ರಾಣೆಬೇನ್ನೂರು : ಲೋಕೋಪಯೋಗಿ ಇಲಾಖೆಯಲ್ಲಿ ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ರಾಣೆಬೇನ್ನೂರು ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ರಾಣೆಬೇನ್ನೂರು ನಗರದ ಚರ್ಚ ಓಣಿಯ ನಿವಾಸಿಯಾದ ರೋಹಿತ್ ಯಶವಂತ ಗುತ್ತಲ ಎಂಬ ವ್ಯಕ್ತಿ ಹಿರಿಯ ಅಧಿಕಾರಿಗಳು, ರಾಜಕಾರಣಿಗಳೊಂದಿಗೆ ತಾನು ತೆಗೆಸಿಕೊಂಡ ಪೋಟೋ ತೋರಿಸಿ ಯುವಕ – ಯುವತಿಯರಿಗೆ ಲೋಕೋಪಯೋಗಿ ಇಲಾಖೆಯಲ್ಲಿ ಸರಕಾರಿ ನೌಕರಿ ಕೊಡಿಸುವುದಾಗಿ ಕೋಟಿ ಕೋಟಿ ವಂಚನೆ ಮಾಡಿದ್ದು ಬೆಳಕಿಗೆ ಬಂದಿದೆ. ಪ್ರತಿಯೊಬ್ಬರಿಂದ 10 ರಿಂದ 13 ಲಕ್ಷ ಹಣ ಹಾಕಿಸಿಕೊಂಡಿದ್ದ ಎನ್ನಲಾಗಿದೆ. ಸಧ್ಯ 18 ಜನರಿಂದ 68,20,775 ರೂಪಾಯಿ ವಂಚನೆ ಆಗಿರುವುದು ದೂರಿನಲ್ಲಿ ದಾಖಲಾಗಿದೆ.
ಸರಕಾರಿ ಉದ್ಯೋಗ ಕೊಡಿಸುವ ಆಮಿಷ್ಯವೊಡ್ಡಿ ಪೂರ್ತಿ ಹಣ ನೀಡಿದವರಿಗೆ ದಾವಣಗೆರೆ ಲೋಕೋಪಯೋಗಿ ಇಲಾಖೆಗೆ ಹೋಗಿ ಜಾಯಿನ್ ಆಗಿ ಎಂದು ನಕಲಿ ಆದೇಶ ಪತ್ರ ನೀಡಿದ್ದ ಎನ್ನಲಾಗಿದೆ.
ಆದೇಶ ಪತ್ರ ಹಿಡಿದು ಕೆಲಸಕ್ಕೆ ಸೇರಲು ಹೋದಾಗ ವಂಚನೆಗೊಳಗಾಗಿದ್ದು ಬಯಲಿಗೆ ಬಂದಿದೆ. ವಂಚನೆಗೊಳಗಾದವರು ರೋಹಿತ್ ವಿರುದ್ದ ರಾಣೇಬೆನ್ನೂರು ಶಹರ ಠಾಣೆಯಲ್ಲಿ ದೂರು ನೀಡಿದ್ದಾರೆ.2021 ರಿಂದ ಹಂತ ಹಂತವಾಗಿ ಯುವಕ- ಯುವತಿಯರಿಂದ ಹಣ ಹಾರಿಸಿಕೊಂಡು ಬಂದಿದ್ದಾನೆ.ಸಧ್ಯ 18 ಜನ ವಂಚನೆಗೊಳಗಾದವರಿಂದ ದೂರು ದಾಖಲಾಗಿದೆ.
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.