ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!

ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ

ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.

ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಮತ್ತು‌ ವೃತ್ತ ಲೋಕಾರ್ಪಣೆ ನಾಡಿದ್ದು

ರಾಣೆಬೇನ್ನೂರ ತಾಲೂಕ ಹಸಿರಿಕರಣಕ್ಕೆ “ಟ್ರೀ ಪಾರ್ಕ್” ಶಾಸಕ ಪ್ರಕಾಶ ಕೋಳಿವಾಡ

ನಗರಸಭೆ ನೂತನ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ರಮೇಶ ಕರಡೆಣ್ಣನವರ ಆಯ್ಕೆ.

ಅಗಡಿ ತೋಟಕ್ಕೆ ಹೊರಟ್ಟವರು ಕೈಲಾಸಕ್ಕೆ ಹೋದರು, ಮೃತಪಟ್ಟವರ ವಿವರ ಇಲ್ಲಿದೆ.

ಮೋಟೆಬೆನ್ನೂರು ಬಳಿ ಭೀಕರ ಅಪಘಾತ, ರಾಣೆಬೇನ್ನೂರು ನಗರದ ಆರು ಜನ ಸಾವು.

ಪರಮ ಭ್ರಷ್ಟ ಲಂಚಾವತಾರಿ ಸಂವಿಧಾನ ವಿರೋಧಿ ವೈದ್ಯ ಡಾ” ಪರಮೇಶ್ವರಪ್ಪ ಅಮಾನತಗೆ ಆಗ್ರಹ

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾವೇರಿಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲತ್ತೆ: ಸಿ.ಎಂ ಭರವಸೆ

ರಾಹುತನಕಟ್ಟಿ ಗ್ರಾಪಂ ಮತ್ತೆ ಬಿಜೆಪಿ ಬೆಂಬಲಿತರ ತೆಕ್ಕೆಗೆ.

ಸ್ಮಶಾನ ಜಾಗಕ್ಕಾಗಿ ತಾಲೂಕಿನ ಕೃಷ್ಣಾಪುರ ಗ್ರಾಮಸ್ಥರಿಂದ ಸಿಎಂಗೆ ಕಪ್ಪು ಪಟ್ಟಿ‌ ಪ್ರದರ್ಶನಕ್ಕೆ ಸಜ್ಜು.

ತಂದೆ ಶವ ಮನೆಯಲ್ಲಿಟ್ಟು ಕಣ್ಣೀರಿಡುತ್ತ ಪರೀಕ್ಷೆ ಬರೆದ ಅಣ್ಣ-ತಂಗಿಗೆ ಉತ್ತಮ ಅಂಕ; ತಂಗಿಗೆ ಶೇ. 83 ಅಣ್ಣನಿಗೆ ಶೇ. 85ರಷ್ಟು ಅಂಕ

ಶಿವಾನಂದ ಪಾಟೀಲ ರಾಜೀನಾಮೆ ಪತ್ರದಲ್ಲಿ ಏನು ಹೇಳಿದ್ದಾರೆ.

ಮೆಡ್ಲೇರಿ ರಸ್ತೆಯಿಂದ ಹುಣಸಿಕಟ್ಟಿ ತನಕ ಇಂದು ರಾತ್ರಿ ವಿದ್ಯುತ್ ಸರಬರಾಜು ಡೌಟು..

ಕಿತ್ತಾಟ, ಕಿರಚಾಟ ನಡುವೆ ನಗರಸಭೆ ಸ್ಥಾಯಿ ಸಮಿತಿಗೆ ಅನುಮೋದನೆ.

ಇಸ್ವತ್ತು ಉತಾರ ನೀಡಲು ಲಂಚ ಪಡೆಯುತ್ತಿದ್ದ ಪಿಡಿಓ, ಉಪಾಧ್ಯಕ್ಷ ಸೇರಿ ಮೂರ ಜನ ಗ್ರಾಪಂ ಸದಸ್ಯರ ಬಂಧನ.

