ಕೈ-ಕಮಲ ನಡುವೆ ರಾಜಕೀಯ ಪ್ರತಿಷ್ಠೆ; ನಗರಸಭೆ ಸಾಮಾನ್ಯ ಸಭೆ ಮುಂದೂಡಿಕೆ.

ಹಾನಗಲ್ ತಹಸೀಲ್ದಾರ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ.

ಬಿಗರ ಊಟ ಮಾಡಿ ಬರುತ್ತಿದ್ದವರು ಮಸಣಕ್ಕೆ *ನಿಂತಿದ್ದ ಟ್ರ್ಯಾಕ್ಟರ್ ಟ್ರೈಲರ್ ಗೆ ಟಾಟಾ ಸುಪ್ರೋ ಡಿಕ್ಕಿ* *ಸ್ಥಳದಲ್ಲಿಯೆ ಮೂವರ ದುರ್ಮರಣ, 20ಕ್ಕೂ ಅಧಿಕರಿಗೆ ಗಂಭೀರ ಗಾಯ*

ತಾಪಂ ಪ್ರಭಾರ ಇಓ ಬಸವರಾಜ ಶಿಡೇನೂರ ಬಳಿ ಒಂದೂವರೆ ಕೋಟಿ ಆಸ್ತಿ..

ಕಂದಾಯ ನಿರೀಕ್ಷ ಅಶೋಕ‌ ಅರಳೇಶ್ವರ ಬಳಿ ಕೋಟ್ಯಾಂತರ ಆಸ್ತಿ ಪತ್ತೆ.

ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ* *ಸವಣೂರ ತಾಪಂ ಪ್ರಭಾರ ಇಓ, ರಾಣೆಬೆನ್ನೂರ ಆರ್ ಐ ಮನೆ ಮೇಲೆ ದಾಳಿ..

ಚಿರತೆ ದಾಳಿ ಓರ್ವ ರೈತ ಸಾವು. ಇನ್ನೋರ್ವ ನಿಗೆ ಗಂಭೀರ ಗಾಯ.

ಸಮಾಜದಲ್ಲಿ ದುರ್ಬಲರನ್ನ ಗುರುತಿಸುವುದು ನಿಜವಾದ ಪತ್ರಿಕೋದ್ಯಮ; ಮಾಲತೇಶ ಅಂಗೂರು

ವೈದ್ಯನ ಮೇಲೆ ಹಲ್ಲೆ ಮಾಡಿದ 11 ಜನರ ಬಂಧನ..

ಎಸ್ಟಿ ನಕಲಿ ಜಾತಿ ಪ್ರಮಾಣ ಪತ್ರ ವಿತರಣೆ ಹಾಗೂ ಅನ್ಯ ಪ್ರಬಲ ಜಾತಿ ಎಸ್ಟಿ ಸೇರ್ಪಡೆ ವಿರೋಧಿಸಿ ವಾಲ್ಮೀಕಿ ಸಮುದಾಯ ಪ್ರತಿಭಟನೆ.

ಸರಿಯಾದ ಮಾಹಿತಿ ನೀಡುವ ಮೂಲಕ ಸಮೀಕ್ಷೆ ಯಶಸ್ವಿ ಮಾಡಿ ಶಾಸಕ ಪ್ರಕಾಶ ಕೋಳಿವಾಡ

ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಮಾತನಾಡಿದ್ದಾರೆ ಎಂದು ಹಲ್ಲಗೈದ ಯುವಕರು. ಆರೋಪ-ಪ್ರತ್ಯಾರೋಪದ ಪ್ರಕರಣ ದಾಖಲು.

ಪೌರಕಾರ್ಮಿಕರ ಸಮಾಜದ ಸ್ವಚ್ಛ ಮುಖಿಗಳು, ಅಮೂಲ್ಯ ರತ್ನಗಳು ಪೌರಾಯುಕ್ತ ಎಫ್.ಐ.ಇಂಗಳಗಿ

ICAR ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ದೇಶಕ್ಕೆ ಐದನೇ ಸ್ಥಾನ ಗಳಿಸಿದ ಪೋಲಿಸ್ ಪೇದೆ ಪುತ್ರಿ..

