ರಾಣೆಬೇನ್ನೂರು: ಪರಿಸರ ಕಾಳಜಿ ಇಂದಿನ ದಿನಗಳಲ್ಲಿ ಎಲ್ಲಾ ಸಕಲ ಜೀವಿಗಳಿಗೆ ಅತಿಅವಶ್ಯಕವಾಗಿದ್ದು ಸಮಾಜದಲ್ಲಿನ ಸಾರ್ವಜನಿಕರು,ಯುವಕರು, ಅಧಿಕಾರಿಗಳು ಸೇರಿದಂತೆ ಎಲ್ಲರೂ ಪರಿಸರವನ್ನು ಉಳಿಸಿಬೆಳೆಸಬೇಕು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಂಶುಕುಮಾರ ಹೇಳಿದರು.
ರಾಣೇಬೆನ್ನೂರು ನಗರದ ಹೊರಭಾಗದಲ್ಲರುವ ಪೋಲಿಸ್ ಕವಾಯತು ಮೈದಾನದಲ್ಲಿ ಹಾವೇರಿ ಜಿಲ್ಲಾ ಪೊಲೀಸ್ ಇಲಾಖೆ, ರಾಣೇಬೆನ್ನೂರು ಉಪವಿಭಾಗ ಪೊಲೀಸ್ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ, ಸರ್ಕಾರಿ ಪದವಿ ಕಾಲೇಜು ಎನ್ ಎನ್ ಎಸ್ ಘಟಕ, ಓಂ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬ ನಾಗರೀಕರು ತಮ್ಮ ಮನೆ, ಹೊಲ, ಕಚೇರಿ ಸೇರಿದಂತೆ ಬಯಲು ಪ್ರದೇಶಗಳಲ್ಲಿ ಒಂದು ಗಿಡ ನೆಟ್ಟು ಪೊಷಣೆ ಮಾಡುವ ಮೂಲಕ ಪರಿಸರಕ್ಕೆ ಕೊಡುಗೆ ನೀಡಬೇಕು. ಇದರಿಂದ ಅಂತಹ ಪೋಷಿಸಿದ ಸಸಿಗಳು ಗಿಡ-ಮರಗಳಾಗಿ ಉತ್ತಮ ಗಾಳಿ, ನೆರಳು ನೀಡುತ್ತವೆ. ಇದರಿಂದ ನಮ್ಮ ಆರೋಗ್ಯ ಜತೆಗೆ ಪರಿಸರ ಸಹ ಸುಂದರವಾಗಿ ಕಾಣುತ್ತದೆ ಎಂದರು.
ದೆಹಲಿ ಹಿರಿಯ ಪೊಲೀಸ್ ಅಧಿಕಾರಿ ಪ್ರಜ್ಞಾ ಅಂಶ್ಯುಕುಮಾರ ಮಾತನಾಡಿ, ನಾವುಗಳು ಇಂತಹ ಸುಡು ಬಿಸಿಲಿನಲ್ಲಿ ಕೂತು ಪರಿಸರ ದಿನ ಆಚರಣೆ ಮಾಡುತ್ತಿದ್ದೇವೆ. ಇದಕ್ಕೆ ಕಾರಣ ನಾವುಗಳು ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಗೂ ನೆರಳು ಅವಶ್ಯಕ ಆದ ಕಾರಣ ನಾವುಗಳು ಸಸಿಗಳನ್ನು ನೆಡಲು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಎಸ್ ಪಿ, ಗೋಪಾಲ ಸಿ, ಉಪ ಅರಣ್ಯಾಧಿಕಾರಿ ಪವನ ಎರಗಲ್, ಶಶಿಕಲಾ ಬೂಮರ್, ಅರುಣಕುಮಾರ ಚಂದನ್, ಡಿವೈಎಸ್ಪಿ ಡಾ.ಗಿರೀಶ್ ಭೋಜಣ್ಣನವರ, ಶಹರ ಠಾಣೆ ಸಿಪಿಐ ಡಾ.ಶಂಕರ್, ಗ್ರಾಮೀಣ ಠಾಣೆ ಸಿಪಿಐ ಪ್ರವೀಣಕುಮಾರ, ಕುಮಾರಪಟ್ಟಣಂ ಸಿಪಿಐ ಸಿದ್ದೇಶ, ಪಿಎಸ್ಐ ಗಳಾದ ಗಡ್ಡೆಪ್ಪ ಗುಂಜಟಗಿ, ಪರಶುರಾಮ ಲಮಾಣಿ, ಸಂಗೀತಾ ದೊಡ್ಡಮನಿ, ಮಹಾಂತೇಶ ಎಂ.ಎಂ, ಪ್ರವೀಣಕುಮಾರ ಸೇರಿದಂತೆ ಪೋಲಿಸ್ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.