ರಾಣೆಬೇನ್ನೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದಾರ್ತಿ ಅವರ ರಾಣೆಬೆನ್ನೂರ ಶಿವಾಜಿ ನಗರದ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಅವರ ನಿವಾಸದಲ್ಲಿ 15 ಲಕ್ಷ ರೂ. ನಗದು ಸೇರಿದಂತೆ ಅಪಾರ ಪ್ರಮಾಣದ ಆಸ್ತಿ ಪತ್ರಗಳು, ಚಿನ್ನಾಭರಣ ಪತ್ತೆಯಾಗಿದೆ.
ಲೋಕಾಯುಕ್ತ ಪೊಲೀಸರ ತಂಡ ಆಲದಾರ್ತಿಯ ಹಾವೇರಿಯ ಕಚೇರಿ ಹಾಗೂ ಇತರೆಡೆಗಳಲ್ಲಿ ದಾಳಿ ನಡೆಸಿದ್ದರು. ಆಲದಾರ್ತಿಯ ರಾಣೆಬೆನ್ನೂರಿನ ಮನೆಗೆ ಹೋಗಿದ್ದ ವೇಳೆ ಅವರು ಮನೆಗೆ ಬೀಗ ಹಾಕಿಕೊಂಡು ಹುಟ್ಟೂರು ಯಾದಗಿರಿಗೆ ತೆರಳಿದ್ದು ಗೊತ್ತಾಗಿತ್ತು. ಹಾಗಾಗಿ, ಲೋಕಾಯುಕ್ತ ಸಿಬ್ಬಂದಿ ಅವರ ಮನೆಯ ಎದರಲ್ಲೇ ಕಾಯುತ್ತ ಕುಳಿತಿತ್ತು. ಆಲದಾರ್ತಿ ಬುಧವಾರ ನಸುಕಿನ ಜಾವ ಬರುತ್ತಿದ್ದಂತೆ ಮನೆಯ ಮೇಳೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳ ತಂಡ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಶ್ರೀನಿವಾಸ ಆಲದಾರ್ತಿ ಮನೆಯಲ್ಲಿ 15 ಲಕ್ಷ ರೂ. ನಗದು ಪತ್ತೆಯಾಗಿದೆ. ರಾಣೆಬೆನ್ನೂರಿನಲ್ಲಿ ಮೂರು ಅಂತಸ್ತಿನ ಮನೆ, ಸುರಪುರದಲ್ಲಿ 1 ಮನೆ, ರಾಣೆಬೆನ್ನೂರ, ಧಾರವಾಡ, ಸುರಪುರ, ಕಲಬುರಗಿಯಲ್ಲಿ 5 ಸೈಟುಗಳು, ಕಲಬುರಗಿಯಲ್ಲಿ 10 ಎಕರೆ ಜಮೀನಿನ ಕಾಗದ ಪತ್ರಗಳು, ದಾಖಲೆಗಳು ಸಿಕ್ಕಿವೆ. 150 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ, ಬ್ಯಾಂಕ್ಗಳಲ್ಲಿ 20 ಲಕ್ಷ ರೂ. ಡೆಪಾಸಿಟ್ ಮಾಡಿರುವ ದಾಖಲೆಗಳು, ಸೇರಿದಂತೆ ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿದೆ. ಈ ಕುರಿತು ಪರಿಶೀಲನೆ ಮುಂದುವರಿದಿದೆ ಎಂದು ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ ಬಿ.ಪಿ. ತಿಳಿಸಿದ್ದಾರೆ.
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.