ರಾಣೆಬೇನ್ನೂರು: ನಗರದ ಹಿರಿಯ ವಕೀಲರು ಹಾಗೂ ಬ್ರಾಹ್ಮಣ ಸಮಾಜದ ಹಿರಿಯ ಮುಖಂಡರಾದ ಸಿ.ಎಂ.ಕುಲಕರ್ಣಿ ಅವರು ವಯೋಸಹಜದಿಂದ ಇಂದು ನಿಧನರಾದರು.
ಸಿ.ಎಂ. ಕುಲಕರ್ಣಿ ವಕೀಲರು 1956 ರಲ್ಲಿ ವಕಿಲವೃತ್ತಿಯನ್ನು ಪ್ರಾರಂಭಿಸಿ ಸುಮಾರು 64 ವರ್ಷಗಳ ಸುದೀರ್ಘ ನ್ಯಾಯವಾದಿಗಳಾಗಿ ಯಶಸ್ವಿ ಕಾರ್ಯನಿರ್ವಹಿಸಿದ್ದಾರೆ. ಹಾಗೂ ಅನೇಕ ಸಂಘ ಸಂಸ್ಥೆಗಳ ಹಾಗೂ ಅನೇಕ ಬ್ಯಾಂಕುಗಳಿಗೆ ಕಾನೂನು ಸಲೆಹೆಗಾರರಾಗಿ ಮತ್ತು ಸಮಾಜದ ಎಲ್ಲಾ ವರ್ಗದವರೊಂದಿಗೆ ಸಾಂದರ್ಭಿಕವಾಗಿ ಸಲಹೆ ಸೂಚನೆ ಕೊಡುತ್ತಾ ಯಶಸ್ವಿ ಜೀವನ ನಡೆಸಿದ ಅವರು ಹಾವೇರಿ ನಗರದ ಪುರಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಮೃತರು ನಾಲ್ವರು ಪುತ್ರಿಯರು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಅಪಾರ ಕಕ್ಷಿದಾರರನ್ನು ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ರಾಣೇಬೆನ್ನೂರು ನಗರದ ಸಿದ್ದೇಶ್ವರ ನಗರದಲ್ಲಿರುವ ಬ್ರಾಹ್ಮಣ ಸಮಾಜದ ರುದ್ರಭೂಮಿಯಲ್ಲಿ ಸಂಜೆ 5.30 ನಿಮಿಷಕ್ಕೆ ನೆರವೇರಲಿದೆ ಎಂದು ಕುಟುಂಬದ ಮೂಲದವರು ತಿಳಿಸಿದ್ದಾರೆ.
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.