ರಾಣೆಬೇನ್ನೂರು: ನಗರದಲ್ಲಿ ದಿನದಿಂದ ದಿನಕ್ಕೆ ಮೀಟರ್ ಬಡ್ಡಿ ವ್ಯವಹಾರ ದಂಧೆ ಹೆಚ್ಚಾಗಿದ್ದು ಸಾಲ ತೆಗೆದುಕೊಂಡು ವ್ಯಕ್ತಿಗಳು ಕಿರುಕುಳ ತಾಳಲಾರದೆ ಆತ್ಮಹತ್ಯೆ ದಾರಿ ಹಿಡಿಯುವ ಪ್ರಕರಣಗಳು ಹೆಚ್ಚಾಗಿವೆ.
ಹೌದು ರಾಣೆಬೇನ್ನೂರು ಹೊರಭಾಗದ ಅಡವಿ ಆಂಜನೇಯ ಬಡಾವಣೆಯಲ್ಲಿ ಟೈಲರ್ ವೃತ್ತಿ ಮಾಡುತ್ತಿದ್ದ ರಾಮಚಂದ್ರ ಮಾಳದಕರ ಎಂಬ ವ್ಯಕ್ತಿ ಶೇಖಣ್ಣ ನಾಡರ, ಶಿವರಾಜ ನವಲೆ ಎಂಬುವರ ಹತ್ತಿರ ವೈಯಕ್ತಿಕ ಸಾಲ ಪಡೆದುಕೊಂಡಿದ್ದರು. ಆದರೆ ಸಾಲಕ್ಕೆ ಬಡ್ಡಿ ರೂಪದಲ್ಲಿ ಹಣವನ್ನು ನೀಡಿದ್ದಾರೆ ಆದರೆ ಮೀಟರ್ ಬಡ್ಡಿ ಮಾಡಿದ ಕಾರಣ ಸಾಲದ ಹೊರೆ ಹೆಚ್ಚಾಗಿದೆ. ಇದರಿಂದ ಸಾಲ ನೀಡಿದ ನಗರದ ಶೇಖಣ್ಣ ನಾಡರ, ಶಿವರಾಜ ನವಲೆ ಮನೆಗೆ ಬಂದು ಬೆದರಿಕೆ ಹಾಗೂ ಕಿರುಕುಳ ತಾಳಲಾರದೆ ರಾಮಚಂದ್ರ ಅವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದರಿಂದ ಮೃತಪಟ್ಟ ರಾಮಚಂದ್ರ ಪತ್ನಿ ರಾಣೆಬೇನ್ನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದಂಧೆಗೆ ಪೋಲಿಸರ ಸಾಥ..!
ನಗರದಲ್ಲಿ ನಡೆಯುವ ಬಡ್ಡಿ ವ್ಯವಹಾರ ಜತೆ ಕೆಲವರು ಮೀಟರ್ ಬಡ್ಡಿ ವ್ಯವಹಾರ ದಂಧೆ ನಡೆಸುತ್ತಿದ್ದು, ಅಮಾಯಕರ ಹಣ ನೀಡಿ ಅಧಿಕ ಹಣ ವಸೂಲಿ ಮಾಡುತ್ತಿದ್ದಾರೆ. ಇದು ಪೋಲಿಸ್ ಇಲಾಖೆಗೆ ಮಾಹಿತಿ ಇದ್ದರು ಮೌನವಾಗಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.