ರಾಣೆಬೇನ್ನೂರು: ಮಾಜಿ ಸಚಿವ ಆರ್.ಶಂಕರ್ ಅಧಿಕೃತವಾಗಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕಳೆದ ಮೂರು ವರ್ಷದಲ್ಲಿ ಬಿಜೆಪಿ, ಎನ್.ಸಿ.ಪಿ ಪಕ್ಷಕ್ಕೆ ಸೇರ್ಪಡೆಯಾಗಿ ಇದೀಗ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬಲ ತುಂಬಿದ್ದಾರೆ.
ಅಲ್ಲದೆ ಲೋಕಸಭಾ ಚುನಾವಣೆ ಅಭ್ಯರ್ಥಿಯಾಗಿರುವ ಗಡ್ಡದೇವರಮಠ ಪರವಾಗಿ ರಾಣೆಬೇನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪರ ಕ್ಯಾಂಪೇನ್ ಮಾಡಲು ಸಿದ್ದರಾಗಿರುವುದು ವಿಶೇಷ.
ಪ್ರಕಾಶ-ಶಂಕರ ಜೋಡೆತ್ತು…
ರಾಣೆಬೇನ್ನೂರು ವಿಧಾನಸಭಾ ಕ್ಷೇತ್ರದ ರಾಜಕೀಯದಲ್ಲಿ ಹಾವು-ಮುಂಗಸಿ ತರ ಕಾದಾಟ ನಡೆಸಿದ್ದ ಆರ್.ಶಂಕರ್ ಹಾಗೂ ಕೆ.ಬಿ.ಕೋಳಿವಾಡರ ಕುಟುಂಬ ಇದೀಗ ಹೊಂದಾಣಿಕೆ ಮೂಲಕ ಕ್ಷೇತ್ರದಲ್ಲಿ ರಾಜಕೀಯಕ್ಕೆ ಹೊಸ ನಾಂದಿ ಹಾಡಲಾಗಿದೆ. ಈಗ ಕೋಳಿವಾಡರ ಮಗ ಪ್ರಕಾಶ ಶಾಸಕರಾಗಿರುವ ಹಿನ್ನಲೆ ಆರ್.ಶಂಕರ್ ಜತೆ ಕೆಲಸ ಮಾಡುವ ಮೂಲಕ ಕ್ಷೇತ್ರದಲ್ಲಿ ಜೋಡೆತ್ತು ಆಗುತ್ತಾರೆ ಎಂಬುದು ಜನರ ನಿರೀಕ್ಷೆ.
More Stories
ಶಾಸಕರ ಆಪ್ತಸಹಾಯಕ ಮನೆಯಲ್ಲಿ 21.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ
ಹೆಂಡತಿ ಕತ್ತು ಕೊಯ್ದು ಕೊಲೆಗೆ ಯತ್ನಿಸಿದ ಪತಿರಾಯ..
ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಯುದ್ಧ ಟ್ಯಾಂಕರ್ ಸ್ಥಾಪನೆ ರಾಣೆಬೇನ್ನೂರು ಹೆಮ್ಮೆ; ಸಭಾಧ್ಯಕ್ಷ ಯು.ಟಿ.ಖಾದರ