ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.

ಆಟೋ ಚಾಲಕರಿಗೆ ಸನ್ಮಾನ ಸಮಾರಂಭ ಮಾಡಲಿರುವ “ಪರಮೇಶಣ್ಣ ಗೂಳಣ್ಣನವರ”

ಯಾವ ಸಮಾಜಕ್ಕೂ, ಜಾತಿಗೂ ತಾರತಮ್ಯ ಮಾಡಲ್ಲ ಶಾಸಕ‌ ಪ್ರಕಾಶ ಕೋಳಿವಾಡ,

ನಗರದ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ಐದು ದಿನಗಳ ಕಾಲ ಹಲಸು-ಮಾವು‌‌ ಮೇಳ.

ಹಾವೇರಿ ನೂತನ ಎಸ್ಪಿಯಾಗಿ ಮಹಿಳಾ ಅಧಿಕಾರಿ, ಯಾರು ಅವರು!

ರಾಣೆಬೆನ್ನೂರ ನಗರದಲ್ಲಿ ನಕಲಿ ರಸಗೊಬ್ಬರ ಪತ್ತೆ, ವಶಪಡಿಸಿಕೊಂಡ ಕೃಷಿ ಅಧಿಕಾರಿಗಳು.

ಯಕಲಾಸಪುರ ಗ್ರಾಮ ಚಿರತೆಗಳ ತಾಣ, ಹೆಣ್ಣು ಚಿರತೆ ಮರಿಗಳಿಗೆ ಜನ್ಮ ನೀಡಿರುವ ಹಾಕಿರುವ ಶಂಕೆ…

ಬಿರ್ಲಾ ಕಂಪನಿಯಲ್ಲಿ ಕೆಲಸ ಮಾಡುವಾಗ ಹೃದಯಾಘಾತದಿಂದ ನೌಕರ ಸಾವು.

ಸಂತೋಷಕುಮಾರ ಪಾಟೀಲಗೆ Z ಕನ್ನಡ ನ್ಯೂಸ್ ವತಿಯಿಂದ ಯುವರತ್ನ ಪ್ರಶಸ್ತಿ.

ಸ್ವಚ್ಛ ಕೈಯಿಂದ ಕೆಲಸ ಮಾಡಿ‌ ಇಲ್ಲ ರಾಜೀನಾಮೆ ಕೊಟ್ಟು ಹೊರಗೆ ಹೋಗಿ; ಲೋಕಾಯುಕ್ತ ಅಧಿಕಾರಿಗಳು.

ನಾಳೆ ನಗರದಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ..

ಇಸ್ಪೀಟು ಅಡ್ಡೆ ಮೇಲೆ ಹಲಗೇರಿ ಪೋಲಿಸರ ದಾಳಿ, ಹತ್ತು ಜನರು ಮೇಲೆ ಪ್ರಕರಣ

ಬೆಟ್ಟ ಮಲ್ಲಪ್ಪನ ಗುಡ್ಡ ಇನ್ನೂ ಪ್ರವಾಸಿ ತಾಣ ಸಚಿವ ಹೆಚ್.ಕೆ.ಪಾಟೀಲ.

ರಾಹುಲ್ ಗಾಂಧಿ ಖಾಲಿ ಸಂವಿಧಾನ‌ ಬುಕ್ ಇಟ್ಟಕೊಂಡು ಓಡಾಡುತ್ತಿದ್ದಾರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ನನ್ನ ವಿರುದ್ಧ ಆರೋಪ‌ ಮಾಡಿರುವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕುವೆ ಸಿದ್ಧಾರೂಢ‌ ಮಠದ ಧರ್ಮದರ್ಶಿ ಸಿದ್ದನಗೌಡ ಪಾಟೀಲ..

ಕಳಪೆ ಬೀಜ ಮಾರಾಟ ಮಾಡಿದ್ದ ಐದು ಅಂಗಡಿಗೆ ಬೀಗ ಮುದ್ರೆ…!

ಗುಡಗೂರು ಗ್ರಾಮದಲ್ಲಿ ವೃದ್ಧನ ಮೇಲೆ ಹರಿದ ಖಾಸಗಿ ಶಾಲೆಯ ಬಸ್.

ತಾಲೂಕಿನ ಒಂದೇ ದಿನ ಮೂರು ಸಾವಿನ ಪ್ರಕರಣಗಳು ದಾಖಲು..! ಘಟನೆಗಳು ಎಲ್ಲೇಲಿ?