ಶಿಕ್ಷಕರಿಗೆ ಶೀಘ್ರವಾಗಿ ಹಳೆ ಪಿಂಚಣಿ ಯೋಜನೆ ಜಾರಿ ಮಾಡುತ್ತವೆ ಸಚಿವ ಮಧು ಬಂಗಾರಪ್ಪ.

ಕವಲೇತ್ತು ಗ್ರಾಪಂನಲ್ಲಿ ಲಕ್ಷಾಂತರ ರೂ ಅವ್ಯವಹಾರ ಮಾಡಿದ ಪಿಡಿಓ.

ಅನುದಾನಿತ ಶಾಲಾ ಶಿಕ್ಷಕರ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಸೆ.14ರಂದು

ಅಕ್ರಮ ಸಂಬಂಧಕ್ಕೆ ಮುಗ್ಧ ಕಂದಮ್ಮನ್ನು ಕೊಂದ ದುರುಳ ಹೆತ್ತ ತಾಯಿ..

ನಕಲಿ ಬೀಜದಂಗಡಿಯವರ ಜತೆ “ಡೀಲ್ ಮಾಡಿಕೊಂಡಿಲ್ಲ” ಶಾಸಕ ಪ್ರಕಾಶ ಕೋಳಿವಾಡ ಆಕ್ರೋಶ.

ಅನುಭವ ಮಂಟಪ ಮಾದರಿ ಗಣಪತಿ ಸಮಿತಿ ವತಿಯಿಂದ ರಕ್ತದಾನ ಶಿಬಿರ

ಕವಲೇತ್ತು ಗ್ರಾಪಂನಲ್ಲಿ ಲಕ್ಷಾಂತರ ರೂ ಅವ್ಯವಹಾರ ಮಾಡಿದ ಪಿಡಿಓ.

ರಾಣೆಬೇನ್ನೂರು: ತಾಲೂಕಿನ ಕವಲೆತ್ತು ಗ್ರಾಪಂನಲ್ಲಿ ಹೊಲಿಗೆ ಯಂತ್ರ ಖರೀದಿ, ಲ್ಯಾಪ್‌ಟಾಪ್ ಹಾಗೂ ಮೋಟರ್ ಯಂತ್ರ ಖರೀದಿ ಸೇರಿದಂತೆ ಇತರ ವ್ಯವಹಾರಗಳಲ್ಲಿ ಕೋಟ್ಯಾಂತರ ರೂ. ಅವ್ಯವಹಾರ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಕುರಿತು ಸ್ವತಃ ಗ್ರಾಪಂ ಸದಸ್ಯರೇ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.

ಗ್ರಾಪಂ ವತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಂಗವಿಕಲರ ಜೀವನೋಪಾಯಕ್ಕಾಗಿ ವಿಜಾರ 20 ಹೊಲಿಗೆ ಯಂತ್ರ ಫಲಾನುಭವಿಗಳಿಗೆ ನೀಡಿದ್ದಾರೆ. ಒಂದು ಹೊಲಿಗೆ ಯಂತ್ರಕ್ಕೆ 13,364 ರೂ.ನಂತೆ ಒಟ್ಟು 20 ಯಂತ್ರಗಳಿಗೆ 2,99,354 ರೂ. ನೀಡಲಾಗಿದೆ. ಆದರೆ, ಗ್ರಾಪಂ ಸದಸ್ಯರು ಅದೇ ಹೊಲಿಗೆ ಯಂತ್ರಗಳನ್ನು ಗ್ರಾಪಂ ಪಿಡಿಒ ಖರೀದಿಸಿದ ಅಂಗಡಿಗೆ ತೆರಳಿ 20 ಹೊಲಿಗೆ ಯಂತ್ರಗಳ ಕೋಟೇಷನ್ ತಂದಿದ್ದಾರೆ. ಅದರಲ್ಲಿ ಪ್ರತಿ ಯಂತ್ರಕ್ಕೆ 6800 ರೂ.ನಂತೆ ಒಟ್ಟು 20ಕ್ಕೆ 1,90,400 ನೀಡಲಾಗಿದೆ. ಹೀಗಾಗಿ ಹೊಲಿಗೆ ಯಂತ್ರ ಖರೀದಿಯಲ್ಲಿ ಗ್ರಾಪಂ ಪಿಡಿಒ ಅವ್ಯವಹಾರ ಮಾಡಿದ್ದಾರೆ ಎಂಬುದು ಗ್ರಾಪಂ ಸದಸ್ಯರ ಆರೋಪವಾಗಿದೆ.

