ರಾಣೆಬೆನ್ನೂರ– ತಾಲೂಕಿನ ವೈ. ಟಿ. ಹೊನ್ನತ್ತಿ ಗ್ರಾಮದ ಯುವ ಯೋಧ ಶಿವಪ್ಪ ಸಣ್ಣಶಂಕ್ರಪ್ಪ ವಡತೇರ(48) ಸೋಮವಾರ ಹೃದಯಾಘಾತದಿಂದ ನಿಧನರಾದರು.
ಶಿವಪ್ಪರವರು ಛತ್ತಿಸಘಡದಲ್ಲಿ ಇಂಡೋ -ಟಿಬೇಟ್ ಬಾರ್ಡರ್ ಆರ್ಮಿ ಪೊಲೀಸ್ ಆಗಿ ಕಳೆದ 22 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು.
ಮೃತರು ತಾಯಿ ಚಂದ್ರಮ್ಮ, ಪತ್ನಿ ಅನಿತಾ, ಪುತ್ರ ಉಜ್ವಲ, ಪುತ್ರಿ ಖುಷಿ ಸೇರಿದಂತೆ ಅಪಾರ ಬಂಧು ಬಳಗ ಅಭಿಮಾನಿಗಳನ್ನು ಹೊಂದಿದ್ದರು.
ರಜೆಯ ಸಂದರ್ಭದಲ್ಲಿ ಕಳೆದ 8 ದಿನಗಳ ಹಿಂದೆ ಊರಿಗೆ ಬಂದಿದ್ದ ಯೋಧರಿಗೆ ರವಿವಾರದಂದು ಹೃದಯಾಘಾತವಾಗಿತ್ತು. ರಾಣೆಬೆನ್ನೂರಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ಯೋಧ ಶಿವಪ್ಪ ಮೃತಪಟ್ಟಿದ್ದಾರೆ .
ಮಂಗಳವಾರದಂದು ಹುಟ್ಟೂರು ವೈಟಿ ಯಲ್ಲಾಪುರ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಮೃತರ ಅಂತ್ಯಕ್ರಿಯ ನೆರವೇರಲಿದೆ ಎಂದು ಕುಟುಂಬ ಹಾಗೂ ತಾಲೂಕಾಡಳಿತದಿಂದ ತಿಳಿದು ಬಂದಿದೆ.

More Stories
16 ಲಕ್ಷ ಮೌಲ್ಯದ ಬಂಗಾರ ಮಾರಾಟ ಮಾಡಲು ಯತ್ನಿಸಿದ ಮಹಿಳೆ ಬಂಧನ…
ಹಾವೇರಿ ಜಿಲ್ಲಾಸತ್ರ ಕೋರ್ಟ್ಗೆ ಬಾಂಬ್ ಬೆದರಿಕೆ ಪತ್ರ; ಕೋರ್ಟನಿಂದ ಓಡಿ ಬಂದ ಕಕ್ಷಿದಾರರು, ವಕೀಲರು.
ಸಾಯಿ ಆಸ್ಪತ್ರೆ ವೈದ್ಯನ ಮೇಲೆ ಹಲ್ಲೆ: 8 ಜನರ ವಿರುದ್ಧ ಪ್ರಕರಣ ದಾಖಲು.