ರಾಣೆಬೇನ್ನೂರು ನಕಲಿ ಬೀಜ ಮಾರಾಟ ಕೇಂದ್ರವಾಗಬಾರದು ಕೃಷಿ ಅಧಿಕಾರಿಗಳಿಗೆ ಶಿವಾನಂದ ಪಾಟೀಲ ಎಚ್ಚರಿಕೆ.

ಚಳಗೇರಿ ಟೋಲ್ ಪ್ಲಾಜ್ ವತಿಯಿಂದ ಚಳಗೇರಿ ಹೆರಿಗೆ ಆಸ್ಪತ್ರೆಗೆ ವೈದ್ಯಕೀಯ ಉಪಕರಣ ಕೊಡುಗೆ.

ಪರಮ ಭ್ರಷ್ಟ ಲಂಚಾವತಾರಿ ಸಂವಿಧಾನ ವಿರೋಧಿ ವೈದ್ಯ ಡಾ” ಪರಮೇಶ್ವರಪ್ಪ ಅಮಾನತಗೆ ಆಗ್ರಹ

ರಾಣೆಬೇನ್ನೂರು:  ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಾಕ್ಟರ್ ಪರಮೇಶಪ್ಪ ಹಾಗೂ ಸಿಬ್ಬಂದಿ ಪ್ರವೀಣ್ ರೋಗಿಗಳ ಮೂಲಕ ಲಂಚ ಪಡೆದಿರುವ ವಿಡಿಯೋ ವೈರಲ್ ಆಗಿದ್ದು ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು.

ನಗರದ ಹಲಗೇರಿ ರಸ್ತೆಯಲ್ಲಿ ಇರುವ ಸರ್ಕಾರಿ ಆಸ್ಪತ್ರೆ ಯಲ್ಲಿ ರೈತ ಸಂಘಟನೆಯ ಹಾಗೂ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಇವರ ನೇತೃತ್ವದಲ್ಲಿ ವೈದ್ಯ ಡಾ” ಪರಮೇಶಪ್ಪ ಅವರು ಲಂಚದ ಹಣ ತೆಗೆದುಕೊಂಡು ಸಿಕ್ಕುಬಿದ್ದಿದ್ದಾರೆ ಇವರನ್ನು ಕೂಡಲೇ ಕೆಲಸದಿಂದ ವಜಗೊಳಿಸಬೇಕು ಎಂದು ವಿವಿಧ ರೀತಿಯ ಸಂಘಟನೆಗಳು ಸೇರಿ ಬೃಹತ್ ಪ್ರತಿಭಟನೆ ಆಸ್ಪತ್ರೆಯ ಅಧಿಕಾರಿಗಳಿಗೆ  ಮನವಿ ಪತ್ರ ಸಲ್ಲಿಸಲಾಯಿತು

