಣೆಬೇನ್ನೂರು ನಗರದಲ್ಲಿ ವಂದೇ ಮಾತರಂ ಸ್ವಯಂ ಸೇವಾ ಸಂಘ ಸದಸ್ಯರು ಪ್ರತಿ ವರ್ಷವೂ ವಿನೂತನ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ ರಾಜ್ಯದಲ್ಲಿ ಹೆಸರು ಮಾಡಿದೆ ಎಂದರು.

ಈ ಬಾರಿ ರಾಣೆಬೇನ್ನೂರು ನಗರದಲ್ಲಿ ವಿಶೇಷವಾಗಿ “ಪ್ರಾ:ತ ಸ್ಮರಾಮಿ” ಎಂಬ ಗ್ರಂಥ ರಚನೆ ಮಾಡುವ ರಾಜ್ಯ ಸೇರಿದಂತೆ ಜಿಲ್ಲೆಯ 37 ಮಹಿಳೆಯರ ಅವರ  ಸಾಧನೆ ಬಗ್ಗೆ ಚಿತ್ರಿಸಿ ಅವರ ಜೀವನ  ವಿವರಿಸಲಾಗಿದೆ.

ಇದನ್ನು ಯಾಕೆ ಮಾಡಲಾಗಿದೆ ಎಂದರೆ ಭಾರತದಲ್ಲಿ ಮಹಿಳೆಯರಿಗೆ ‌ಪ್ರಮುಖ ಸ್ಥಾನವನ್ನು ನೀಡಲಾಗಿದೆ. ಅಂತಹ ಮಹಿಳೆಯರ ಮೇಲೆ ದಿನ ನಿತ್ಯ ಅತ್ಯಾಚಾರ, ಶೋಷಣೆ ನಡೆಯುತ್ತಿರುವದು ನೋಡಿದರೆ ಸಮಾಜದಲ್ಲಿ ತೆಲೆ ತಗ್ಗಿಸುವ ಕೆಲಸವಾಗಿದೆ. ಇಂತಹ ಸಮಯದಲ್ಲಿ ನಾವು ಮಹಿಳೆಯರಿಗೆ ಧೈರ್ಯ, ಸ್ಥೈರ್ಯ ತುಂಬಬೇಕು ಎಂಬ ಉದ್ದೇಶದಿಂದ ನವದುರ್ಗಿಯರ ವೈಭವದ ಮ‌ೂಲಕ ಮಹಿಳೆಯರ ಸಬಲತೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

 

ನಗರದ ವಿವೇಕಾನಂದ ಆಶ್ರಮದ ಪ್ರಕಾಶನಂದ ಮಹಾರಾಜ ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ರೂಪಾ ಚಿನ್ನಿಕಟ್ಟಿ, ಕವಿತಾ ಹೆದ್ದೇರಿ, ಪ್ರಕಾಶ ಬುರಡಿಕಟ್ಟಿ, ಲೇಖಕರಾದ ಪ್ರಮೋದ್ ನಲವಾಗಲ, ಪ್ರೇಮಕುಮಾರ ಬಿದರಕಟ್ಟಿ, ಅಜಯ್ ಮಠದ ಸೇರಿದಂತೆ ಇತರರು ಹಾಜರಿದ್ದರು.

ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!