ರಾಣೆಬೇನ್ನೂರು: ಹೆಂಡತಿಯ ಶೀಲ ಸಂಕಿಸಿದ ಪತಿರಾಯ ಪತ್ನಿಯ ಕತ್ತುಕೊಯ್ದು ಹತ್ಯಗೆ ಯತ್ನಿಸಿದ ಘಟನೆ ನಗರದ ಹೊರಭಾಗದ ಸುವರ್ಣ ಪಾರ್ಕಿನಲ್ಲಿ ನಡೆದಿದೆ.
ಬೆಂಗಳೂರಿನ ಉಲ್ಲಾಳದ ಪದ್ಮಾ ಯೋಗೇಶ(22) ಹತ್ಯೆಗೆ ಒಳಗಾದ ಮಹಿಳೆ. ದಾವಣಗೆರೆ ಶ್ರೀರಾಮನಗರದ ಯೋಗೇಶ(22) ಪತ್ನಿಯ ಹತ್ಯೆಗೆ ಯತ್ನಿಸಿದ ಆರೋಪಿ.
ಪದ್ಮಾ ಒಂದನೇ ಪತಿ ಬಿಟ್ಟ ಬಳಿಕ ಯೋಗೇಶನನ್ನು ಆರು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದಳು. ಇದಾದ ಬಳಿಕ ಇಬ್ಬರು ದಾವಣಗೆರೆಯಲ್ಲಿ ನೆಲೆಸಿದ್ದರು. ಪದ್ಮಾ ರಾಣೆಬೆನ್ನೂರ ನಗರದಲ್ಲಿ ವೃದ್ದರೊಬ್ಬರನ್ನು ನೋಡಿಕೊಳ್ಳುವ ಕೆಲಸಕ್ಕೆ ಸೇರಿಕೊಂಡಿದ್ದಳು.
ಆದರೆ ಇತ್ತೀಚಿನ ದಿನಗಳಲ್ಲಿ ನೀನು ಯಾರದ್ದೋ ಜತೆ ಮಾತನಾಡುತ್ತೀಯಾ ಎಂದು ಯೋಗೇಶ ಪದ್ಮಾಳೊಂದಿಗೆ ಜಗಳ ಮಾಡುತ್ತ ಬಂದಿದ್ದ.ಇದೇ ಕಾರಣಕ್ಕೆ ಬುಧವಾರ ಪದ್ಮಾಳನ್ನು ಪಾನಿಪುರಿ ತಿನಿಸುವೆ ಬಾ ಎಂದು ಕರೆದುಕೊಂಡು ಹೋಗಿ ಸ್ವರ್ಣ ಪಾರ್ಕ್ ನಲ್ಲಿ ಚಾಕುವಿನಿಂದ ಕತ್ತು ಕೊಯ್ದು ಕೊಲೆಗೆ ಯತ್ನಿಸಿದ್ದಾನೆ
ಆತನಿಂದ ಬಿಡಿಸಿಕೊಂಡು ಓಡುತ್ತಿದ್ದ ಪದ್ಮಾಳನ್ನು ನೋಡಿದ ಸ್ಥಳೀಯರಿಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಹಲಗೇರಿ ಠಾಣೆ ಪೊಲೀಸರು ಪದ್ಮಾಳನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ
ಆರೋಪಿ ಯೋಗೇಶ ಪೊಲೀಸರನ್ನು ನೋಡಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗಾಗಿ ಜಾಲ ಬೀಸಿದ್ದಾರೆ.
More Stories
ಕೈ-ಕಮಲ ನಡುವೆ ರಾಜಕೀಯ ಪ್ರತಿಷ್ಠೆ; ನಗರಸಭೆ ಸಾಮಾನ್ಯ ಸಭೆ ಮುಂದೂಡಿಕೆ.
ಹಾನಗಲ್ ತಹಸೀಲ್ದಾರ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ.
ಬಿಗರ ಊಟ ಮಾಡಿ ಬರುತ್ತಿದ್ದವರು ಮಸಣಕ್ಕೆ *ನಿಂತಿದ್ದ ಟ್ರ್ಯಾಕ್ಟರ್ ಟ್ರೈಲರ್ ಗೆ ಟಾಟಾ ಸುಪ್ರೋ ಡಿಕ್ಕಿ* *ಸ್ಥಳದಲ್ಲಿಯೆ ಮೂವರ ದುರ್ಮರಣ, 20ಕ್ಕೂ ಅಧಿಕರಿಗೆ ಗಂಭೀರ ಗಾಯ*