ರಾಣೆಬೇನ್ನೂರು: ನಗರ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಬೈಕ್ ಕಳ್ಳತನ ಮಾಡಿ ಮಾಡಿ ಮಾರಾಟ ಮಾಡುತ್ತಿದ್ದ ಅಂತರ ಜಿಲ್ಲಾ ಕಳ್ಳರನ್ನ ಶಹರ ಠಾಣೆ ಪೋಲಿಸರು ಕಾರ್ಯಾಚರಣೆ ನಡೆಸಿ ಸುಮಾರು 29 ಬೈಕ್ ಜತೆಗೆ ಮೂವರು ಬೈಕ್ ಕಳ್ಳರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ಹಿರೆಕೇರೂರು ನಗರದ ಮೆಹಬೂಬ್ ಮುಗಳಗೇರಿ(28) ಖಲಂದರ್ ಪಠಾಣ(22) ಹಾಗೂ ಹುಬ್ಬಳ್ಳಿಯ ಎಸ್.ಎಮ್.ಕೃಷ್ಣ ನಗರದ ತನ್ವೀರ ಲಕ್ಷ್ಮೇಶ್ವರ(28) ಎಂಬ ಕಳ್ಳರನ್ನು ಬಂಧಿಸಿ ಇನ್ನೊರ್ವ ಹಬಿವುಲ್ಲಾ ಕಚವಿ ಪರಾರಿಯಾಗಿದ್ದಾನೆ.
ಇವರು ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಗದಗ ಸೇರಿದಂತೆ ವಿವಿಧ ಕಡೆ ಬೈಕ್ ಕಳ್ಳತನ ಮಾಡಿ ಐದು ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಈ ಸಮಯದಲ್ಲಿ ರಾಣೆಬೇನ್ನೂರು ನಗರದ ಎನ್.ವಿ.ಹೊಟೆಲ್ ಬಳಿ ನಂಬರ್ ಪ್ಲೇಟ್ ಇಲ್ಲದ ಎರಡು ಬೈಕ್ ಅನುಮಾನಸ್ಪದವಾಗಿ ಓಡಾಡುತ್ತಿದ್ದವು. ಇದನ್ನು ಗಮನಿಸಿದ ಶಹರ ಠಾಣೆಯ ಪೋಲಿಸರ ವಿಚಾರಿಸಿದಾಗ ಕಳ್ಳತನ ಮಾಡಿದ ಬೈಕ್ ಎಂಬುದು ಗೊತ್ತಾಗಿದೆ. ಸಿಸಿ ಟಿವಿ ವಿಡಿಯೋ, ತಾಂತ್ರಿಕ ಮಾಹಿತಿ ಆಧಾರಿಸಿ ನಂತರ ಆರೋಪಿಗಳನ್ನು ಬಂಧನ ಮಾಡಿ ಮಾರಾಟ ಮಾಡಿದ ಬೈಕಗಳನ್ನು ವಶಕ್ಕೆ ಪಡೆದಿದ್ದಾರೆ.
ಎಸ್ಪಿ ಅಂಶುಕುಮಾರ, ಹೆಚ್ಚುವರಿ ಎಸ್ಪಿ ಸಿ.ಗೋಪಾಲ, ರಾಣೆಬೇನ್ನೂರು ಡಿಎಸ್ಪಿ ಡಾ.ಗಿರೀಶ್ ಭೋಜಣ್ಣನವರ, ಸಿಪಿಐ ಡಾ.ಎಸ್.ಕೆ.ಶಂಕರ್, ಪಿಎಸ್ಐ ಗಡ್ಡೆಪ್ಪ ಗುಂಜಟಗಿ ವಿಶೇಷ ತಂಡ ರಚನೆ ಮೂಲಕ ಸಿಬ್ಬಂದಿಗಳಾ ಹೆಗ್ಗಪ್ಪ ದೊಡ್ಮನಿ, ಸಿ.ಬಿ.ಕಡ್ಲೇಪ್ಪನವರ, ವೈ.ಬಿ.ಓಲೇಕಾರ, ಪಿ.ಕೆ.ಸನದಿ, ಎಚ್.ಎಲ್ ದೊಡ್ಡಮನಿ, ಕಾರ್ಯಾಚರಣೆ ಭಾಗಿಯಾಗಿದ್ದರು..
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.