ರಾಣೆಬೇನ್ನೂರು: ರಾಜ್ಯದ ರೈತರಿಗೆ ಮುಂಗಾರ ಬಿತ್ತನೆಗೆ ಬೀಜ, ಗೊಬ್ಬರ ನೀಡುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಬಿಜೆಪಿ ಮುಖಂಡ ಸಂತೋಷಕುಮಾರ ಪಾಟೀಲ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಣೆಬೇನ್ನೂರು ತಾಲೂಕಿನಲ್ಲಿ ಸಾವಿರಾರು ಹೆಕ್ಟೇರ್ ಬಿತ್ತನೆ ಮಾಡಬೇಕಾಗಿದೆ ಆದರೆ ಈ ವರೆಗೂ ರೈತರಿಗೆ ಸರಿಯಾದ ಬಿತ್ತನೆ ಬೀಜ, ಗೊಬ್ಬರ ಸರಬರಾಜು ಮಾಡಿಲ್ಲ. ಅಲ್ಲದೆ ಗ್ರಾಮ ಮಟ್ಟದಲ್ಲಿದ್ದ ಸೊಸೈಟಿಗಳಿಗೆ ಫೆಡರೇಷನ್ ವತಿಯಿಂದ ಗೊಬ್ಬರ ನೀಡಲಾಗುತಿತ್ತು. ಆದರೆ ಈ ವರೆಗೂ ಗೊಬ್ಬರ ಖರೀದಿ ಮಾಡದೆ ಹಳೆಯ ದಾಸ್ತಾನು ನೀಡಲು ಮುಂದಾಗಿದೆ. ಅಲ್ಲದೆ ಪ್ರತಿ ರೈತನಿಗೆ 30 ರಿಂದ 50 ದುಬಾರಿ ಆಗಿದೆ ಎಂದು ತಿಳಿಸಿದರು.
ಸರ್ಕಾರ ಮುಂಗಾರು ದಿನಗಳಲ್ಲಿ ರಾಜ್ಯದ ರೈತರಿಗೆ ಹಾಗೂ ತಾಲೂಕಿನ ಕೃಷಿಕರಿಗೆ ಅನುಕೂಲ ಮಾಡಿಕೊಡಬೇಕಾದ ಸಮಯದಲ್ಲಿ ಕೊರತೆ ಉಂಟು ಮಾಡಿದೆ. ಇದಕ್ಕೆ ನೇರ ಕಾರಣ ಕೃಷಿ ಅಧಿಕಾರಿಗಳು ಯಾಕೆಂದರೆ ಮುಂಗಾರು ಪ್ರಾರಂಭದಲ್ಲಿ ಸಭೆ ನಡೆಸಿ ಬಿತ್ತನೆಗೆ ಬೇಕಾದ ಬೀಜ,ಗೊಬ್ಬರ ಬಗ್ಗೆ ಮಾಹಿತಿ ಪಡೆಯಬೇಕು ಆದರೆ ಯಾವುದೇ ಒಂದು ಸಣ್ಣ ಸಭೆ ಸಹ ನಡೆಸಿಲ್ಲ ಎಂದು ಆರೋಪಿಸಿದರು.
ಕೂಡಲೇ ಸರ್ಕಾರ ಇದರ ಬಗ್ಗೆ ಗಮನಹರಿಸಿ ಬಿತ್ತನೆ ಬೀಜ ಹಾಗೂ ಗೊಬ್ಬರ ಪೂರೈಕೆ ಮಾಡಬೇಕು ಎಂದು ಸರ್ಕಾರಕ್ಕೆ ಆಗ್ರಹ ಮಾಡಿದರು.
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.