ನಂತರ ರವೀಂದ್ರಗೌಡ ಪಾಟೀಲ ಮಾತನಾಡಿ ಡಾ” ಪರಮೇಶಪ್ಪ ಅವರು ಆಸ್ಪತ್ರೆಗೆ ಬರುವ ಸಾರ್ವಜನಿಕರು ತೋರಿಸಿಕೊಂಡು ಆಪರೇಷನ್ ಮಾಡಿಸಿಕೊಳ್ಳುವ ಪೇಷಂಟಿಗೆ ತಮ್ಮ ಆಸ್ಪತ್ರೆಯ ಸಿಬ್ಬಂದಿಯಾದ ಪ್ರವೀಣ್ ಎಂಬ ವ್ಯಕ್ತಿಯಿಂದ ಸಾರ್ವಜನಿಕರು ಒಂದು ಆಪರೇಷನ್ ಗೆ ಐದರಿಂದ ಹತ್ತು ಸಾವಿರ ರೂಪಾಯಿಗಳ ಲಂಚ ಕೊಟ್ಟು ಆಪರೇಷನ್ ಮಾಡಿಸಿಕೊಳ್ಳಬೇಕು ಹಾಗೂ ಇದೇ ತರ ಹಲವಾರು ಇವರ ಬಗ್ಗೆ ಕಂಪ್ಲೇಂಟ್ ಇವೆ ಯಾವ ಆಸ್ಪತ್ರೆಯಲ್ಲಿ ಹೋದರು ಇವರ ಬಗ್ಗೆ ಕಂಪ್ಲೇಂಟ್ ಇರುತ್ತದೆ ಹಾಗೂ ಸರ್ಕಾರದಿಂದ ನಡೆಯುವ ಸ್ವಾತಂತ್ರ ದಿನಾಚರಣೆ ಹಾಗೂ ಇನ್ನಿತರೇ ಕಾರ್ಯಕ್ರಮದಲ್ಲಿ ಡಾ” ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರ ಇಡದೆ ಕಾರ್ಯಕ್ರಮ ಮಾಡುತ್ತಾರೆ ಕೇಳಲು ಹೋದವರ ಮೇಲೆ ಅನವಶ್ಯಕ ಕಾರಣ ಹೇಳಿ ಕೇಸ್ ಮಾಡಿಸುತ್ತಾರೆ ಸಾರ್ವಜನಿಕರು ಆಸ್ಪತ್ರೆಗೆ ಬಂದು ಡಾಕ್ಟರ್ ಬಿಟ್ಟೆ ಆಗಬೇಕಾದರೆ ಸಾರ್ವಜನಿಕರ ಜೊತೆ ಅಶಬ್ದವಾಗಿ ನಡೆದುಕೊಳ್ಳುತ್ತಾರೆ ಕೊರೋನಾ ಬಂದ ಸಂದರ್ಭದಲ್ಲಿ ಯಾವ ಒಬ್ಬ ಹೋಗಿಯನ್ನು ಮುಟ್ಟಿ ನೋಡದೆ ಆಸ್ಪತ್ರೆಯಲ್ಲಿರುವ ನರ್ಸ್ ಹಾಗೂ  ಕಸಗೂಡಿಸುವವರಿಂದ ಮುಟ್ಟಿ ನೋಡು ಮುಟ್ಟಿ ನೋಡಿ ಅವರಿಗೆ ಏನಾಗಿದೆ ನೋಡಿ ಎಂದು ಹೇಳಿ ಕೊರೋನಾ ಟೈಮ್ನಲ್ಲಿ ಮರಣ ಹೊಂದಿದವರಿಗೆ ಇವರೇ ಕಾರ್ಣಿಭೂತರಾಗಿರುತ್ತಾರೆ ಇಂಥ ಒಬ್ಬ ಬೇಜವಾಬ್ದಾರಿ ವೈದ್ಯರಾದ ಡಾಕ್ಟರ್ ಪರಮೇಶಪ್ಪ ಅವರನ್ನು ಕೂಡಲೇ ಕೆಲಸದಿಂದ ಸಸ್ಪೆಂಡ್ ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು

ನಿತ್ಯಾನಂದ ಕುಂದಾಪುರ ಮಾತನಾಡಿ ಸರ್ಕಾರಿ ಆಸ್ಪತ್ರೆಯ ಡಾಕ್ಟರ ಪರಮೇಶಪ್ಪ ಅವರನ್ನು ಕೆಲಸದಿಂದ ನಿವೃತ್ತಿಗೊಳಿಸಬೇಕು ಏಕೆಂದರೆ ಇವರು ಕೆಲಸದ ವೃತ್ತಿ ಮಾಡುತ್ತಿರುವಾಗ ಮಾಧ್ಯಮದವರ ಮುಖಾಂತರ ಹಣ ತೆಗೆದುಕೊಂಡು ಸಿಕ್ಕಿಬಿದ್ದಿರುವುದು ಇಡೀ ರಾಜ್ಯವೇ ನೋಡುತ್ತಿದೆ ಸರ್ಕಾರ ಇವರಿಗೆ ಲಕ್ಷಣ ಗಂಟಲೆ ಪಗಾರ ಕೊಟ್ಟು ಸಾರ್ವಜನಿಕರ ಸೇವೆ ಮಾಡು ಎಂದರೆ ಸಾರ್ವಜನಿಕರ ರಕ್ತ ಹಿಂಡುತ್ತಿರುವ ಇಂಥ ವೈದ್ಯರು ನಮ್ಮ ಆಸ್ಪತ್ರೆಗೆ ಬೇಕಾಗಿರುವುದಿಲ್ಲ ಇಂಥವರನ್ನ ನೀರು ನೆರಳು ಇಲ್ಲದ ಕಡೆ ವೈದ್ಯಕೀಯ ವೃತ್ತಿಗೆ ಹಾಕಬೇಕು ಆಗಲೇ ಇಂತವರಿಗೆ ಬುದ್ಧಿ ಬರುವುದು ನಾವು ಈ ಆಸ್ಪತ್ರೆ ಸೂಚರ್ಜಿತವಾಗಿರಲು ಅನೇಕ ಹೋರಾಟಗಳನ್ನು ಮಾಡುತ್ತಾ ಬಂದಿದ್ದೇವೆ ಇವತ್ತು ಆಸ್ಪತ್ರೆ ಈ ಮಟ್ಟಕ್ಕಿದೆ ಅಂದರೆ ರಾಣೇಬೆನ್ನೂರು ತಾಲೂಕಿನಲ್ಲಿರುವ ಎಲ್ಲಾ ಕನ್ನಡಪರ ಸಂಘಟನೆ ಆಗಿರಬಹುದು ರೈತ ಪರ ಸಂಘಟನೆ ಹಲವಾರು ವಿವಿಧ ರೀತಿಯ ಸಂಘಟನೆ ಆಗಿರಬಹುದು ಶ್ರಮವಹಿಸಿದಾಗಲೇ ಇಂತಹ ಆಸ್ಪತ್ರೆ ನಿರ್ಮಾಣವಾಗಲು ಸಾಧ್ಯ ಇಂಥವರಿಗೆ ಏನು ಗೊತ್ತು ಲಂಚದ ಹಣ ತೆಗೆದುಕೊಂಡು ಜೀವನ ಸಾಗಿಸುತ್ತಿರುವವರಿಗೆ ಇಂಥವರನ್ನು ಕೂಡಲೇ ಕೆಲಸದಿಂದ ವಜಗೊಳಿಸಿ , ನಮ್ಮ ಆಸ್ಪತ್ರೆಗೆ ಒಳ್ಳೆಯ ವೈದ್ಯಾಧಿಕಾರಿಗಳನ್ನು ನೇಮಿಸಬೇಕೆಂದು ಅಧಿಕಾರಿಗಳಿಗೆ ತಿಳಿ ಹೇಳುವುದರ ಮುಖಾಂತರ ಆಕ್ರೋಶ ವ್ಯಕ್ತಪಡಿಸಿದರು

