ರಾಣೆಬೆನ್ನೂರ– ತಾಲೂಕಿನ ವೈ. ಟಿ. ಹೊನ್ನತ್ತಿ ಗ್ರಾಮದ ಯುವ ಯೋಧ ಶಿವಪ್ಪ ಸಣ್ಣಶಂಕ್ರಪ್ಪ ವಡತೇರ(48) ಸೋಮವಾರ ಹೃದಯಾಘಾತದಿಂದ ನಿಧನರಾದರು.
ಶಿವಪ್ಪರವರು ಛತ್ತಿಸಘಡದಲ್ಲಿ ಇಂಡೋ -ಟಿಬೇಟ್ ಬಾರ್ಡರ್ ಆರ್ಮಿ ಪೊಲೀಸ್ ಆಗಿ ಕಳೆದ 22 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು.
ಮೃತರು ತಾಯಿ ಚಂದ್ರಮ್ಮ, ಪತ್ನಿ ಅನಿತಾ, ಪುತ್ರ ಉಜ್ವಲ, ಪುತ್ರಿ ಖುಷಿ ಸೇರಿದಂತೆ ಅಪಾರ ಬಂಧು ಬಳಗ ಅಭಿಮಾನಿಗಳನ್ನು ಹೊಂದಿದ್ದರು.
ರಜೆಯ ಸಂದರ್ಭದಲ್ಲಿ ಕಳೆದ 8 ದಿನಗಳ ಹಿಂದೆ ಊರಿಗೆ ಬಂದಿದ್ದ ಯೋಧರಿಗೆ ರವಿವಾರದಂದು ಹೃದಯಾಘಾತವಾಗಿತ್ತು. ರಾಣೆಬೆನ್ನೂರಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ಯೋಧ ಶಿವಪ್ಪ ಮೃತಪಟ್ಟಿದ್ದಾರೆ .
ಮಂಗಳವಾರದಂದು ಹುಟ್ಟೂರು ವೈಟಿ ಯಲ್ಲಾಪುರ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಮೃತರ ಅಂತ್ಯಕ್ರಿಯ ನೆರವೇರಲಿದೆ ಎಂದು ಕುಟುಂಬ ಹಾಗೂ ತಾಲೂಕಾಡಳಿತದಿಂದ ತಿಳಿದು ಬಂದಿದೆ.

More Stories
ಸಿಎಂ ಬದಲಾವಣೆ ವಿಚಾರ ಹೈಕಮಾಂಡಗೆ ಬಿಟ್ಟ ವಿಚಾರ; ಕೆ.ಬಿ.ಕೋಳಿವಾಡ.
ಕಾಂಗ್ರೆಸ್ ಪಕ್ಷ ಹಿಂದುಳಿದ, ದಲಿತರಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೆ ಎಲ್ಲಾ ಸ್ಥಾನಮಾನ ನೀಡಿದೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ.
ಡಿಕೆಶಿ ಭೇಟಿ ಮಾಡಿದ ಹಾವೇರಿ ಜಿಲ್ಲೆಯ ಮೂವರು ಶಾಸಕರು.