ಬ್ಯಾಡಗಿ: ರಜೆಯ ಮಜಾ ಅನುಭವಿಸಲು ಮಕ್ಕಳ ಜತೆ ಅಗಡಿ ತೋಟಕ್ಕೆ ಹೋಗುತ್ತಿದ್ದ ಕುಟುಂಬ ಭೀಕರ ಅಪಘಾತದಲ್ಲಿ ಮಸಣಕ್ಕೆ ಸೇರಿರುವುದರಿಂದ ನೋಡುಗರಿಗೆ ಕರಳು ಕಿವುಚವಂತಿತ್ತು.
ಹೌದು ರಾಣೆಬೇನ್ನೂರು ನಗರದ ಸಿದ್ದೇಶ್ವರ ನಗರದಲ್ಲಿರುವ ಅಪ್ರೋಜ್ ಎಂಬುವರು ಕುಟುಂಬದ ಕಾರ್ಯಕ್ರಮಕ್ಕೆ ಬಂದಿದ್ದ ಅವರ ಸಂಬಂಧಿಕರು ಮೋಟೆಬೆನ್ನೂರು ಬಳಿ ನಡೆದ ಲಾರಿ ಹಾಗೂ ಕಾರು ನಡುವಿನ ಅಪಘಾತದಲ್ಲಿ ಆರು ಜನ ಮೃತಟ್ಟಿದ್ದಾರೆ.
ಮೃತಪಟ್ಟವರ ಹರಿಹರದ ಫರಾನ್(17), ರಾಣೆಬೇನ್ನೂರು ನಗರದ ಉಮ್ಮಿಶಿಪಾ(16), ಗೋವಾದ ಅಲಿಷಾ(20), ಪೂಲಖಾನ್( 17) ಹಾಗೂ ಫಿರೋಜ್ ಮೃತಪಟ್ಟ ದುರ್ದೈವಿಗಳು.
ಬೆಳಿಗ್ಗೆ ರಾಣೆಬೇನ್ನೂರು ನಗರದಿಂದ ಆಡಿ ಕಾರಿನಲ್ಲಿ ಆರು ಜನರು ಅಗಡಿ ತೋಟಕ್ಕೆ ತೆರಳಿ ನಂತರ ಗೋವಾ ಹೋಗುವ ಯೋಜನೆ ಹಾಕಿಕೊಂಡಿದ್ದರು. ಈ ಸಮಯದಲ್ಲಿ ಮೋಟೆಬೆನ್ನೂರು ಬಳಿ ಬಂದಾಗ ಆಡಿ ಕಾರು ಲಾರಿಯ ಹಿಂಬದಿಗೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದ್ದು ಕಾರಿನಲ್ಲಿ ಇದ್ದವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ.
More Stories
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.
ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಮತ್ತು ವೃತ್ತ ಲೋಕಾರ್ಪಣೆ ನಾಡಿದ್ದು