ರಾಣೇಬೆನ್ನೂರು: ಧಾರ್ಮಿಕ ಹೆಸರಿನಲ್ಲಿ ಇತ್ತಿಚೆಗೆ ದಿನಗಳಲ್ಲಿ ಮೂಢನಂಬಿಕೆ ಮೂಲಕ ಸಮಾಜದ ದಿಕ್ಕು ತಪ್ಪಿಸುವ ಕೆಲದ ಮಾಡುತ್ತಿದ್ದು, ಅವುಗಳನ್ನು ಸರಿದೂಗಿಸಲು ಮಾನವ ಬಂಧುತ್ವ ವೇದಿಕೆ ಸದಾ ಸಿದ್ದವಿದೆ ಎಂದು ಮಾನವ ಬಂಧುತ್ವ ವೇದಿಕೆ ತಾಲೂಕ ಸಂಚಾಲಕ ರಮೇಶ ಗೋಣಿಗೆರಿ ಹೇಳಿದರು.
ನಗರದ ರೇಣುಕಾ ಎಲ್ಲಮ್ಮ ಕಿವುಡು ಮತ್ತು ಮಕ್ಕಳ ಶಾಲೆಯಲ್ಲಿ ಮಾನವ ಬಂಧುತ್ವ ಹಾಗೂ ವಿವಿಧ ದಲಿತಪರ ಸಂಘಟನೆಗಳ ಆಶ್ರಯದಲ್ಲಿ ನಾಗರ ಪಂಚಮಿಯ ದಿನ ಬಸವ ಪಂಚಮಿ ಅಂಗವಾಗಿ ಹಾಲು,ಹಣ್ಣು ವಿತರಣೆ ಮಾಡಿ ಮಾತನಾಡಿದರು.
ನಾಗರಪಂಚಮಿ ದಿನ ನಾಗರಹಾವು ಹಾಗೂ ಹುತ್ತಕ್ಕೆ ಹಾಲು ಎರೆದು ಹಬ್ಬ ಆಚರಣೆ ಮಾಡಲಾಗುತ್ತದೆ. ಆದರೆ ಹಾವು ಎಂದಿಗೂ ಸಸ್ಯಹಾರಿ ಪ್ರಾಣಿಯಲ್ಲ, ಅದು ಮಾಂಸಹಾರಿ ಪ್ರಾಣಿಯಾಗಿದೆ. ಇಂತಹ ಪೌಷ್ಠಿಕ ಆಹಾರವನ್ನು ಹುತ್ತಕ್ಕೆ ಹಾಕುವ ಮೂಲಕ ನಮ್ಮಲ್ಲಿ ಮೌಡ್ಯ ತುಂಬುತ್ತಿದ್ದಾರೆ. ಇಂತಹ ಮೂಢನಂಬಿಕೆಗಳನ್ನು ಪೂರೋಹಿತಶಾಯಿಗಳು ನಮ್ಮಲ್ಲಿ ತುಂಬಿದ್ದಾರೆ. ಈ ನಿಟ್ಟಿನಲ್ಲಿ ಈ ವೇದಿಕೆ ಜನರಲ್ಲಿ ಜಾಗೃತಿ ಮೂಡಿಸಿ ಅದೇ ಹಾಲನ್ನು ಅನಾಥ ಮಕ್ಕಳಿಗೆ ಹಾಗೂ ಬಡ ಮಕ್ಕಳಿಗೆ ವಿತರಣೆ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ರವೀಂದ್ರಗೌಡ ಪಾಟೀಲ, ಚಂದ್ರಪ್ಪ ಬೇಡರ, ಕರಬಸಪ್ಪಕೂಲೇರ, ರಾಜು ಮಾದಮ್ಮಾನವರ, ಬೀರಪ್ಪ ಲಮಾಣಿ, ಬಸವರಾಜ ಬೋವಿ, ಅಶೋಕ ನಾಯ್ಕ, ಭರಮಪ್ಪ ಕೊರಕಲಿ, ಸದ್ಮಮ್ ಹುಸೇನ, ಸಂಜೀವ ಶಿಡಗನಾಳ ಸೇರಿದಂತೆ ಇತರರು ಹಾಜರಿದ್ದರು.
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.