ರಾಣೆಬೇನ್ನೂರು: ಕಳ್ಳರು ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ಕಳ್ಳತನ ಮಾಡುತ್ತಾರೆ ಎಂಬುದಕ್ಕೆ ರಾಣೆಬೇನ್ನೂರು ನಗರದಲ್ಲಿ ನಡೆದ ಹಾಡು ಹಗಲೇ ಕಳ್ಳತನ ನಿದರ್ಶನವಾಗಿದೆ.
ಹೌದು ರಾಣೆಬೇನ್ನೂರು ನಗರದಲ್ಲಿ ಇತ್ತಿಚೆಗೆ ಸರಣಿ ಕಳ್ಳತನ ಪ್ರಕರಣಗಳು ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ ಎಂಬುದಕ್ಕೆ ಹಾಡು ಹಗಲೇ ಒಂಬತ್ತು ಲಕ್ಷ ರೂಪಾಯಿ ಕಳ್ಳತನ ಎದ್ದು ತೋರಿಸುತ್ತದೆ.
ನಗರದ ವೆಲ್ಡಿಂಗ್ ಕಾರ್ಮಿಕ ಸಂಘಟನೆ ಕೂಡಿಟ್ಟದ ಹಣವನ್ನು ಸದಸ್ಯರಾದ ಮುಸ್ತಾಕ ಅಹ್ಮದ್ ಹಾಗೂ ಮುಸ್ತಾಪಾ ಖಾನ ಅವರು ಕೆನರಾ ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡ ತಮ್ಮ ಹೊಂಡಾ ಯಾಕ್ಟಿವ್ ಸ್ಕೂಟಿಯ ಡಿಕ್ಕಿಯಲ್ಲಿ ಇಟ್ಟುಕೊಂಡು ಸಂಗಮ ವೃತ್ತಕ್ಕೆ ಬಂದಿದ್ದಾರೆ.
ಈ ಸಮಯದಲ್ಲಿ ಟೀ ಕುಡಿಯಲು ಹೋದಾಗ ಕಳ್ಳರು ಹೊಂಚು ಹಾಕಿ ಸ್ಕೂಟಿಯ ಡಿಕ್ಕಿಯಲ್ಲಿದ್ದ ಹಣವನ್ನು ಎಗರಿಸಿಕೊಂಡು ಪರಾರಿಯಾಗಿದ್ದಾರೆ.
ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗಾಗಿ ಪೋಲಿಸರು ಬಲೆ ಬೀಸಿದ್ದಾರೆ.
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.