ಲ್ಯಾಪ್‌ಟಾಪ್ ಖರೀದಿ ಗೋಲ್‌ಮಾಲ್:
ಗ್ರಾಪಂ ವತಿಯಿಂದ 2025-26ನೇ ಸಾಲಿನ ಪರಿಶಿಷ್ಟ ವರ್ಗದ ವಿದ್ಯಾರ್ಥಿಯೊಬ್ಬರಿಗೆ ಲೆನೋವೊ ಕಂಪನಿಯ ಲ್ಯಾಪ್‌ಟಾಪ್
ಕೊಡಲಾಗಿದೆ. ಅದರ ಮಾರುಕಟ್ಟೆ ಬೆಲೆ 25,600 ರೂ. ಇದೆ. ಆದರೆ, ಗ್ರಾಪಂನಿಂದ 60 ಸಾವಿರ ರೂ. ಕೊಟ್ಟು ಖರೀದಿ ಮಾಡಲಾಗಿದೆ. ಅದರ ಜತೆಗೆ ಗ್ರಾಪಂ ಕಚೇರಿ ಉಪಯೋಗಕ್ಕಾಗಿ ಏಸಸ್ ಕಂಪನಿಯ ಲ್ಯಾಪ್‌ಟಾಪ್ ಖರೀದಿ ಮಾಡಲಾಗಿದೆ. ಅದರ ಮಾರುಕಟ್ಟೆ ಬೆಲೆ 22 ಸಾವಿರ ರೂ. ಇದೆ. ಗ್ರಾಪಂನಿಂದ 40990 ರೂ. ಕೊಟ್ಟು ಖರೀದಿ ಮಾಡಲಾಗಿದೆ.

ಗ್ರಾಪಂನಲ್ಲಿ ಸ್ವೀಪರ್ ಕೆಲಸ ಮಾಡುತ್ತಿದ್ದ ಮಹದೇವಪ್ಪ ಪೆದ್ದಪ್ಪನವರ ಎಂಬುವರು ಅವರ ಶಾಲೆಯ ದಾಖಲಾತಿಯಲ್ಲಿರುವ ಜನ್ಮದಿನಾಂಕದ ಪ್ರಕಾರ 2024 ನವೆಂಬರ್ 13ರಂದು ನಿವೃತ್ತಿ ಹೊಂದಿದ್ದಾರೆ. ಆದರೆ, ಗ್ರಾಪಂ ವತಿಯಿಂದ ಅವರಿಗೆ ಪ್ರತಿ ತಿಂಗಳು 18,243 ರೂ.ನಂತೆ ಒಟ್ಟು ಪ್ರಸಕ್ತ ವರ್ಷದ ಆಗಸ್ಟ್ ಸೇರಿ ತಿಂಗಳು 9 ತಿಂಗಳು ಸಂಬಳ ಪಾವತಿಸಲಾಗಿದೆ. ಈ ಬಗ್ಗೆ ಗ್ರಾಪಂ ಪಿಡಿಒ ಶಾಂತಿನಾಥ ನ್ಯಾಮಗೌಡ್ರ ಅವರನ್ನು ವಿಚಾರಿಸಿದಾಗ ‘ಆತನ ಆಧಾರ್ ಕಾಡ್ ೯ನಲ್ಲಿ ಜನ್ಮದಿನಾಂಕ ಎರಡು ರೀತಿಯಲ್ಲಿದೆ. ಆದ್ದರಿಂದ ಆತನಿಗೆ ನಿವೃತ್ತಿಯಾಗಿಲ್ಲ. ಈ ಬಗ್ಗೆ ಆತ ನ್ಯಾಯಾಲಯದ ಮೋರೆ ಹೋಗಿದ್ದಾನೆ’ ಎಂದು ಪ್ರತಿಕ್ರಿಯಿಸಿದರು.

ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!