ರಾಣೆಬೇನ್ನೂರು: ಮನುಷ್ಯ ಶವವಾದ ನಂತರ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಸ್ಮಶಾನ ಜಾಗ ಎಂಬ ಬೇಕು ಆದರೆ ಈ ಗ್ರಾಮದಲ್ಲಿ ಈವರೆಗೂ ಸ್ಮಶಾನ ಜಾಗವಿಲ್ಲದೆ ಇಲ್ಲಿನ ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಹೌದು ರಾಣೆಬೇನ್ನೂರು ತಾಲೂಕಿನ ಮುದೇನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷ್ಣಾಪುರ ಎಂಬ ಗ್ರಾಮದಲ್ಲಿ ಸುಮಾರು ನೂರು ವರ್ಷ ಕಳೆದರು ಸ್ಮಶಾನ ಜಾಗವೇ ಇಲ್ಲಿಲ್ಲ.
ಗ್ರಾಮದಲ್ಲಿ ಪರಿಶಿಷ್ಟ ಪಂಗಡ ಸಮುದಾಯ ಹೆಚ್ಚಿರುವ ಪುಟ್ಟ ಗ್ರಾಮಕ್ಕೆ ಸ್ವಾತಂತ್ರ್ಯ ಸಿಕ್ಕು 76 ವರ್ಷವಾದರೂ ಇದುವರೆಗೂ ಸ್ಮಶಾನ ಇಲ್ಲದೆ ಇರುವುದು ದುರ್ದೈವದ ಸಂಗತಿ. ಮನುಷ್ಯ ಮೃತಪಟ್ಟಾಗ ಆತನನ್ನು ಗೌರವಿತವಾಗಿ ಶವ ಸಂಸ್ಕಾರ ಮಾಡ್ಲಿಕ್ಕೆ ಆದರೂ ಕೂಡ ಸರಕಾರ ಸ್ಮಶಾನಕ್ಕೆ ಜಾಗವನ್ನು ಕರದಿಸಿ ಸ್ಮಶಾನವನ್ನು ನಿರ್ಮಿಸಿ ಕೊಡಬೇಕೆಂಬ ಆದೇಶ ಇದೆ ಹೀಗಿದ್ದರೂ ಕೂಡ ಇದುವರೆಗೂ ಸರಕಾರಗಳು ನಿರ್ಲಕ್ಷ್ಯ ಮಾಡಿರುವುದನ್ನು ಖಂಡಿಸಿ ಮತ್ತು ತಾಲೂಕಿನ ಪತ್ತೇಪುರ, ಕೂಸುಗಟ್ಟಿ, ನಾಗೇನಹಳ್ಳಿ ಸೇರಿದಂತೆ ತುಂಗಭದ್ರ ನದಿ ಪಾತ್ರದಲ್ಲಿ ಗ್ರಾಮಗಳಿಗೆ ಇದುವರೆಗೂ ಸ್ಮಶಾನ ಇಲ್ಲ. ಮೃತಪಟ್ಟವರನ್ನು ತುಂಗಭದ್ರ ನದಿ ಪಾತ್ರದಲ್ಲಿ ಊತು ಆ ಪವಿತ್ರವಾದ ತುಂಗಭದ್ರೆಯನ್ನು ಮಲ್ಲಿನಗೊಳಿಸ್ತಕ್ಕಂತ ಕಾರ್ಯ. ಹೆಗ್ಗಿಲ್ಲದೆ ನಡೆಯುತ್ತಿದ್ದರೂ ಕೂಡ ಸರ್ಕಾರಗಳು ಮಾತ್ರ ತಮಗೆ ಸಂಬಂಧವಿಲ್ಲ ವೆನ್ನುವಂತೆ ವರ್ತಿಸುತ್ತಿರುವುದು ದುರಂತದ ಸಂಗತಿ.
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.