ರಷ್ಯಾದಲ್ಲಿ ಡಾ.ನಾಗರಾಜ ಎಸ್.ಕೆ ಅವರಿಗೆ ಗ್ಲೋಬಲ್ ಅಚಿವರ್ಸ್ ಪ್ರಶಸ್ತಿ.

ಐಎಎಸ್‌ ಪಾಸ್ ಮಾಡಿದ ಸಚಿನ ಗುತ್ತೂರುಗೆ ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿ ಅದ್ದೂರಿ ಸ್ವಾಗತ..

ಟ್ರ್ಯಾ ಕ್ಟರ್‌ನಿಂದ ಬಿದ್ದು ಅಣ್ಣಾ-ತಮ್ಮಾ ಸಾವು, ನಾಲ್ವರಿಗೆ ಗಂಭೀರ ಗಾಯ

ಕುರುಬ ಸಮಾಜವನ್ನು ಬಿಜೆಪಿ ಯಾಕೆ ವಿರೋಧ ಮಾಡುತ್ತದೆ, ಸಿದ್ದರಾಮಯ್ಯ ಜಾತ್ಯಾತೀತ; ನಾಯಕ ಮಾಜಿ ಸಚಿವ ಆರ್.ಶಂಕರ್

 

ರಾಣೆಬೇನ್ನೂರು: ರಾಜ್ಯದಲ್ಲಿ ಕುರುಬ ಸಮಾಜವನ್ನು ಹಾಗೂ ಹಿಂದುಳಿದ ಮುಖ್ಯಮಂತ್ರಿಯಾಗಿ ರಾಜ್ಯದ ಜಾತ್ಯಾತೀತ ನಾಯಕರಾಗಿ ಬೆಳೆದಿರುವ ಸಿಎಂ ಸಿದ್ದರಾಮಯ್ಯ ಅವರನ್ನು ಕುತಂತ್ರದಿಂದ ಕೆಳಗಿಳಿಸಲು ಬಿಜೆಪಿ ಮುಖಂಡರು ಹಾಗೂ ಜೆಡಿಎಸ್ ಷಡ್ಯಂತರದ ವಿರುದ್ಧ ರಾಜ್ಯಾದ್ಯಂತ ಕುರುಬ ಸಮಾಜ ಸೇರಿ ಇತರ ವರ್ಗದವರೊಂದಿಗೆ ಉಗ್ರ ಹೋರಾಟ ಕೈಗೊಳ್ಳಲಾಗುವುದೆಂದು ಮಾಜಿ ಸಚಿವ ಆರ್ ಶಂಕರ್ ಎಚ್ಚರಿಸಿದರು.

ಗುರುವಾರದಂದು ಸ್ಥಳೀಯ ಕುರಿ ಉಣ್ಣೆ ಸೊಸೈಟಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ಭಾಗಿಯಾಗಿಲ್ಲ. ಅವರ ಪತ್ನಿ ಪಾರ್ವತಿ ಹೆಸರಿನಲ್ಲಿ ಕಾನೂನು ರೀತಿಯ ನೋಟಿಫಿಕೇಶನ್ ಮೂಲಕ ಬದಲಿ ನಿವೇಶನಕ್ಕೆ ಸೈಟ್ ವಿತರಣೆಯಾಗಿದೆ. ಅದು ಬಿಜೆಪಿ ಸರ್ಕಾರದ 50 : 50 ಅನುಪಾತದಂತೆಯೇ ಆಗಿದೆ.

ಇದನ್ನೇ ತಿರುಚಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳು ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರ ಮಾಡುತ್ತಾ ಸರ್ಕಾರದ ಮೇಲೆ ಗೂಭೆ ಕೂರಿಸಲು ಮುಂದಾಗಿರುವುದು ವಿಷಾದನೀಯ ಎಂದರು.

