ರಾಣೆಬೇನ್ನೂರು: ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ದಂಪತಿಗಳು ಜೀವನದಲ್ಲಿ ಒಂದಾಗಿ ಸಂಸಾರ ಮಾಡಿದ ನಂತರ ಸಾವಿನಲ್ಲಿ ಒಂದಾದ ಅಪರೂಪದ ಘಟನೆ ರವಿವಾರ ನಡೆದಿದೆ.
ಗ್ರಾಮದ ವೀರಬಸಪ್ಪ ಗೋವಿಂದಪ್ಪ ಗೋಣಗೇರ(70) ಎಂಬುವರು ವಯೋಸಹಜದಿಂದ ಸಾವನ್ನಪ್ಪಿದರು. ಇವರು ಮೃತಪಟ್ಟ ನಂತರ ಗ್ರಾಮಸ್ಥರು ವೀರಬಸಪ್ಪನ ಶವಸಂಸ್ಕಾರ ಮಾಡಲು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅಂತ್ಯಕ್ರಿಯೆ ಮಾಡುವ ಸಮಯದಲ್ಲಿ ವೀರಬಸಪ್ಪ ಹೆಂಡತಿ ಬಸಮ್ಮ ವೀರಬಸಪ್ಪ ಗೋಣಗೇರ(64) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಕಳೆದ ಐವತ್ತು ವರ್ಷಗಳ ಕಾಲ ಒಂದಾಗಿ ಜೀವನ ಮಾಡಿದ್ದ ದಂಪತಿಗಳು ಒಂದೇ ಸಮಯದಲ್ಲಿ ಮೃತಪಟ್ಟ ಹಿನ್ನೆಲೆ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿತ್ತು ನಂತರ ಇವರಿಬ್ಬರನ್ನು ಕುಟುಂಬಸ್ಥರು ಜತೆಯಾಗಿ ಅಂತ್ಯಕ್ರಿಯೆ ಮಾಡಿದರು.

More Stories
ಸಿಎಂ ಬದಲಾವಣೆ ವಿಚಾರ ಹೈಕಮಾಂಡಗೆ ಬಿಟ್ಟ ವಿಚಾರ; ಕೆ.ಬಿ.ಕೋಳಿವಾಡ.
ಕಾಂಗ್ರೆಸ್ ಪಕ್ಷ ಹಿಂದುಳಿದ, ದಲಿತರಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೆ ಎಲ್ಲಾ ಸ್ಥಾನಮಾನ ನೀಡಿದೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ.
ಡಿಕೆಶಿ ಭೇಟಿ ಮಾಡಿದ ಹಾವೇರಿ ಜಿಲ್ಲೆಯ ಮೂವರು ಶಾಸಕರು.