 

ಇನ್ನೂ ಹಲವಾರು ವಿವಿಧ ರೀತಿಯ ಸಂಘಟನೆಗಳು ಮಾತನಾಡಿ ಡಾಕ್ಟರ್ ಪರಮೇಶ್ವರ ಲಂಚದ ಹಣ ತೆಗೆದುಕೊಂಡ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಸಾರ್ವಜನಿಕರ ಜೀವ ಹಿಂಡುತ್ತಿರುವ ಹಿತ ವೈದ್ಯಾಧಿಕಾರಿ ನಮ್ಮ ಆಸ್ಪತ್ರೆಗೆ ಬೇಕಾಗಿರುವುದಿಲ್ಲ ಇಂಥವರನ್ನ ಕೂಡಲೇ ಸಸ್ಪೆಂಡ್ ಮಾಡಿ ನಮ್ಮ ಆಸ್ಪತ್ರೆಗೆ ಒಳ್ಳೆಯ ವೈದ್ಯಾಧಿಕಾರಿಗಳನ್ನು ನೇಮಿಸಿ ಕೊಡಬೇಕೆಂದು ಅಧಿಕಾರಿಗಳಲ್ಲಿ ವಿನಂತಿಸಿಕೊಂಡರು

 

ಈ ಸಂದರ್ಭದಲ್ಲಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಸಂಚಾಲಕರಾದ ಮಲ್ಲಿಕಾರ್ಜುನ್ ಸಾವಕ್ಕಳವರ, ಸಂಜೀವ್ ಕನವಳ್ಳಿ, ಪಾಲಾಕ್ಷಪ್ಪ ಕಡೆಮನಿ, ಚಂದ್ರಪ್ಪ ಬಣಕಾರ್, ಪರಶುರಾಮ ಕುರುವತ್ತಿ,  ರಿಯಾಜ್ ದೊಡ್ಡಮನಿ,  ಕೊಟ್ರೇಶಪ್ಪ ಎಮ್ಮೆ, ಸಿದ್ದಾರೂಢ ಗುರುಂ,  ಗೋಪಿ ಕುಂದಾಪುರ ರಮೇಶ್ ಕನ್ನಪ್ಪನವರ,  ತಿರುಕಪ್ಪ ಹುಲಿಕಟ್ಟಿ, ರೈತ ಸಂಘಟನೆ ಅವರು ವಿವಿಧ ರೀತಿಯ ಕನ್ನಡಪರ ಸಂಘಟನೆಯವರು ಸಾರ್ವಜನಿಕರು ಮತ್ತು ಇತರರು ಉಪಸ್ಥಿತರಿದ್ದರು.

ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!