ಮುಖ್ಯಮಂತ್ರಿ ಆಗಿ ಪ್ರಾಮಾಣಿಕವಾಗಿ ಉತ್ತಮ ಕೆಲಸ ಮಾಡುತ್ತಿದ್ದು ,ಇದನ್ನು ಸಹಿಸದೆ ಅವರ ಮೇಲೆ ಹುನ್ನಾರ ಮಾಡುವ ದೃಷ್ಟಿಯಿಂದ ಬೇರೆಯವರ ಹಗರಣಗಳನ್ನು ಅವರ ಮೇಲೆ ಗೂಭೆ  ಕೂರಿಸುವ ಷಡ್ಯಂತರ ನಡೆಯುತ್ತಿದೆ ಎಂದು ಆಪಾದಿಸಿದರು.

 

ಆಡಳಿತ ಮತ್ತು ವಿರೋಧ ಪಕ್ಷದ ಬಗ್ಗೆ ಜನರೇ ಮಾತನಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಜೆಡಿಎಸ್ ವಿರುದ್ಧ ಜನರು ಆಕ್ರೋಶಗೊಂಡಿದ್ದು , ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಮಾಡುತ್ತಿರುವ ವ್ಯವಸ್ಥಿತ ಹುನ್ನಾರ ಇದಾಗಿದೆ . ಇಂತಹ ಷಡ್ಯಂತ್ರಕ್ಕೆ ತಿರುಗೇಟು ನೀಡಲು ಸರ್ವ ಸಮಾಜದವರೊಂದಿಗೆ ರಾಜ್ಯದ್ಯಂತ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗಿದೆ  ಎಂದು ಶಂಕರ್ ಹೇಳಿದರು.

 

ಕುರುಬ ಸಮಾಜದ ರಾಜ್ಯ ಸದಸ್ಯ ಹಾಗೂ ಯುವ ನ್ಯಾಯವಾದಿ ಮೃತ್ಯುಂಜಯ ಗುದಗೇರ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಮೇಲಿನ ಆಪಾದನೆಗಳ ಬಗ್ಗೆ ಈಗಾಗಲೇ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಮೂಡಾ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವುದು ಇಡೀ ದೇಶದಲ್ಲಿ ಪ್ರಥಮವಾಗಿದೆ.

 

ಬಿಜೆಪಿ ಮತ್ತು ಜೆಡಿಎಸ್ ನವರು ಉದ್ದೇಶಪೂರ್ವಕವಾಗಿ ಅವರ ಮೇಲೆ ಇಲ್ಲಸಲ್ಲದ ಆರೋಪಹರಿಸುತ್ತಿದ್ದು, ಮೈತ್ರಿ ಪಕ್ಷಗಳಿಗೆ ತಪ್ಪಾಗಿ ಕಂಡು ಬಂದರೆ ಕಾನೂನು ಹೋರಾಟ ಮಾಡಲಿ ಅದಕ್ಕೆ ತಮ್ಮ ಅಭ್ಯಂತರವಿಲ್ಲ . ಅನಾವಶ್ಯಕವಾಗಿ ಈ ರೀತಿ ಮಾಡಿದರೆ, ಇದು ಹೀಗೆಯೇ ಮುಂದುವರೆದರೆ ರಾಜ್ಯಾದ್ಯಂತ ಕುರುಬ ಸಮಾಜದಿಂದ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಸಿದರು.

ಕುರುಬ ಸಮಾಜದ ತಾಲೂಕ ಅಧ್ಯಕ್ಷ ಷಣ್ಮುಖಪ್ಪ ಕಂಬಳಿ, ಶಿವಪ್ಪ ಮಣೇಗಾರ್ , ಆನಂದ ಹುಲಬನ್ನಿ, ಮೂರ್ತೆಪ್ಪ ಕಂಬಳಿ ,  ಸಿದ್ದಪ್ಪ ದೇವರಗುಡ್ಡ, ರವಿರಾಜ್ ಹುಲಗಮ್ಮನವರ್, ಪರ್ಸಪ್ಪ ಹುಲ್ಲತ್ತಿ, ಸಿದ್ದಪ್ಪ ಭಾಗಲವರ್  ಸೇರಿದಂತೆ ಮತ್ತಿತರರು ಇದ್ದರು

ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!