ರಾಣೆಬೇನ್ನೂರ: ನಗರದ ಸಿದ್ದಗಂಗಾ ಆಸ್ಪತ್ರೆಯ ಖ್ಯಾತ ಹೃದಯ ರೋಗ ತಜ್ಞರು, ಪಿಜಿಷಿಯನ್, ಸರ್ಕಾರಿ ವೈದ್ಯರಾದ ಡಾ.ನಾಗರಾಜ ಎಸ್.ಕೆ ಅವರಿಗೆ ಕರ್ನಾಟಕ ಹೆಲ್ತ್ ಕೇರ್ ಅಡಿಯಲ್ಲಿ ನೀಡುವ “ವೈದ್ಯ ವಿಭೂಷಣ” ಅವಾರ್ಡ್ ಪ್ರಶಸ್ತಿ ಲಭಿಸಿದೆ
ಆರೋಗ್ಯ ಸೇವೆಯಲ್ಲಿನ ಶ್ರೇಷ್ಠತೆ, ಜನಪರ ಕಾಳಜಿ, ರಕ್ತದಾನ ಹಾಗೂ ಆರೋಗ್ಯ ಶಿಬಿರ ಸೇರಿದಂತೆ ಇತರೆ ಸೇವೆಗಳನ್ನು ಗುರುತಿಸಿ ಕರ್ನಾಟಕ ಹೆಲ್ತ್ ಕೇರ್ ಸಂಸ್ಥೆಯು ಬೆಂಗಳೂರಿನಲ್ಲಿ ಇತ್ತಿಚೆಗೆ ಪ್ರಶಸ್ತಿಯನ್ನು ನೀಡಿದೆ.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಡಾ.ಎಸ್.ಕೆ.ನಾಗರಾಜ ಅವರು ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ಈ ವೇಳೆ ಡಾ.ಅಂಜಿನಪ್ಪ, ಪದ್ಮಶ್ರೀ ಡಾ.ಕಾಮಿನಿರಾವ್, ಡಿವೈಎಸ್ಪಿ ರಾಜೇಶ್ ಎಲ್.ವೈ, ರೇವತಿ ಕಾಮತ್, ಪ್ರಶಾಂತ ಪ್ರಶಸ್ತಿ ಪ್ರಧಾನ ಮಾಡಿದರು.
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.